ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕವನ ಸಂಕಲನ ಬಿಡುಗಡೆ ಇಂದು

Last Updated 19 ಡಿಸೆಂಬರ್ 2020, 16:18 IST
ಅಕ್ಷರ ಗಾತ್ರ

ಹಾವೇರಿ: ಕವಯತ್ರಿ ದೀಪಾ ಗೋನಾಳ ಅವರ ‘ತಂತಿಗೆ ತಂತಿ ತಾಗಿ’ ಎಂಬ ಕವನ ಸಂಕಲನದ ಬಿಡುಗಡೆ ಡಿ.20ರಂದು ಭಾನುವಾರ ಬೆಳಿಗ್ಗೆ 10:30ಕ್ಕೆ ಇಲ್ಲಿಯ ಹಂಚಿನಮನಿ ಆರ್ಟ್‌ ಗ್ಯಾಲರಿಯಲ್ಲಿ ಬಿಡುಗಡೆಯಾಗಲಿದೆ.

ಲೇಖಕ ಜಿ.ಎನ್. ಮೋಹನ್‌ ಕೃತಿ ಬಿಡುಗಡೆಗೊಳಿಸುವರು. ಬಿಡುಗಡೆ ಸಮಾರಂಭದಲ್ಲಿ ಸಾಹಿತಿ ಸತೀಶ ಕುಲಕರ್ಣ, ವಿದ್ಯಾದಾಯಿನಿ ಸಂಸ್ಥೆಯ ನಾಗೇಂದ್ರ ಕಟಕೋಳ, ಅಂಕಣಕಾರ್ತಿ ಹೇಮಾ ಡಿ. ಖುರ್ಸಾಪೂರ, ಯುವ ಕವಿ ರಾಜಕುಮಾರ ಮಡಿವಾಳರ, ಸಮಾಜ ಸೇವಕಿ ಶಾಲಿನಿ ಕಮ್ಮಾರ, ಅಂಚೆ ಇಲಾಖೆಯ ಹಿರಿಯ ಅಧಿಕಾರಿ ಆರ್.ಜೆ ಬ್ಯಾಟಪ್ಪನವರ ಹಾಗೂ ನಾಗರಾಜ ನಡುವಿನಮಠ ಪಾಲ್ಗೊಳ್ಳುವರು.

ಇಲ್ಲಿಯ ಪ್ರಧಾನ ಅಂಚೆ ಕಚೇರಿಯಲ್ಲಿ ಉದ್ಯೋಗಿಯಾಗಿರುವ ದೀಪಾ ಗೋನಾಳ ಅವರ ಮೊದಲ ಕವನ ಸಂಕಲನ ಇದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT