ಕವನ ಸಂಕಲನ ಬಿಡುಗಡೆ ಇಂದು

ಹಾವೇರಿ: ಕವಯತ್ರಿ ದೀಪಾ ಗೋನಾಳ ಅವರ ‘ತಂತಿಗೆ ತಂತಿ ತಾಗಿ’ ಎಂಬ ಕವನ ಸಂಕಲನದ ಬಿಡುಗಡೆ ಡಿ.20ರಂದು ಭಾನುವಾರ ಬೆಳಿಗ್ಗೆ 10:30ಕ್ಕೆ ಇಲ್ಲಿಯ ಹಂಚಿನಮನಿ ಆರ್ಟ್ ಗ್ಯಾಲರಿಯಲ್ಲಿ ಬಿಡುಗಡೆಯಾಗಲಿದೆ.
ಲೇಖಕ ಜಿ.ಎನ್. ಮೋಹನ್ ಕೃತಿ ಬಿಡುಗಡೆಗೊಳಿಸುವರು. ಬಿಡುಗಡೆ ಸಮಾರಂಭದಲ್ಲಿ ಸಾಹಿತಿ ಸತೀಶ ಕುಲಕರ್ಣ, ವಿದ್ಯಾದಾಯಿನಿ ಸಂಸ್ಥೆಯ ನಾಗೇಂದ್ರ ಕಟಕೋಳ, ಅಂಕಣಕಾರ್ತಿ ಹೇಮಾ ಡಿ. ಖುರ್ಸಾಪೂರ, ಯುವ ಕವಿ ರಾಜಕುಮಾರ ಮಡಿವಾಳರ, ಸಮಾಜ ಸೇವಕಿ ಶಾಲಿನಿ ಕಮ್ಮಾರ, ಅಂಚೆ ಇಲಾಖೆಯ ಹಿರಿಯ ಅಧಿಕಾರಿ ಆರ್.ಜೆ ಬ್ಯಾಟಪ್ಪನವರ ಹಾಗೂ ನಾಗರಾಜ ನಡುವಿನಮಠ ಪಾಲ್ಗೊಳ್ಳುವರು.
ಇಲ್ಲಿಯ ಪ್ರಧಾನ ಅಂಚೆ ಕಚೇರಿಯಲ್ಲಿ ಉದ್ಯೋಗಿಯಾಗಿರುವ ದೀಪಾ ಗೋನಾಳ ಅವರ ಮೊದಲ ಕವನ ಸಂಕಲನ ಇದಾಗಿದೆ.
ಪ್ರಜಾವಾಣಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.