ಬಾಲಕಿಯನ್ನು ನಿತ್ಯ ಶಾಲೆಗೆ ವಾಹನದಲ್ಲಿ ಬಿಡುವುದು ಹಾಗೂ ಕರೆತರುವ ಮೂಲಕ ಪರಿಚಯ ಮಾಡಿಕೊಂಡ ಫಕ್ಕೀರೇಶ ಈರಪ್ಪ ಕಾಮನಹಳ್ಳಿ ಹಾಗೂ ಬಸವರಾಜ ರಾಮಪ್ಪ ಸಣ್ಣಪ್ಪನವರ ಎಂಬುವವರು ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ನೀರು ಕೇಳುವ ನೆಪದಲ್ಲಿ ಹೋಗಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದರು. ಈ ಬಗ್ಗೆ ಠಾಣೆಯಲ್ಲಿ ದೂರು ದಾಖಲಾಗಿತ್ತು.ಶಿಗ್ಗಾವಿ ವೃತ್ತ ನಿರೀಕ್ಷಕರು ದೋಷಾರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.