<p><strong>ಶಿಗ್ಗಾವಿ:</strong> ‘ಅಹಿಂಸಾ ತತ್ವದಿಂದ ಮನುಕುಲದ ಬದುಕು ಯಶಸ್ವಿಯಾಗಲು ಸಾಧ್ಯವಿದೆ ಎಂಬುವುದನ್ನು ತೋರಿಸಿದ ಮಹಾವೀರರ ಆದರ್ಶ ಚಿಂತನೆಗಳನ್ನು ಪ್ರತಿಯೊಬ್ಬರು ಪಾಲಿಸಬೇಕು. ಅದಕ್ಕೆ ಸಾತ್ವಿಕ ಬದುಕು ಅನುಸರಿಸಬೇಕು’ ಎಂದು ತಹಶೀಲ್ದಾರ್ ರವಿ ಕೊರವರ ಹೇಳಿದರು.</p>.<p>ಪಟ್ಟಣದ ತಹಶೀಲ್ದಾರ್ ಕಚೇರಿ ಆವರಣದಲ್ಲಿ ಗುರುವಾರ ತಾಲ್ಲೂಕು ಆಡಳಿತ, ತಾಲ್ಲೂಕು ಜೈನ್ ಸಮಾಜದ ಸಹಯೋಗದಲ್ಲಿ ನಡೆದ ಭಗವಾನ್ ಮಹಾವೀರ ಜಯಂತ್ಯುತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.</p>.<p>ತಾಲ್ಲೂಕು ಜೈನ್ ಸಮಾಜದ ಅಧ್ಯಕ್ಷ ರವಿ ಪಾಸರ್ ನೇತೃತ್ವ ವಹಿಸಿ ಮಾತನಾಡಿ, ‘ಭಗವಾನ್ ಮಹಾವೀರರು ಅಹಿಂಸಾ ಬೋಧನೆ ಒಂದು ಸಮಾಜಕ್ಕೆ ಸೀಮಿತವಾಗಿಲ್ಲ. ಅದು ಸರ್ವ ಸಮುದಾಯದ ಜನರಿಗೆ ಅನ್ವಯವಾಗುತ್ತಿದೆ. ಶಾಂತಿ, ನೆಮ್ಮದಿಗಾಗಿ ಅಹಿಂಸೆ ಮಾರ್ಗದಲ್ಲಿ ನಡೆಯುವುದು ಮುಖ್ಯವಾಗಿದೆ’ ಎಂದರು.</p>.<p>ಮುಖ್ಯ ಶಿಕ್ಷಕ ವರ್ಧನ ಛಬ್ಬಿ, ಶಿವಾನಂದ ಮ್ಯಾಗೇರಿ, ಭಾರತಿ ಚಬ್ಬಿ ಮಾತನಾಡಿದರು.</p>.<p>ಮುಂಡರಾದ ಮಹಾವೀರ ಧಾರವಾಡ, ಕುಭೇರಪ್ಪ ಸಿದ್ದಣ್ಣವರ, ಪ್ರಕಾಶ ಧರೆಪ್ಪನವರ, ಅಭಿನಂದ ಅವರಾದಿ, ಸುಧೀರ ಛಬ್ಬಿ, ವಿಶ್ವನಾಥ ಹರವಿ, ಕಾಳಪ್ಪ ಚ.ಬಡಿಗೇರ, ಅರ್ಜಪ್ಪ ಲಮಾಣಿ, ಬಸಲಿಂಗಪ್ಪ ನವಲಗುಂದ ಸೇರಿದತೆ ಜೈನ್ ಸಮಾಜದ ಅನೇಕ ಮುಖಂಡರು, ತಹಶೀಲ್ದಾರ್ ಕಚೇರಿ ಸಿಬ್ಬಂದಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿಗ್ಗಾವಿ:</strong> ‘ಅಹಿಂಸಾ ತತ್ವದಿಂದ ಮನುಕುಲದ ಬದುಕು ಯಶಸ್ವಿಯಾಗಲು ಸಾಧ್ಯವಿದೆ ಎಂಬುವುದನ್ನು ತೋರಿಸಿದ ಮಹಾವೀರರ ಆದರ್ಶ ಚಿಂತನೆಗಳನ್ನು ಪ್ರತಿಯೊಬ್ಬರು ಪಾಲಿಸಬೇಕು. ಅದಕ್ಕೆ ಸಾತ್ವಿಕ ಬದುಕು ಅನುಸರಿಸಬೇಕು’ ಎಂದು ತಹಶೀಲ್ದಾರ್ ರವಿ ಕೊರವರ ಹೇಳಿದರು.</p>.<p>ಪಟ್ಟಣದ ತಹಶೀಲ್ದಾರ್ ಕಚೇರಿ ಆವರಣದಲ್ಲಿ ಗುರುವಾರ ತಾಲ್ಲೂಕು ಆಡಳಿತ, ತಾಲ್ಲೂಕು ಜೈನ್ ಸಮಾಜದ ಸಹಯೋಗದಲ್ಲಿ ನಡೆದ ಭಗವಾನ್ ಮಹಾವೀರ ಜಯಂತ್ಯುತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.</p>.<p>ತಾಲ್ಲೂಕು ಜೈನ್ ಸಮಾಜದ ಅಧ್ಯಕ್ಷ ರವಿ ಪಾಸರ್ ನೇತೃತ್ವ ವಹಿಸಿ ಮಾತನಾಡಿ, ‘ಭಗವಾನ್ ಮಹಾವೀರರು ಅಹಿಂಸಾ ಬೋಧನೆ ಒಂದು ಸಮಾಜಕ್ಕೆ ಸೀಮಿತವಾಗಿಲ್ಲ. ಅದು ಸರ್ವ ಸಮುದಾಯದ ಜನರಿಗೆ ಅನ್ವಯವಾಗುತ್ತಿದೆ. ಶಾಂತಿ, ನೆಮ್ಮದಿಗಾಗಿ ಅಹಿಂಸೆ ಮಾರ್ಗದಲ್ಲಿ ನಡೆಯುವುದು ಮುಖ್ಯವಾಗಿದೆ’ ಎಂದರು.</p>.<p>ಮುಖ್ಯ ಶಿಕ್ಷಕ ವರ್ಧನ ಛಬ್ಬಿ, ಶಿವಾನಂದ ಮ್ಯಾಗೇರಿ, ಭಾರತಿ ಚಬ್ಬಿ ಮಾತನಾಡಿದರು.</p>.<p>ಮುಂಡರಾದ ಮಹಾವೀರ ಧಾರವಾಡ, ಕುಭೇರಪ್ಪ ಸಿದ್ದಣ್ಣವರ, ಪ್ರಕಾಶ ಧರೆಪ್ಪನವರ, ಅಭಿನಂದ ಅವರಾದಿ, ಸುಧೀರ ಛಬ್ಬಿ, ವಿಶ್ವನಾಥ ಹರವಿ, ಕಾಳಪ್ಪ ಚ.ಬಡಿಗೇರ, ಅರ್ಜಪ್ಪ ಲಮಾಣಿ, ಬಸಲಿಂಗಪ್ಪ ನವಲಗುಂದ ಸೇರಿದತೆ ಜೈನ್ ಸಮಾಜದ ಅನೇಕ ಮುಖಂಡರು, ತಹಶೀಲ್ದಾರ್ ಕಚೇರಿ ಸಿಬ್ಬಂದಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>