ಸಿರನೂರಿನ ಬಾರತೀಯ ವಿದ್ಯಾ ಮಂದಿರದಲ್ಲಿ ಜ. 27ರಂದು ಬೆಳಿಗ್ಗೆ 11.15ಕ್ಕೆ ನಡೆಯಲಿರುವ ಸಮಾರಂಭದಲ್ಲಿ ಶಿಕ್ಷಕರಾದ ಅರುಣಾ ಎನ್.ಜಮಾದಾರ, ಅಸ್ತಾಕ್ ಅ. ಪಟೇಲ್, ಭಾಗ್ಯಶಿಲ್ಪಾ ಆಲೇಗಾಂವ, ಶೋಭಾದೇವಿ, ಮೀನಾಕ್ಷಿ ವೈಜನಾಥ ಮೈನಾಳೆ, ಹುಲಿಕಂಠರಾಯ ಹೇರೂರ ಅವರಿಗೆ ಪ್ರಶಸ್ತಿ ನೀಡಲಾಗುವುದು ಎಂದು ಪ್ರತಿಷ್ಠಾನದ ಸಂಸ್ಥಾಪಕ ವಿಜಯಕುಮಾರ ತೇಗಲತಿಪ್ಪಿ ತಿಳಿಸಿದ್ದಾರೆ.