ಬಸವಾದಿ ಶರಣ ಜೀವನ, ಕಾಯಕ– ಕ್ಷೇತ್ರ ಹಾಗೂ ವಚನಗಳು ಎಂಬ ಮೂರು ಆಯಾಮಗಳಲ್ಲಿ ಇಲ್ಲಿ ಕಲಾಕೃತಿಗಳನ್ನು ಪ್ರದರ್ಶಿಸಲಾಗಿದೆ. ಇದಕ್ಕೆಂದೇ ಮಂತ್ರಾಲಯದಲ್ಲಿ 10 ದಿನಗಳ ಶಿಬಿರ ಆಯೋಜಿಸಿ, 15 ವಿವಿಧ ಕಲಾವಿದರಿಂದ ವಿಷಯವಾರು ಚಿತ್ರಕಲಾಕೃತಿಗಳನ್ನು ಕಲೆಹಾಕಲಾಗಿದೆ. ತೈಲವರ್ಣ, ಜಲವರ್ಣ, ಅಕ್ರೆಲಿಕ್, ರೇಖಾಚಿತ್ರ ಸೇರಿದಂತೆ ಬಹು ಮಾಧ್ಯಮದ ಕಲಾಕೃತಿಗಳನ್ನು ಒಂದೇ ಗ್ಯಾಲರಿಯಲ್ಲಿ ನೋಡುವುದೇ ವಿಶೇಷ.