<p><strong>ಅಕ್ಕಿಆಲೂರ: </strong>ತಮ್ಮ ಆಸ್ತಿಯನ್ನು ಬೇರೊಬ್ಬರ ಹೆಸರಿಗೆಅನಧಿಕೃತವಾಗಿ ವರ್ಗಾಯಿಸಿದ್ದ ಸ್ಥಳೀಯ ಗ್ರಾ.ಪಂ ವಿರುದ್ಧ ಹೋರಾಡಿದ ವೃದ್ಧರೊಬ್ಬರಿಗೆ ಕೊನೆಗೂ ಜಯ ಸಿಕ್ಕಿದೆ.</p>.<p>ಇಲ್ಲಿನ ಕುಮಾರ ನಗರದ ಮಲ್ಲಿಕಾರ್ಜುನಪ್ಪ ಗೊಂದಿ ಎಂಬುವವರ 50X60 ನಿವೇಶನದಲ್ಲಿ ಒಟ್ಟು ಮೂರು ಮನೆಗಳನ್ನು 2016ರಲ್ಲಿ ಮುರಳೀಧರ ಜನಿವಾರ ಎಂಬುವವರಿಗೆಅನಧಿಕೃತವಾಗಿ ವರ್ಗಾಯಿಸಲಾಗಿತ್ತು. 2020ರಲ್ಲಿ ಮಲ್ಲಿಕಾರ್ಜುನಪ್ಪ ಕರಬಾಕಿ ಭರಿಸಲು ತೆರಳಿದಾಗ ತಮ್ಮ ಆಸ್ತಿ ಬೇರೊಬ್ಬರ ಹೆಸರಿಗೆ ವರ್ಗಾವಣೆಗೊಂಡಿರುವುದು ಬೆಳಕಿಗೆ ಬಂದಿತ್ತು.</p>.<p>ಜತೆಗೆ ಮುರಳೀಧರ ಸ್ಥಳೀಯ ಖಾಸಗಿ ಬ್ಯಾಂಕ್ವೊಂದರಲ್ಲಿ ಈ ಆಸ್ತಿಯ ಮೇಲೆ ₹5 ಲಕ್ಷ ಸಾಲ ಪಡೆದಿದ್ದು, ವೃದ್ಧ ಮಲ್ಲಿಕಾರ್ಜುನಪ್ಪ ಆತಂಕಕ್ಕೊಳಗಾಗಿದ್ದರು.</p>.<p>ಈ ಅಕ್ರಮ ವಿರೋಧಿಸಿ ಮಲ್ಲಿಕಾರ್ಜುನಪ್ಪ ಕುಟುಂಬ ಸಹಿತ ಗ್ರಾ.ಪಂ ಎದುರು ಮೌನ ಪ್ರತಿಭಟನೆ ನಡೆಸಿದ್ದರು. ಸವಣೂರು ಉಪ ವಿಭಾಗಾಧಿಕಾರಿಗಳ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರು. ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆದು ಮೂಲ ಮಾಲೀಕರಾದ ಮಲ್ಲಿಕಾರ್ಜುನಪ್ಪ ಗೊಂದಿ ಅವರ ಹೆಸರಿಗೆ ಆಸ್ತಿ ವರ್ಗಾಯಿಸಿ ಇ ಸ್ವತ್ತು ಉತಾರ ನೀಡುವಂತೆ ಆದೇಶ ನೀಡಲಾಗಿತ್ತು. ನ್ಯಾಯಾಲಯದ ಆದೇಶದ ಹಿನ್ನೆಲೆ ಗ್ರಾ.ಪಂ ಮಲ್ಲಿಕಾರ್ಜುನಪ್ಪ ಅವರ ಹೆಸರಿಗೆ ಆಸ್ತಿ ವರ್ಗಾಯಿಸಿ ಇ ಸ್ವತ್ತು ಉತಾರ ನೀಡಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಅಕ್ಕಿಆಲೂರ: </strong>ತಮ್ಮ ಆಸ್ತಿಯನ್ನು ಬೇರೊಬ್ಬರ ಹೆಸರಿಗೆಅನಧಿಕೃತವಾಗಿ ವರ್ಗಾಯಿಸಿದ್ದ ಸ್ಥಳೀಯ ಗ್ರಾ.ಪಂ ವಿರುದ್ಧ ಹೋರಾಡಿದ ವೃದ್ಧರೊಬ್ಬರಿಗೆ ಕೊನೆಗೂ ಜಯ ಸಿಕ್ಕಿದೆ.</p>.<p>ಇಲ್ಲಿನ ಕುಮಾರ ನಗರದ ಮಲ್ಲಿಕಾರ್ಜುನಪ್ಪ ಗೊಂದಿ ಎಂಬುವವರ 50X60 ನಿವೇಶನದಲ್ಲಿ ಒಟ್ಟು ಮೂರು ಮನೆಗಳನ್ನು 2016ರಲ್ಲಿ ಮುರಳೀಧರ ಜನಿವಾರ ಎಂಬುವವರಿಗೆಅನಧಿಕೃತವಾಗಿ ವರ್ಗಾಯಿಸಲಾಗಿತ್ತು. 2020ರಲ್ಲಿ ಮಲ್ಲಿಕಾರ್ಜುನಪ್ಪ ಕರಬಾಕಿ ಭರಿಸಲು ತೆರಳಿದಾಗ ತಮ್ಮ ಆಸ್ತಿ ಬೇರೊಬ್ಬರ ಹೆಸರಿಗೆ ವರ್ಗಾವಣೆಗೊಂಡಿರುವುದು ಬೆಳಕಿಗೆ ಬಂದಿತ್ತು.</p>.<p>ಜತೆಗೆ ಮುರಳೀಧರ ಸ್ಥಳೀಯ ಖಾಸಗಿ ಬ್ಯಾಂಕ್ವೊಂದರಲ್ಲಿ ಈ ಆಸ್ತಿಯ ಮೇಲೆ ₹5 ಲಕ್ಷ ಸಾಲ ಪಡೆದಿದ್ದು, ವೃದ್ಧ ಮಲ್ಲಿಕಾರ್ಜುನಪ್ಪ ಆತಂಕಕ್ಕೊಳಗಾಗಿದ್ದರು.</p>.<p>ಈ ಅಕ್ರಮ ವಿರೋಧಿಸಿ ಮಲ್ಲಿಕಾರ್ಜುನಪ್ಪ ಕುಟುಂಬ ಸಹಿತ ಗ್ರಾ.ಪಂ ಎದುರು ಮೌನ ಪ್ರತಿಭಟನೆ ನಡೆಸಿದ್ದರು. ಸವಣೂರು ಉಪ ವಿಭಾಗಾಧಿಕಾರಿಗಳ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರು. ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆದು ಮೂಲ ಮಾಲೀಕರಾದ ಮಲ್ಲಿಕಾರ್ಜುನಪ್ಪ ಗೊಂದಿ ಅವರ ಹೆಸರಿಗೆ ಆಸ್ತಿ ವರ್ಗಾಯಿಸಿ ಇ ಸ್ವತ್ತು ಉತಾರ ನೀಡುವಂತೆ ಆದೇಶ ನೀಡಲಾಗಿತ್ತು. ನ್ಯಾಯಾಲಯದ ಆದೇಶದ ಹಿನ್ನೆಲೆ ಗ್ರಾ.ಪಂ ಮಲ್ಲಿಕಾರ್ಜುನಪ್ಪ ಅವರ ಹೆಸರಿಗೆ ಆಸ್ತಿ ವರ್ಗಾಯಿಸಿ ಇ ಸ್ವತ್ತು ಉತಾರ ನೀಡಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>