<p><strong>ಹಾವೇರಿ:</strong> ಜಿಲ್ಲೆಯ ಹಾನಗಲ್ ತಾಲ್ಲೂಕಿನ ಆಡೂರು ಠಾಣೆ ಪೊಲೀಸ್ ಸಿಬ್ಬಂದಿಯು ಥಲಸ್ಸೇಮಿಯಾ (ಆನುವಂಶಿಕ ರಕ್ತದ ಕಾಯಿಲೆ) ಪೀಡಿತ ಮಕ್ಕಳಿಗೆ ನೆರವು ಮತ್ತು ಅಪಘಾತದಲ್ಲಿ ಗಾಯಗೊಂಡವರ ಜೀವರಕ್ಷಣೆಗಾಗಿ ಆರು ವರ್ಷಗಳಿಂದ ರಕ್ತದಾನ ಮಾಡುತ್ತಿದ್ದಾರೆ.</p>.<p>2019ರಿಂದ 2025ರ ನಡುವೆ ಆರು ಶಿಬಿರಗಳನ್ನು ಆಯೋಜಿಸಿರುವ ಆಡೂರು ಠಾಣೆಯ ಪೊಲೀಸರು, 193 ಯೂನಿಟ್ (ಪ್ರತಿ ಯೂನಿಟ್ 450 ಎಂ.ಎಲ್.) ರಕ್ತದಾನ ಮಾಡಿದ್ದಾರೆ.</p>.<p>ಜಿಲ್ಲೆಯಲ್ಲಿ ಥಲಸ್ಸೇಮಿಯಾ ಪೀಡಿತ 183 ಮಕ್ಕಳಿದ್ದು ಇವರಲ್ಲಿ ಪೊಲೀಸ್ ಸಿಬ್ಬಂದಿಯ 12 ಮಕ್ಕಳೂ ಇದ್ದಾರೆ. ಅವರ ಚಿಕಿತ್ಸೆಗಾಗಿ ಪೊಲೀಸರಿಂದ ಸಂಗ್ರಹಿಸಿದ ರಕ್ತ ಬಳಕೆ ಆಗುತ್ತದೆ.</p>.<p>ಜಿಲ್ಲೆಯಲ್ಲಿ ತಿಂಗಳಿಗೆ 420 ಯೂನಿಟ್ ರಕ್ತಕ್ಕೆ ಬೇಡಿಕೆ ಇದೆ. ಮಾಸಿಕ 70 ರೋಗಿಗಳಿಗೆ 150 ಯೂನಿಟ್ ರಕ್ತ ಬೇಕು. ಜಿಲ್ಲೆಯ 113 ರೋಗಿಗಳು ಶಿವಮೊಗ್ಗ, ದಾವಣಗೆರೆ, ಹುಬ್ಬಳ್ಳಿ, ದಕ್ಷಿಣ ಕನ್ನಡ ಜಿಲ್ಲೆಗಳಿಂದ ರಕ್ತ ಪಡೆಯುತ್ತಾರೆ.</p>.<p>‘ರಾಜ್ಯದ ಇತರೆ ಠಾಣೆಗಳಿಗೆ ಹೋಲಿಸಿದರೆ 6 ಬಾರಿ ರಕ್ತದಾನ ಶಿಬಿರ ಏರ್ಪಡಿಸಿ, 193 ಯೂನಿಟ್ ರಕ್ತ ಕೊಟ್ಟ ಮೊದಲ ಠಾಣೆ ಎಂಬ ಸಾಧನೆಗೆ ಆಡೂರು ಠಾಣೆ ಪಾತ್ರವಾಗಿದೆ. ಶಿವಮೊಗ್ಗ ಜಿಲ್ಲೆಯ ಹೊಸನಗರ ಪೊಲೀಸ್ ಠಾಣೆಯು ನಾಲ್ಕು ಬಾರಿ ರಕ್ತದಾನ ಶಿಬಿರ ಏರ್ಪಡಿಸಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.</p>.<p>‘ಥಲೆಸ್ಸೇಮಿಯಾ ಪೀಡಿತ ಮಕ್ಕಳಿಗೆ 30ರಿಂದ 45 ದಿನಕ್ಕೊಮ್ಮೆ ರಕ್ತ ಬದಲಿಸಬೇಕು. ಅದಕ್ಕಾಗಿ 2019ರಿಂದ ಶಿಬಿರ ನಡೆಸಲಾಗುತ್ತಿದೆ’ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಲ್.ವೈ. ಶಿರಕೋಳ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>ಅಲ್ಲದೇ ‘ಶಿಬಿರದ ವೇಳೆ ಥಲಸ್ಸೇಮಿಯಾ ಪೀಡಿತ ಮಕ್ಕಳು ಹಾಗೂ ಅವರ ಪೋಷಕರನ್ನೂ ಕರೆಸಿ, ಆತ್ಮಸ್ಥೈರ್ಯ ತುಂಬಲಾಗುತ್ತದೆ’ ಎಂದರು.</p>.<p>ಸ್ನೇಹಮೈತ್ರಿ ಬ್ಲಡ್ ಆರ್ಮಿ, ಜಿಲ್ಲಾ ರಕ್ತಕೇಂದ್ರ ಶಿಬಿರಕ್ಕೆ ಕೈ ಜೋಡಿಸಿದೆ ಎಂದು ತಿಳಿಸಿದರು.</p>.<p>‘ರಕ್ತಸಂಬಂಧದಲ್ಲಿ ಮದುವೆಯಿಂದಾಗಿ ಅಥವಾ ಆನುವಂಶಿಕವಾಗಿ ಥಲಸ್ಸೇಮಿಯಾ ಬರುತ್ತದೆ. ಕಾಯಿಲೆ ಪೀಡಿತ ಮಕ್ಕಳು, ಏಳು ವರ್ಷದಿಂದ 20 ವರ್ಷ ಬದುಕುತ್ತಾರೆ. ಬದುಕಿರುವ ಅವಧಿಯಲ್ಲಿ ಅಂತಹ ಮಕ್ಕಳಿಗೆ ರಕ್ತಬೇಕು. ಆ ಅಗತ್ಯವನ್ನು ತುಂಬಿಕೊಳ್ಳುವುದು ಶಿಬಿರ ಆಯೋಜನೆ ಉದ್ದೇಶವಾಗಿದೆ’ ಎಂದರು.</p>.<div><blockquote>ಪೊಲೀಸ್ ಸಿಬ್ಬಂದಿಯ ರಕ್ತದಾನ ಶಿಬಿರ ಇತರರಿಗೆ ಮಾದರಿಯಾಗಿದೆ. ಸಂಗ್ರಹವಾದ ರಕ್ತವನ್ನು ಥಲಸ್ಸೇಮಿಯಾ ಮಕ್ಕಳ ಚಿಕಿತ್ಸೆಗೆ ಬಳಸುತ್ತೇವೆ.</blockquote><span class="attribution">- ಬಸವರಾಜ ತಳವಾರ, ವೈದ್ಯಾಧಿಕಾರಿ, ಹಾವೇರಿ ಜಿಲ್ಲಾ ರಕ್ತ ಕೇಂದ್ರ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಾವೇರಿ:</strong> ಜಿಲ್ಲೆಯ ಹಾನಗಲ್ ತಾಲ್ಲೂಕಿನ ಆಡೂರು ಠಾಣೆ ಪೊಲೀಸ್ ಸಿಬ್ಬಂದಿಯು ಥಲಸ್ಸೇಮಿಯಾ (ಆನುವಂಶಿಕ ರಕ್ತದ ಕಾಯಿಲೆ) ಪೀಡಿತ ಮಕ್ಕಳಿಗೆ ನೆರವು ಮತ್ತು ಅಪಘಾತದಲ್ಲಿ ಗಾಯಗೊಂಡವರ ಜೀವರಕ್ಷಣೆಗಾಗಿ ಆರು ವರ್ಷಗಳಿಂದ ರಕ್ತದಾನ ಮಾಡುತ್ತಿದ್ದಾರೆ.</p>.<p>2019ರಿಂದ 2025ರ ನಡುವೆ ಆರು ಶಿಬಿರಗಳನ್ನು ಆಯೋಜಿಸಿರುವ ಆಡೂರು ಠಾಣೆಯ ಪೊಲೀಸರು, 193 ಯೂನಿಟ್ (ಪ್ರತಿ ಯೂನಿಟ್ 450 ಎಂ.ಎಲ್.) ರಕ್ತದಾನ ಮಾಡಿದ್ದಾರೆ.</p>.<p>ಜಿಲ್ಲೆಯಲ್ಲಿ ಥಲಸ್ಸೇಮಿಯಾ ಪೀಡಿತ 183 ಮಕ್ಕಳಿದ್ದು ಇವರಲ್ಲಿ ಪೊಲೀಸ್ ಸಿಬ್ಬಂದಿಯ 12 ಮಕ್ಕಳೂ ಇದ್ದಾರೆ. ಅವರ ಚಿಕಿತ್ಸೆಗಾಗಿ ಪೊಲೀಸರಿಂದ ಸಂಗ್ರಹಿಸಿದ ರಕ್ತ ಬಳಕೆ ಆಗುತ್ತದೆ.</p>.<p>ಜಿಲ್ಲೆಯಲ್ಲಿ ತಿಂಗಳಿಗೆ 420 ಯೂನಿಟ್ ರಕ್ತಕ್ಕೆ ಬೇಡಿಕೆ ಇದೆ. ಮಾಸಿಕ 70 ರೋಗಿಗಳಿಗೆ 150 ಯೂನಿಟ್ ರಕ್ತ ಬೇಕು. ಜಿಲ್ಲೆಯ 113 ರೋಗಿಗಳು ಶಿವಮೊಗ್ಗ, ದಾವಣಗೆರೆ, ಹುಬ್ಬಳ್ಳಿ, ದಕ್ಷಿಣ ಕನ್ನಡ ಜಿಲ್ಲೆಗಳಿಂದ ರಕ್ತ ಪಡೆಯುತ್ತಾರೆ.</p>.<p>‘ರಾಜ್ಯದ ಇತರೆ ಠಾಣೆಗಳಿಗೆ ಹೋಲಿಸಿದರೆ 6 ಬಾರಿ ರಕ್ತದಾನ ಶಿಬಿರ ಏರ್ಪಡಿಸಿ, 193 ಯೂನಿಟ್ ರಕ್ತ ಕೊಟ್ಟ ಮೊದಲ ಠಾಣೆ ಎಂಬ ಸಾಧನೆಗೆ ಆಡೂರು ಠಾಣೆ ಪಾತ್ರವಾಗಿದೆ. ಶಿವಮೊಗ್ಗ ಜಿಲ್ಲೆಯ ಹೊಸನಗರ ಪೊಲೀಸ್ ಠಾಣೆಯು ನಾಲ್ಕು ಬಾರಿ ರಕ್ತದಾನ ಶಿಬಿರ ಏರ್ಪಡಿಸಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.</p>.<p>‘ಥಲೆಸ್ಸೇಮಿಯಾ ಪೀಡಿತ ಮಕ್ಕಳಿಗೆ 30ರಿಂದ 45 ದಿನಕ್ಕೊಮ್ಮೆ ರಕ್ತ ಬದಲಿಸಬೇಕು. ಅದಕ್ಕಾಗಿ 2019ರಿಂದ ಶಿಬಿರ ನಡೆಸಲಾಗುತ್ತಿದೆ’ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಲ್.ವೈ. ಶಿರಕೋಳ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>ಅಲ್ಲದೇ ‘ಶಿಬಿರದ ವೇಳೆ ಥಲಸ್ಸೇಮಿಯಾ ಪೀಡಿತ ಮಕ್ಕಳು ಹಾಗೂ ಅವರ ಪೋಷಕರನ್ನೂ ಕರೆಸಿ, ಆತ್ಮಸ್ಥೈರ್ಯ ತುಂಬಲಾಗುತ್ತದೆ’ ಎಂದರು.</p>.<p>ಸ್ನೇಹಮೈತ್ರಿ ಬ್ಲಡ್ ಆರ್ಮಿ, ಜಿಲ್ಲಾ ರಕ್ತಕೇಂದ್ರ ಶಿಬಿರಕ್ಕೆ ಕೈ ಜೋಡಿಸಿದೆ ಎಂದು ತಿಳಿಸಿದರು.</p>.<p>‘ರಕ್ತಸಂಬಂಧದಲ್ಲಿ ಮದುವೆಯಿಂದಾಗಿ ಅಥವಾ ಆನುವಂಶಿಕವಾಗಿ ಥಲಸ್ಸೇಮಿಯಾ ಬರುತ್ತದೆ. ಕಾಯಿಲೆ ಪೀಡಿತ ಮಕ್ಕಳು, ಏಳು ವರ್ಷದಿಂದ 20 ವರ್ಷ ಬದುಕುತ್ತಾರೆ. ಬದುಕಿರುವ ಅವಧಿಯಲ್ಲಿ ಅಂತಹ ಮಕ್ಕಳಿಗೆ ರಕ್ತಬೇಕು. ಆ ಅಗತ್ಯವನ್ನು ತುಂಬಿಕೊಳ್ಳುವುದು ಶಿಬಿರ ಆಯೋಜನೆ ಉದ್ದೇಶವಾಗಿದೆ’ ಎಂದರು.</p>.<div><blockquote>ಪೊಲೀಸ್ ಸಿಬ್ಬಂದಿಯ ರಕ್ತದಾನ ಶಿಬಿರ ಇತರರಿಗೆ ಮಾದರಿಯಾಗಿದೆ. ಸಂಗ್ರಹವಾದ ರಕ್ತವನ್ನು ಥಲಸ್ಸೇಮಿಯಾ ಮಕ್ಕಳ ಚಿಕಿತ್ಸೆಗೆ ಬಳಸುತ್ತೇವೆ.</blockquote><span class="attribution">- ಬಸವರಾಜ ತಳವಾರ, ವೈದ್ಯಾಧಿಕಾರಿ, ಹಾವೇರಿ ಜಿಲ್ಲಾ ರಕ್ತ ಕೇಂದ್ರ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>