<p><strong>ಕಾಳಗಿ:</strong> ತಾಲ್ಲೂಕಿನ ಕೋಡ್ಲಿ ಗ್ರಾಮದಲ್ಲಿ ಬನದಹುಣ್ಣಿಮೆ ಅಂಗವಾಗಿ ಶನಿವಾರ ರಾತ್ರಿ ಬನಶಂಕರಿದೇವಿ ರಥೋತ್ಸವ ಅದ್ದೂರಿಯಾಗಿ ಜರುಗಿತು.</p>.<p>ನೆರೆದಿದ್ದ ಅಪಾರ ಭಕ್ತರು ಹೂಹಾರ, ವಿದ್ಯುತ್ ದೀಪಗಳಿಂದ ಅಲಂಕೃತಗೊಂಡಿದ ತೇರಿನ ಮೇಲೆ ಫಲಪುಷ್ಪ ತೂರಿ ಜೈಕಾರ ಹಾಕಿ ಕೈ ಮುಗಿದು ನಮಿಸಿ ಧನ್ಯರಾದರು. ಇದಕ್ಕೂ ಮುಂಚೆ ದೇವಸ್ಥಾನಕ್ಕೆ ಐದು ಮನೆಗಳಿಂದ ತನಾರತಿ, ಕುಂಭ ಆಗಮನವಾಗಿ ರಾಮಲಿಂಗರೆಡ್ಡಿ ದೇಶಮುಖ ಮನೆಯಿಂದ ಭವ್ಯ ಮೆರವಣಿಗೆಯೊಂದಿಗೆ ಪಲ್ಲಕಿ ಸಹಿತ ಕಳಸ ತರಲಾಯಿತು.</p>.<p>ತದನಂತರದಲ್ಲಿ ಪುರವಂತರ ಕುಣಿತ, ರಥಕ್ಕೆ ಕುಂಭ-ಕಳಸದ ಪ್ರದಕ್ಷಿಣೆ, ಮಂಗಳಾರತಿ ಜರುಗಿ ಜಯಘೋಷ ಮೊಳಗಿತು. ಪಟಾಕಿಯ ಆಕರ್ಷಕ ನೋಟ, ವಾದ್ಯಮೇಳದ ಝೇಂಕಾರ ಕಳೆಕಟ್ಟಿ ಭಕ್ತರು ತೇರು ಎಳೆದು ಸಂಭ್ರಮಿಸಿದರು.</p>.<p>ಸ್ಥಳೀಯ ಹಿರೇಮಠದ ಪೂಜ್ಯ ಬಸಲಿಂಗ ಶಿವಾಚಾರ್ಯರು, ಶಂಕ್ರಯ್ಯಸ್ವಾಮಿ ಯಲ್ಮಡಗಿ ಸೇರಿದಂತೆ ದೇವಸ್ಥಾನದ ಪದಾಧಿಕಾರಿಗಳು, ವಿವಿಧೆಡೆಯ ಭಕ್ತರು ಪಾಲ್ಗೊಂಡಿದ್ದರು. ರಟಕಲ್ ಪಿಎಸ್ಐ ಶೀಲಾದೇವಿ ನೇತೃತ್ವದಲ್ಲಿ ಪೊಲೀಸರು ಬಂದೋಬಸ್ತ್ ಮಾಡಿದರು.</p>.<p>ಭಾನುವಾರ (ಜ.4) ಸಂಜೆ 6.30ಕ್ಕೆ ಕಲಾವಿದ ರಾಚಯ್ಯಸ್ವಾಮಿ, ತುಕಾರಾಮ ನಾಗೂರೆ ಅವರಿಂದ ಹಾಸ್ಯ ಹಾಗೂ ಜಾದು ಕಾರ್ಯಕ್ರಮ. ಸೋಮವಾರ ಸಂಜೆ 6.30ಕ್ಕೆ ರೇವಣಸಿದ್ದಪ್ಪ ದುಕಾನದಾರ ಅವರಿಂದ ಹಾಸ್ಯ, ಸಾಸರಗಾಂವ ಶಾಲಾ ಮಕ್ಕಳಿಂದ ಸಾಂಸ್ಕೃತಿಕ, ಮನೋರಂಜನೆ ಕಾರ್ಯಕ್ರಮ ಜರುಗಲಿದೆ.</p>.<p>ಮಂಗಳವಾರ ಸಂಜೆ 6.30ಕ್ಕೆ ಸಹಸ್ರ ದೀಪೋತ್ಸವ ಕಾರ್ಯಕ್ರಮ ನಡೆಯಲಿದ್ದು, ನಾಲವಾರ, ಹೊನ್ನಕಿರಣಗಿ, ಹಲಕರ್ಟಿ, ಬೆಳಗುಂಪಾ, ರಟಕಲ್ ಮಠಾಧೀಶರು ಒಳಗೊಂಡಂತೆ ಜನಪ್ರತಿನಿಧಿಗಳು, ಗಣ್ಯರು, ಅಧಿಕಾರಿಗಳು ಭಾಗವಹಿಸಲಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಾಳಗಿ:</strong> ತಾಲ್ಲೂಕಿನ ಕೋಡ್ಲಿ ಗ್ರಾಮದಲ್ಲಿ ಬನದಹುಣ್ಣಿಮೆ ಅಂಗವಾಗಿ ಶನಿವಾರ ರಾತ್ರಿ ಬನಶಂಕರಿದೇವಿ ರಥೋತ್ಸವ ಅದ್ದೂರಿಯಾಗಿ ಜರುಗಿತು.</p>.<p>ನೆರೆದಿದ್ದ ಅಪಾರ ಭಕ್ತರು ಹೂಹಾರ, ವಿದ್ಯುತ್ ದೀಪಗಳಿಂದ ಅಲಂಕೃತಗೊಂಡಿದ ತೇರಿನ ಮೇಲೆ ಫಲಪುಷ್ಪ ತೂರಿ ಜೈಕಾರ ಹಾಕಿ ಕೈ ಮುಗಿದು ನಮಿಸಿ ಧನ್ಯರಾದರು. ಇದಕ್ಕೂ ಮುಂಚೆ ದೇವಸ್ಥಾನಕ್ಕೆ ಐದು ಮನೆಗಳಿಂದ ತನಾರತಿ, ಕುಂಭ ಆಗಮನವಾಗಿ ರಾಮಲಿಂಗರೆಡ್ಡಿ ದೇಶಮುಖ ಮನೆಯಿಂದ ಭವ್ಯ ಮೆರವಣಿಗೆಯೊಂದಿಗೆ ಪಲ್ಲಕಿ ಸಹಿತ ಕಳಸ ತರಲಾಯಿತು.</p>.<p>ತದನಂತರದಲ್ಲಿ ಪುರವಂತರ ಕುಣಿತ, ರಥಕ್ಕೆ ಕುಂಭ-ಕಳಸದ ಪ್ರದಕ್ಷಿಣೆ, ಮಂಗಳಾರತಿ ಜರುಗಿ ಜಯಘೋಷ ಮೊಳಗಿತು. ಪಟಾಕಿಯ ಆಕರ್ಷಕ ನೋಟ, ವಾದ್ಯಮೇಳದ ಝೇಂಕಾರ ಕಳೆಕಟ್ಟಿ ಭಕ್ತರು ತೇರು ಎಳೆದು ಸಂಭ್ರಮಿಸಿದರು.</p>.<p>ಸ್ಥಳೀಯ ಹಿರೇಮಠದ ಪೂಜ್ಯ ಬಸಲಿಂಗ ಶಿವಾಚಾರ್ಯರು, ಶಂಕ್ರಯ್ಯಸ್ವಾಮಿ ಯಲ್ಮಡಗಿ ಸೇರಿದಂತೆ ದೇವಸ್ಥಾನದ ಪದಾಧಿಕಾರಿಗಳು, ವಿವಿಧೆಡೆಯ ಭಕ್ತರು ಪಾಲ್ಗೊಂಡಿದ್ದರು. ರಟಕಲ್ ಪಿಎಸ್ಐ ಶೀಲಾದೇವಿ ನೇತೃತ್ವದಲ್ಲಿ ಪೊಲೀಸರು ಬಂದೋಬಸ್ತ್ ಮಾಡಿದರು.</p>.<p>ಭಾನುವಾರ (ಜ.4) ಸಂಜೆ 6.30ಕ್ಕೆ ಕಲಾವಿದ ರಾಚಯ್ಯಸ್ವಾಮಿ, ತುಕಾರಾಮ ನಾಗೂರೆ ಅವರಿಂದ ಹಾಸ್ಯ ಹಾಗೂ ಜಾದು ಕಾರ್ಯಕ್ರಮ. ಸೋಮವಾರ ಸಂಜೆ 6.30ಕ್ಕೆ ರೇವಣಸಿದ್ದಪ್ಪ ದುಕಾನದಾರ ಅವರಿಂದ ಹಾಸ್ಯ, ಸಾಸರಗಾಂವ ಶಾಲಾ ಮಕ್ಕಳಿಂದ ಸಾಂಸ್ಕೃತಿಕ, ಮನೋರಂಜನೆ ಕಾರ್ಯಕ್ರಮ ಜರುಗಲಿದೆ.</p>.<p>ಮಂಗಳವಾರ ಸಂಜೆ 6.30ಕ್ಕೆ ಸಹಸ್ರ ದೀಪೋತ್ಸವ ಕಾರ್ಯಕ್ರಮ ನಡೆಯಲಿದ್ದು, ನಾಲವಾರ, ಹೊನ್ನಕಿರಣಗಿ, ಹಲಕರ್ಟಿ, ಬೆಳಗುಂಪಾ, ರಟಕಲ್ ಮಠಾಧೀಶರು ಒಳಗೊಂಡಂತೆ ಜನಪ್ರತಿನಿಧಿಗಳು, ಗಣ್ಯರು, ಅಧಿಕಾರಿಗಳು ಭಾಗವಹಿಸಲಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>