ನಗರದಲ್ಲಿ ಶನಿವಾರ ಮಾಧ್ಯಮದವರ ಮುಂದೆ ಹೇಳಿಕೆ ನೀಡಿದ ಅವರು, ‘ತೋಟಗಾರಿಕೆ ಇಲಾಖೆಯ ಖಾನಾಪುರದ ಸಸ್ಯ ಪಾಲನಾಲಯದ ಸಹಾಯಕ ನಿರ್ದೇಶಕ ರಾಜಕುಮಾರ ಟಾಕಳೆ ಹಾಗೂ ನಾನು ಬೆಂಗಳೂರಿನ ‘ಕುಮಾರ ಕೃಪಾ’ ಸರ್ಕಾರಿ ಬಂಗಲೆ ಆವರಣದ ಗಣೇಶ ದೇಗುಲದಲ್ಲಿ 2020ರ ಮೇ ತಿಂಗಳಲ್ಲಿ ಮದುವೆಯಾಗಿದ್ದೇವೆ. ನಂತರ ನನ್ನೊಂದಿಗೆ ಸಂಸಾರವನ್ನೂ ಮಾಡಿದ್ದಾರೆ. ಆದರೆ, ಮುಂಚಿತವಾಗಿ ಅವರಿಗೆ ಮದುವೆಯಾಗಿ, ಮಕ್ಕಳಿರುವ ವಿಚಾರ ಮುಚ್ಚಿಟ್ಟಿದ್ದಾರೆ. ಅಲ್ಲದೇ, ನನ್ನನ್ನು ಯಾಮಾರಿಸಿ ಕುಮಾರ ಕೃಪಾ ಬಂಗಲೆಯನ್ನೂ ದುರುಪಯೋಗ ಮಾಡಿಕೊಂಡಿದ್ದಾರೆ. ಈ ಬಗ್ಗೆ ಈಗಾಗಲೇ ಬೆಂಗಳೂರಿನ ಹೈಗ್ರೌಂಡ್ಸ್ ಠಾಣೆಗೆ ದೂರು ಸಲ್ಲಿಸಿದ್ದೇನೆ’ ಎಂದರು.