<p><strong>ಹಾನಗಲ್:</strong> ಪ್ರಾಥಮಿಕ ಸಮೀಕ್ಷೆ ಪೂರ್ಣಗೊಂಡಿರುವ ನೂತನ ರೈಲ್ವೆ ಮಾರ್ಗದಲ್ಲಿ ಹಾನಗಲ್ ಸೇರ್ಪಡೆಗೆ ಒತ್ತಾಯಿಸಿ ಜನಾಂದೋಲನ ರೂಪಿಸುವ ಅಂಗವಾಗಿ ಸೆ. 26 ರಂದು ಇಲ್ಲಿನ ಪ್ರವಾಸಿ ಮಂದಿರದಲ್ಲಿ ಸಂಘಟನೆ ಸಭೆ ಆಯೋಜಿಸಲಾಗಿದೆ ಎಂದು ಉತ್ತರ ಕರ್ನಾಟಕ ಹೋರಾಟ ಸಮಿತಿ ಅಧ್ಯಕ್ಷ ಸೋಮಶೇಖರ ಕೊತಂಬರಿ ಹೇಳಿದರು.</p>.<p>167 ಕಿ.ಮೀ ಉದ್ದದ ತಾಳಗುಪ್ಪ–ಶಿರಸಿ–ಹುಬ್ಬಳ್ಳಿ ರೈಲು ಮಾರ್ಗದಲ್ಲಿ ಹಾನಗಲ್ ಸೇರ್ಪಡೆ ಸಾಧು ಎನ್ನಿಸಲಿದೆ ಎಂದು ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಅಭಿಪ್ರಾಯಪಟ್ಟರು.</p>.<p>ಸುಮಾರು 2.70 ಲಕ್ಷ ಜನಸಂಖ್ಯೆಯ ಹಾನಗಲ್ ತಾಲ್ಲೂಕಿನಲ್ಲಿ ಪ್ರೇಕ್ಷಣಿಕ ಧಾರ್ಮಿಕ ಸ್ಥಳಗಳಿವೆ. ಉತ್ಕೃಷ್ಟ ರುಚಿಯ ಮಾವಿನಹಣ್ಣು ಮತ್ತು ವಿವಿಧ ವಾಣಿಜ್ಯ ಬೆಳೆ ಇಲ್ಲಿವೆ. ಪ್ರವಾಸೋದ್ಯಮ, ಉದ್ಯೋಗ ಸೃಷ್ಟಿ ಮತ್ತು ವ್ಯಾಪಾರದ ಉದ್ದೇಶದಿಂದ ಹಾನಗಲ್ ರೈಲು ಮಾರ್ಗದಲ್ಲಿ ಒಳಗೊಳ್ಳಬೇಕು ಎಂದರು.</p>.<p>ಹಾನಗಲ್ ಪಟ್ಟಣ ಸಮೀಪದ ಮುಂಡಗೋಡ ತಾಲ್ಲೂಕಿನ ಪಾಳಾ ಹಾಯ್ದು ನೂತನ ರೈಲ್ವೆ ಮಾರ್ಗ ರಚನೆಗೊಳ್ಳುತ್ತಿದೆ. ಹಾನಗಲ್ ಪಟ್ಟಣದಲ್ಲಿ ರೈಲು ನಿಲ್ದಾಣ ಸ್ಥಾಪಿಸುವ ಮೂಲಕ ಈ ಭಾಗದ ಬಹುದಿನಗಳ ಬೇಡಿಕೆಯನ್ನು ಈಡೇರಿಸುವುದು ಸಾಧ್ಯವಾಗಲಿದೆ ಎಂದರು.</p>.<p>‘ಈ ಬಗ್ಗೆ ಗಮನ ಸೆಳೆಯಲು ರೈಲ್ವೆ ಸಚಿವ ವಿ.ಸೋಮಣ್ಣ ಅವರನ್ನು ಹೋರಾಟ ಸಮಿತಿಯವರು ಸದ್ಯದಲ್ಲಿ ಭೇಟಿಯಾಗಲಿದ್ದೇವೆ. ರೈಲ್ವೆ ಮಾರ್ಗ ಹಾನಗಲ್ ಒಳಪಡುವ ಪ್ರಾಮುಖ್ಯತೆಯನ್ನು ತಿಳಿಸಲಾಗುತ್ತದೆ’ ಎಂದು ಕೊತಂಬರಿ ಹೇಳಿದರು.</p>.<p>ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಬಸವರಾಜ ಹಾದಿಮನಿ, ನಿಂಗಪ್ಪ ಪೂಜಾರ, ರೈತ ಸಂಘದ ಅಡಿವೆಪ್ಪ ಆಲದಕಟ್ಟಿ, ಸದಾಗೌಡ ಪಾಟೀಲ, ಉತ್ತರ ಕರ್ನಾಟಕ ಹೋರಾಟ ಸಮಿತಿಯ ರವಿಬಾಬು ಪೂಜಾರ, ಶ್ರೀಕಾಂತ ಹಾದಿಮನಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಾನಗಲ್:</strong> ಪ್ರಾಥಮಿಕ ಸಮೀಕ್ಷೆ ಪೂರ್ಣಗೊಂಡಿರುವ ನೂತನ ರೈಲ್ವೆ ಮಾರ್ಗದಲ್ಲಿ ಹಾನಗಲ್ ಸೇರ್ಪಡೆಗೆ ಒತ್ತಾಯಿಸಿ ಜನಾಂದೋಲನ ರೂಪಿಸುವ ಅಂಗವಾಗಿ ಸೆ. 26 ರಂದು ಇಲ್ಲಿನ ಪ್ರವಾಸಿ ಮಂದಿರದಲ್ಲಿ ಸಂಘಟನೆ ಸಭೆ ಆಯೋಜಿಸಲಾಗಿದೆ ಎಂದು ಉತ್ತರ ಕರ್ನಾಟಕ ಹೋರಾಟ ಸಮಿತಿ ಅಧ್ಯಕ್ಷ ಸೋಮಶೇಖರ ಕೊತಂಬರಿ ಹೇಳಿದರು.</p>.<p>167 ಕಿ.ಮೀ ಉದ್ದದ ತಾಳಗುಪ್ಪ–ಶಿರಸಿ–ಹುಬ್ಬಳ್ಳಿ ರೈಲು ಮಾರ್ಗದಲ್ಲಿ ಹಾನಗಲ್ ಸೇರ್ಪಡೆ ಸಾಧು ಎನ್ನಿಸಲಿದೆ ಎಂದು ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಅಭಿಪ್ರಾಯಪಟ್ಟರು.</p>.<p>ಸುಮಾರು 2.70 ಲಕ್ಷ ಜನಸಂಖ್ಯೆಯ ಹಾನಗಲ್ ತಾಲ್ಲೂಕಿನಲ್ಲಿ ಪ್ರೇಕ್ಷಣಿಕ ಧಾರ್ಮಿಕ ಸ್ಥಳಗಳಿವೆ. ಉತ್ಕೃಷ್ಟ ರುಚಿಯ ಮಾವಿನಹಣ್ಣು ಮತ್ತು ವಿವಿಧ ವಾಣಿಜ್ಯ ಬೆಳೆ ಇಲ್ಲಿವೆ. ಪ್ರವಾಸೋದ್ಯಮ, ಉದ್ಯೋಗ ಸೃಷ್ಟಿ ಮತ್ತು ವ್ಯಾಪಾರದ ಉದ್ದೇಶದಿಂದ ಹಾನಗಲ್ ರೈಲು ಮಾರ್ಗದಲ್ಲಿ ಒಳಗೊಳ್ಳಬೇಕು ಎಂದರು.</p>.<p>ಹಾನಗಲ್ ಪಟ್ಟಣ ಸಮೀಪದ ಮುಂಡಗೋಡ ತಾಲ್ಲೂಕಿನ ಪಾಳಾ ಹಾಯ್ದು ನೂತನ ರೈಲ್ವೆ ಮಾರ್ಗ ರಚನೆಗೊಳ್ಳುತ್ತಿದೆ. ಹಾನಗಲ್ ಪಟ್ಟಣದಲ್ಲಿ ರೈಲು ನಿಲ್ದಾಣ ಸ್ಥಾಪಿಸುವ ಮೂಲಕ ಈ ಭಾಗದ ಬಹುದಿನಗಳ ಬೇಡಿಕೆಯನ್ನು ಈಡೇರಿಸುವುದು ಸಾಧ್ಯವಾಗಲಿದೆ ಎಂದರು.</p>.<p>‘ಈ ಬಗ್ಗೆ ಗಮನ ಸೆಳೆಯಲು ರೈಲ್ವೆ ಸಚಿವ ವಿ.ಸೋಮಣ್ಣ ಅವರನ್ನು ಹೋರಾಟ ಸಮಿತಿಯವರು ಸದ್ಯದಲ್ಲಿ ಭೇಟಿಯಾಗಲಿದ್ದೇವೆ. ರೈಲ್ವೆ ಮಾರ್ಗ ಹಾನಗಲ್ ಒಳಪಡುವ ಪ್ರಾಮುಖ್ಯತೆಯನ್ನು ತಿಳಿಸಲಾಗುತ್ತದೆ’ ಎಂದು ಕೊತಂಬರಿ ಹೇಳಿದರು.</p>.<p>ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಬಸವರಾಜ ಹಾದಿಮನಿ, ನಿಂಗಪ್ಪ ಪೂಜಾರ, ರೈತ ಸಂಘದ ಅಡಿವೆಪ್ಪ ಆಲದಕಟ್ಟಿ, ಸದಾಗೌಡ ಪಾಟೀಲ, ಉತ್ತರ ಕರ್ನಾಟಕ ಹೋರಾಟ ಸಮಿತಿಯ ರವಿಬಾಬು ಪೂಜಾರ, ಶ್ರೀಕಾಂತ ಹಾದಿಮನಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>