‘ಸ್ಫೋಟಕ ಬಳಸಲು ಜಿಲ್ಲಾಧಿಕಾರಿ ಅವರಿಂದ ಅನುಮತಿ ಪಡೆಯಲಾಗಿದೆ ಎಂದು ಕಾಮಗಾರಿ ನಡೆಸುತ್ತಿರುವವರು ಹೇಳಿದ್ದಾರೆ. ನಿಯಂತ್ರಿತ ಸ್ಫೋಟಕ ಬಳಕೆಗೆ ಎನ್ಒಸಿ ನೀಡಿದ್ದರೂ ನಿಯಮಗಳನ್ನು ಮೀರಿ ಹೆಚ್ಚುವರಿ ಸ್ಫೋಟಕ ಬಳಸಲಾಗಿದೆ. ಇದರಿಂದ ಭೂಕುಸಿತ ಉಂಟಾಗುವ ಸಾಧ್ಯತೆಗಳಿವೆ. ಕೆರೆಯಲ್ಲಿ ಹೂಳು ಹೆಚ್ಚುವ ಭೀತಿ ಇದೆ. ಅರಣ್ಯ ಇಲಾಖೆ ಹಾಗೂ ಪರಿಸರ ಇಲಾಖೆ ಅನುಮತಿ ನೀಡಿಲ್ಲ’ ಎಂದು ಖಡ್ಗ ಸಂಘದ ರಘು ದೂರಿದ್ದಾರೆ.