ಅನ್ವರ ಶೇಖ ಮೂಲತಃ ಸವಣೂರ ತಾಲ್ಲೂಕಿನ ಕಾರಡಗಿ ಗ್ರಾಮದ ನಿವಾಸಿಯಾಗಿದ್ದು, ಗೋವಾದಲ್ಲಿ ವಾಸವಾಗಿದ್ದ. ಗೋವಾದಲ್ಲಿ ಅವನ ವಿರುದ್ಧ ಹಲವಾರು ಪ್ರಕರಣಗಳು ದಾಖಲಾಗಿದ್ದು, ಅಲ್ಲಿಯೇ ರೌಡಿ ಪಟ್ಟಿಯಲ್ಲಿ ಅವನ ಹೆಸರು ಸೇರ್ಪಡೆಯಾಗಿತ್ತು. ಆಗಾಗ ಸ್ವ ಗ್ರಾಮಕ್ಕೆ ಬಂದು ಹಪ್ತಾ ವಸೂಲಿ ಮಾಡುತ್ತಿದ್ದ. ಸವಣೂರ ಪಟ್ಟಣದ ವಿ.ಕೃ. ಗೋಕಾಕ ವೃತ್ತದಲ್ಲಿರುವ ಇಮ್ರಾನ್ ಚೌಧರಿ ಗ್ಯಾರೇಜ್ ನುಗ್ಗಿ ಹಣ ಕಳವು ಮಾಡಿದ್ದ. ಗ್ಯಾರೇಜ್ ಮಾಲೀಕ ಇಮ್ರಾನ್ ಚೌಧರಿ ಅವನಿಗೆ ಕಾಯುತ್ತಿದ್ದ.