<p><strong>ಚಿಂಚೋಳಿ</strong>: ಲೌಕಿಕ ಹಾಗೂ ಅಲೌಕಿಕತೆಯಲ್ಲಿ ಭಾರತೀಯರು ತಾತ್ವಿಕ ಚಿಂತನೆಯಲ್ಲಿ ಉನ್ನತ ಮಟ್ಟ ತಲುಪಿದವರಾಗಿದ್ದಾರೆ ಎಂದು ಅತ್ತಿವೇರಿ ಬಸವಧಾಮದ ಬಸವೇಶ್ವರಿ ಮಾತಾಜಿ ಹೇಳಿದರು.</p>.<p>ತಾಲ್ಲೂಕಿನ ಐನೋಳ್ಳಿ ಗ್ರಾಮದ ಮಾತೆ ಮಾಣಿಕೇಶ್ವರಿ ಮಹಿಳಾ ಮಂಡಳದ 36ನೇ ವಾರ್ಷೀಕೋತ್ಸವದಲ್ಲಿ ಮಾತನಾಡಿದರು.</p>.<p>ಶರಣರು ತಾವಿರುವ ನೆಲೆಯೇ ಸ್ವರ್ಗವಾಗಿಸಿಕೊಂಡು ನೆಮ್ಮದಿಯ ಜೀವನ ನಡೆಸಿದವರಾಗಿದ್ದಾರೆ. ಶರಣರಿಗೆ ಕಾಶಿ, ಕೇದಾರ ಪಾಪ ಕಳೆಯುವ ತಾಣವಾಗಿ ಕಾಣಲಿಲ್ಲ ತಮ್ಮ ನೆಲದಲ್ಲಿಯೇ ಕುಳಿತು ಹಸನಾದ ಬದುಕು ನಡೆಸಿದವರು ಶರಣರು ಎಂದರು.</p>.<p>ಪಾಪ ಕಳೆಯಲು ಎಲ್ಲರೂ ಕಾಶಿಗೆ ತೆರಳಿದರೆ, ಕಾಶಿಯ ಜನ ಎಲ್ಲಿಗೆ ಹೋಗಬೇಕು? ಅವರ ಪಾಪ ಕಳೆಯುವುದು ಹೇಗೆ ಎಂಬುದಕ್ಕೆ ಉತ್ತರವಿರಲಿಲ್ಲ ಹೀಗಾಗಿ ಶರಣರು ತಮ್ಮ ನೆಲೆಯೇ ಸ್ವರ್ಗವಾಗಿಸಿಕೊಂಡು ಸಂತೃಪ್ತ ಜೀವನ ನಡೆಸಿದ್ದಾರೆ ಎಂದರು.</p>.<p>ನಿಡಗುಂದಾದ ಕರುಣೇಶ್ವರ ಶಿವಾವಾರ್ಯರು ಮಾತನಾಡಿ, 36ನೇ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿರುವ ಮಾತೆ ಮಾಣಿಕೇಶ್ವರಿ ಮಹಿಳಾ ಮಂಡಳವೂ ಶಿಶು ಪಾಲನಾ ಕೇಂದ್ರ, ಮಕ್ಕಳ ಮಾರಾಟದ ಸಂದರ್ಭದಲ್ಲಿ ತಾಂಡಾಗಳಲ್ಲಿ ಜಾಗೃತಿ, ಮಹಿಳೆಯರ ಸ್ವಾವಲಂಬಿ ಜೀವನಕ್ಕೆ ಶ್ರಮಿಸುತ್ತಿರುವುದು ಶ್ಲಾಘನೀಯ ಎಂದರು.</p>.<p>ಗಾನಯೋಗಿ ಪಂಚಾಕ್ಷರಿ ಗವಾಯಿಗಳ ಕಲಾ ಸಂಘದ ಅಧ್ಯಕ್ಷ ರಾಮಯ್ಯ ಸ್ವಾಮಿ ಉದ್ಘಾಟಿಸಿದರು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ನಿವೃತ್ತ ಸಹ ನಿರ್ದೇಶಕ ಡಾ.ಶಿವರಾಜ ಸಜ್ಜನಶೆಟ್ಟಿ ಮಾತನಾಡಿದರು. ಶಾಂತಾ ಪೋಲಿಸಪಾಟೀಲ ಅಧ್ಯಕ್ಷತೆ ವಹಿಸಿದ್ದರು.</p>.<p>ಜಯಶ್ರೀ ಚಟ್ನಳ್ಳಿ ಮಾತನಾಡಿದರು. ಸುಧಾ ಮಂದಾ ಸ್ವಾಗತಿಸಿದರು. ಜಯಶ್ರೀ ಚಟ್ನಳ್ಳಿ ನಿರೂಪಿಸಿದರು. ಸುರೇಖಾ ಸುಂಕಾ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಂಚೋಳಿ</strong>: ಲೌಕಿಕ ಹಾಗೂ ಅಲೌಕಿಕತೆಯಲ್ಲಿ ಭಾರತೀಯರು ತಾತ್ವಿಕ ಚಿಂತನೆಯಲ್ಲಿ ಉನ್ನತ ಮಟ್ಟ ತಲುಪಿದವರಾಗಿದ್ದಾರೆ ಎಂದು ಅತ್ತಿವೇರಿ ಬಸವಧಾಮದ ಬಸವೇಶ್ವರಿ ಮಾತಾಜಿ ಹೇಳಿದರು.</p>.<p>ತಾಲ್ಲೂಕಿನ ಐನೋಳ್ಳಿ ಗ್ರಾಮದ ಮಾತೆ ಮಾಣಿಕೇಶ್ವರಿ ಮಹಿಳಾ ಮಂಡಳದ 36ನೇ ವಾರ್ಷೀಕೋತ್ಸವದಲ್ಲಿ ಮಾತನಾಡಿದರು.</p>.<p>ಶರಣರು ತಾವಿರುವ ನೆಲೆಯೇ ಸ್ವರ್ಗವಾಗಿಸಿಕೊಂಡು ನೆಮ್ಮದಿಯ ಜೀವನ ನಡೆಸಿದವರಾಗಿದ್ದಾರೆ. ಶರಣರಿಗೆ ಕಾಶಿ, ಕೇದಾರ ಪಾಪ ಕಳೆಯುವ ತಾಣವಾಗಿ ಕಾಣಲಿಲ್ಲ ತಮ್ಮ ನೆಲದಲ್ಲಿಯೇ ಕುಳಿತು ಹಸನಾದ ಬದುಕು ನಡೆಸಿದವರು ಶರಣರು ಎಂದರು.</p>.<p>ಪಾಪ ಕಳೆಯಲು ಎಲ್ಲರೂ ಕಾಶಿಗೆ ತೆರಳಿದರೆ, ಕಾಶಿಯ ಜನ ಎಲ್ಲಿಗೆ ಹೋಗಬೇಕು? ಅವರ ಪಾಪ ಕಳೆಯುವುದು ಹೇಗೆ ಎಂಬುದಕ್ಕೆ ಉತ್ತರವಿರಲಿಲ್ಲ ಹೀಗಾಗಿ ಶರಣರು ತಮ್ಮ ನೆಲೆಯೇ ಸ್ವರ್ಗವಾಗಿಸಿಕೊಂಡು ಸಂತೃಪ್ತ ಜೀವನ ನಡೆಸಿದ್ದಾರೆ ಎಂದರು.</p>.<p>ನಿಡಗುಂದಾದ ಕರುಣೇಶ್ವರ ಶಿವಾವಾರ್ಯರು ಮಾತನಾಡಿ, 36ನೇ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿರುವ ಮಾತೆ ಮಾಣಿಕೇಶ್ವರಿ ಮಹಿಳಾ ಮಂಡಳವೂ ಶಿಶು ಪಾಲನಾ ಕೇಂದ್ರ, ಮಕ್ಕಳ ಮಾರಾಟದ ಸಂದರ್ಭದಲ್ಲಿ ತಾಂಡಾಗಳಲ್ಲಿ ಜಾಗೃತಿ, ಮಹಿಳೆಯರ ಸ್ವಾವಲಂಬಿ ಜೀವನಕ್ಕೆ ಶ್ರಮಿಸುತ್ತಿರುವುದು ಶ್ಲಾಘನೀಯ ಎಂದರು.</p>.<p>ಗಾನಯೋಗಿ ಪಂಚಾಕ್ಷರಿ ಗವಾಯಿಗಳ ಕಲಾ ಸಂಘದ ಅಧ್ಯಕ್ಷ ರಾಮಯ್ಯ ಸ್ವಾಮಿ ಉದ್ಘಾಟಿಸಿದರು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ನಿವೃತ್ತ ಸಹ ನಿರ್ದೇಶಕ ಡಾ.ಶಿವರಾಜ ಸಜ್ಜನಶೆಟ್ಟಿ ಮಾತನಾಡಿದರು. ಶಾಂತಾ ಪೋಲಿಸಪಾಟೀಲ ಅಧ್ಯಕ್ಷತೆ ವಹಿಸಿದ್ದರು.</p>.<p>ಜಯಶ್ರೀ ಚಟ್ನಳ್ಳಿ ಮಾತನಾಡಿದರು. ಸುಧಾ ಮಂದಾ ಸ್ವಾಗತಿಸಿದರು. ಜಯಶ್ರೀ ಚಟ್ನಳ್ಳಿ ನಿರೂಪಿಸಿದರು. ಸುರೇಖಾ ಸುಂಕಾ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>