<p><strong>ಕಾಳಗಿ:</strong> ದೇವಾಂಗ ಸಮಾಜದ ಕುಲದೇವತೆ ಇಲ್ಲಿನ ಬನಶಂಕರಿದೇವಿ ರಥೋತ್ಸವ ಶನಿವಾರ ರಾತ್ರಿ 8.30ಕ್ಕೆ ವೈಭವದಿಂದ ನೆರವೇರಿತು. ಬನದಹುಣ್ಣಿಮೆಯ ಈ ದಿನ ಪಟ್ಟಣದಲ್ಲಿ ಜಾತ್ರೆಯ ಕಳೆಕಟ್ಟಿ ಭಕ್ತರು ಸಡಗರ ಸಂಭ್ರಮದಲ್ಲಿ ತೇಲಾಡಿದರು. ದೇವಸ್ಥಾನದಲ್ಲಿ ಕುಂಭ ಹಾಕಿ, ಮುತ್ತೈದೆಯರಿಗೆ ಉಡಿ ತುಂಬಲಾಯಿತು.</p>.<p>ಬೆಳಿಗ್ಗೆಯಿಂದ ಭಕ್ತರು ದೇವಿಯ ಗುಡಿಗೆ ಬರಲಾರಂಭಿಸಿ ನೈವೇದ್ಯ, ಕಾಯಿಕರ್ಪೂರ ಸಲ್ಲಿಸಿ ಭಕ್ತಿಭಾವ ಮೆರೆದರು.</p>.<p>ಸಂಜೆಯಾಗುತ್ತಿದ್ದಂತೆ ಹಲಗೆ, ಡೊಳ್ಳು, ಭಾಜಾ-ಭಜಂತ್ರಿ ವಾದ್ಯಮೇಳದೊಂದಿಗೆ ಪುರವಂತರು ಸಹಿತ ಮೆರವಣಿಗೆ ಸಾಗಿ ದೇವಾಂಗ ಮಠದಿಂದ ಕುಂಭ, ಕಳಸ, ಮಿಣಿ ಹೊತ್ತು ಬಂದರು.</p>.<p>ದೇವಿಗೆ ಮಹಾಮಂಗಳಾರತಿ ಮಾಡಿ ಪುರವಂತರು ಸೇವೆ ಸಮರ್ಪಿಸಿದರು. ಹೂಹಾರಗಳ ಅಲಂಕೃತ ತೇರಿಗೆ ಪ್ರದಕ್ಷಿಣೆ ಹಾಕಿ ಕಳಸಾರೋಹಣ ಮಾಡಿದರು.</p>.<p>ಪುರವಂತರ ಕುಣಿತ ಮುಗಿಯುತ್ತಿದ್ದಂತೆ ಪಟಾಕಿ ಸದ್ದು ಆಕರ್ಷಿಸಿತು. ಉತ್ತತ್ತಿನಾರು, ಬಾಳೆಹಣ್ಣು, ಹೂವು ತೇರಿನ ಮೇಲೆ ತೂರಿಬಂದು ಜೈಘೋಷ ಮೊಳಗಿ ಭಕ್ತರು ತೇರು ಎಳೆದು ಕೃತಾರ್ಥರಾದರು. ವಿವಿಧೆಡೆಯಿಂದ ಆಗಮಿಸಿದ ಅಪಾರ ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡು ದೇವಿಯ ದರ್ಶನ ಮಾಡಿ ಧನ್ಯರಾದರು.</p>.<p>ಸ್ಥಳೀಯ ಹಿರೇಮಠದ ನೀಲಕಂಠ ಮರಿದೇವರು, ದೇವಾಂಗಮಠದ ಶಂಕ್ರಯ್ಯಸ್ವಾಮಿ ಸೇರಿದಂತೆ ದೇವಸ್ಥಾನ ಸಮಿತಿ ಪದಾಧಿಕಾರಿಗಳು, ಗಣ್ಯರು ಅನೇಕರು ಇದ್ದರು. ಪಿಎಸ್ಐ ತಿಮ್ಮಯ್ಯ ಬಿ.ಕೆ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.</p>.<p>ಜಾತ್ರೆ ನಿಮಿತ್ತ ಭಾನುವಾರ (ಡಿ.28) ದೀಪೋತ್ಸವ, ಧ್ವಜಾರೋಹಣ ಜರುಗಿತು. ಐದುದಿನ ರಾತ್ರಿ ಶಿವಶಂಕರ ಬಿರಾದಾರ, ರೇವಣಸಿದ್ದ ದೇಸಾಯಿ ಕಲ್ಲೂರ ಅವರಿಂದ ಪ್ರವಚನ. ಪಲ್ಲಕ್ಕಿ ಮೆರವಣಿಗೆ ಸಾಗಿತು.</p>.<p>ಇಂದು (ಜ.4) ಬೆಳಿಗ್ಗೆ 10 ಗಂಟೆಯಿಂದ ಸಂಜೆ 6ರ ವರೆಗೆ ಪ್ರಮುಖ ರಸ್ತೆಗಳಲ್ಲಿ ದೇವಿಯ ವಿಶೇಷ ಪಲ್ಲಕ್ಕಿ ಉತ್ಸವ ಮೇಳೈಸಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಾಳಗಿ:</strong> ದೇವಾಂಗ ಸಮಾಜದ ಕುಲದೇವತೆ ಇಲ್ಲಿನ ಬನಶಂಕರಿದೇವಿ ರಥೋತ್ಸವ ಶನಿವಾರ ರಾತ್ರಿ 8.30ಕ್ಕೆ ವೈಭವದಿಂದ ನೆರವೇರಿತು. ಬನದಹುಣ್ಣಿಮೆಯ ಈ ದಿನ ಪಟ್ಟಣದಲ್ಲಿ ಜಾತ್ರೆಯ ಕಳೆಕಟ್ಟಿ ಭಕ್ತರು ಸಡಗರ ಸಂಭ್ರಮದಲ್ಲಿ ತೇಲಾಡಿದರು. ದೇವಸ್ಥಾನದಲ್ಲಿ ಕುಂಭ ಹಾಕಿ, ಮುತ್ತೈದೆಯರಿಗೆ ಉಡಿ ತುಂಬಲಾಯಿತು.</p>.<p>ಬೆಳಿಗ್ಗೆಯಿಂದ ಭಕ್ತರು ದೇವಿಯ ಗುಡಿಗೆ ಬರಲಾರಂಭಿಸಿ ನೈವೇದ್ಯ, ಕಾಯಿಕರ್ಪೂರ ಸಲ್ಲಿಸಿ ಭಕ್ತಿಭಾವ ಮೆರೆದರು.</p>.<p>ಸಂಜೆಯಾಗುತ್ತಿದ್ದಂತೆ ಹಲಗೆ, ಡೊಳ್ಳು, ಭಾಜಾ-ಭಜಂತ್ರಿ ವಾದ್ಯಮೇಳದೊಂದಿಗೆ ಪುರವಂತರು ಸಹಿತ ಮೆರವಣಿಗೆ ಸಾಗಿ ದೇವಾಂಗ ಮಠದಿಂದ ಕುಂಭ, ಕಳಸ, ಮಿಣಿ ಹೊತ್ತು ಬಂದರು.</p>.<p>ದೇವಿಗೆ ಮಹಾಮಂಗಳಾರತಿ ಮಾಡಿ ಪುರವಂತರು ಸೇವೆ ಸಮರ್ಪಿಸಿದರು. ಹೂಹಾರಗಳ ಅಲಂಕೃತ ತೇರಿಗೆ ಪ್ರದಕ್ಷಿಣೆ ಹಾಕಿ ಕಳಸಾರೋಹಣ ಮಾಡಿದರು.</p>.<p>ಪುರವಂತರ ಕುಣಿತ ಮುಗಿಯುತ್ತಿದ್ದಂತೆ ಪಟಾಕಿ ಸದ್ದು ಆಕರ್ಷಿಸಿತು. ಉತ್ತತ್ತಿನಾರು, ಬಾಳೆಹಣ್ಣು, ಹೂವು ತೇರಿನ ಮೇಲೆ ತೂರಿಬಂದು ಜೈಘೋಷ ಮೊಳಗಿ ಭಕ್ತರು ತೇರು ಎಳೆದು ಕೃತಾರ್ಥರಾದರು. ವಿವಿಧೆಡೆಯಿಂದ ಆಗಮಿಸಿದ ಅಪಾರ ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡು ದೇವಿಯ ದರ್ಶನ ಮಾಡಿ ಧನ್ಯರಾದರು.</p>.<p>ಸ್ಥಳೀಯ ಹಿರೇಮಠದ ನೀಲಕಂಠ ಮರಿದೇವರು, ದೇವಾಂಗಮಠದ ಶಂಕ್ರಯ್ಯಸ್ವಾಮಿ ಸೇರಿದಂತೆ ದೇವಸ್ಥಾನ ಸಮಿತಿ ಪದಾಧಿಕಾರಿಗಳು, ಗಣ್ಯರು ಅನೇಕರು ಇದ್ದರು. ಪಿಎಸ್ಐ ತಿಮ್ಮಯ್ಯ ಬಿ.ಕೆ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.</p>.<p>ಜಾತ್ರೆ ನಿಮಿತ್ತ ಭಾನುವಾರ (ಡಿ.28) ದೀಪೋತ್ಸವ, ಧ್ವಜಾರೋಹಣ ಜರುಗಿತು. ಐದುದಿನ ರಾತ್ರಿ ಶಿವಶಂಕರ ಬಿರಾದಾರ, ರೇವಣಸಿದ್ದ ದೇಸಾಯಿ ಕಲ್ಲೂರ ಅವರಿಂದ ಪ್ರವಚನ. ಪಲ್ಲಕ್ಕಿ ಮೆರವಣಿಗೆ ಸಾಗಿತು.</p>.<p>ಇಂದು (ಜ.4) ಬೆಳಿಗ್ಗೆ 10 ಗಂಟೆಯಿಂದ ಸಂಜೆ 6ರ ವರೆಗೆ ಪ್ರಮುಖ ರಸ್ತೆಗಳಲ್ಲಿ ದೇವಿಯ ವಿಶೇಷ ಪಲ್ಲಕ್ಕಿ ಉತ್ಸವ ಮೇಳೈಸಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>