<p><strong>ಕಲಬುರ್ಗಿ: </strong>ಇಲ್ಲಿನ ಬಿದ್ದಾಪುರಕ್ಕೆ ಹೊಂದಿಕೊಂಡಂತಿರುವ ಬಸಂತನಗರದ ನಿವಾಸಿಗಳಿಗೆ ಪ್ರತಿ ಮಳೆಗಾಲ ದಿಗಿಲಿನ ರಾತ್ರಿಗಳನ್ನು ಹೊತ್ತು ತರುತ್ತದೆ. ಚರಂಡಿ ಕೃತಕ ಕೆರೆ ಸೃಷ್ಟಿಸುತ್ತದೆ.</p>.<p>ಅನೇಕ ಬಾರಿ ಮನವಿ ಮಾಡಿದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ಇಲ್ಲಿನ ನಿವಾಸಿಗಳುಹೇಳುತ್ತಾರೆ.</p>.<p>ವಾರ್ಡ್ ಸಂಖ್ಯೆ 54ಕ್ಕೆ ಒಳಪಡುವ ಈ ಪ್ರದೇಶದಲ್ಲಿಅಂದಾಜು400 ಕುಟುಂಬಗಳು ವಾಸವಾಗಿವೆ. ದೂರದ ಭೋಸಗಾದಿಂದ ಇಲ್ಲಿನ ಹೀರಾಪುರದ ಮಸೀದಿ ಬಳಿ ಹರಿದು ಬರುವ ಚರಂಡಿ ನೀರು ಇವರ ನೆಮ್ಮದಿಯನ್ನೇ ಕಿತ್ತುಕೊಂಡಿದೆ.</p>.<p>ರಾಜಕಾಲುವೆಯಲ್ಲಿ ಹೂಳು ತುಂಬಿರುವುದರಿಂದ ಮಳೆಗಾಲದಲ್ಲಿ ಈ ನೀರು ಮನೆಗಳಿಗೆ ನುಗ್ಗುತ್ತದೆ. ಸೂಚನೆ ಅರಿತ ಕೆಲವರು ಮನೆ ತೊರೆದು ಹಳ್ಳಿಗಳಲ್ಲಿರುವ ಸಂಬಂಧಿಕರ ಮನೆಗಳಿಗೆ ತೆರಳುತ್ತಾರೆ.</p>.<p>ಇನ್ನೂ ಕೆಲವರು ಮನೆ ಮುಂದೆ ಸಾಕಷ್ಟು ಮಣ್ಣು ಹಾಕಿಸಿಕೊಂಡು ನೀರು ನುಗ್ಗದಂತೆ ನೋಡಿಕೊಳ್ಳುತ್ತಾರೆ. ಈ ಎರಡೂ ಸಾಧ್ಯವಾಗದವರಿಗೆ ಜಾಗರಣೆ ಅನಿವಾರ್ಯ. ಇಲ್ಲಿ ದುಡಿಯುವ ವರ್ಗದವರೇ ಹೆಚ್ಚಾಗಿರುವುದರಿಂದ ಎರಡು ದಿನ ಕೆಲಸ ಬಿಟ್ಟು ಮನೆಗೆ ನುಗ್ಗಿದ ನೀರು ಹೊರ ಹಾಕುತ್ತಾರೆ.</p>.<p class="Subhead">ಶತ್ರುವಿನಂತೆ ಕಾಡುವ ತಗ್ಗು ಪ್ರದೇಶ: ಈ ಬಡಾವಣೆಯಲ್ಲಿ ನೆಲ ಸಮತಟ್ಟಾಗಿಲ್ಲ. ತಗ್ಗು ಪ್ರದೇಶ ಹೆಚ್ಚಾಗಿದೆ. ಆದ್ದರಿಂದ ಚರಂಡಿ ನೀರು ಹೊತ್ತು ನಿಲ್ಲುತ್ತದೆ. ಎಲ್ಲೆಂದರಲ್ಲಿ ಬೆಳೆದ ಮುಳ್ಳು–ಕಂಟಿ ವಿಷಜಂತುಗಳನ್ನು ಪೋಷಿಸುತ್ತಿದೆ. ಮಳೆಗಾಲದಲ್ಲಿ ನೀರಿನೊಂದಿಗೆ ಚೇಳು, ಹಾವು ಹಾಗೂ ತ್ಯಾಜ್ಯ ಮನೆ ಸೇರಿ ಜನರ ನೆಮ್ಮದಿ ಹಾಳು ಮಾಡುತ್ತವೆ.</p>.<p class="Subhead"><strong>ಸರ್ಕಸ್ ಮಾಡಿಸುವ ರಸ್ತೆ: </strong>ಈ ಬಡಾವಣೆಯಲ್ಲಿ ಕೆಲ ಕಡೆ ರಸ್ತೆ ನಿರ್ಮಿಸಲಾಗಿದೆ. ಇನ್ನೂ ಕೆಲವು ಕಡೆ ರಸ್ತೆ ನೋಡಲೂ ಸಿಗುವುದಿಲ್ಲ. ವಾಹನ ಸವಾರರು ನೀರು ನಿಂತ ಮಣ್ಣಿನ ರಸ್ತೆಗಳ ಗುಂಡಿಗಳಲ್ಲಿ ಸರ್ಕಸ್ ಮಾಡಬೇಕಾದ ಪರಿಸ್ಥಿತಿ ಇದೆ.</p>.<p class="Subhead">ಪಾಲಿಕೆಯವರು ನಿಯಮಿತವಾಗಿ ತ್ಯಾಜ್ಯ ವಿಲೇವಾರಿ ಮಾಡುವುದಿಲ್ಲ. ಆದ್ದರಿಂದ ಎಲ್ಲ ಕಡೆ ತ್ಯಾಜ್ಯ ಸಾಮಾನ್ಯವಾಗಿದೆ ಎನ್ನುತ್ತಾರೆ ನಿವಾಸಿಗಳು.</p>.<p class="Subhead">‘ಪ್ರತಿ ವರ್ಷವೂ ಈ ಸಮಸ್ಯೆ ಎದುರಾಗುತ್ತದೆ. ಚರಂಡಿ ಹೂಳು ತೆಗೆಯಬೇಕು ಎಂದು ಹಲವು ಬಾರಿ ಮನವಿ ಮಾಡಲಾಗಿದೆ. ಆದರೂ ಅಧಿಕಾರಿಗಳೂ ಇತ್ತ ಸುಳಿದಿಲ್ಲ’ ಎನ್ನುತ್ತಾರೆ ಇಲ್ಲಿನ ನಿವಾಸಿ ರಾಜು.</p>.<p>ಈ ಸಮಸ್ಯೆಗೆ ಮಹಾನಗರ ಪಾಲಿಕೆಯವರು ಶಾಶ್ವತ ಪರಿಹಾರ ಕಲ್ಪಿಸಬೇಕು. ಈ ಮೂಲಕ ನೆಮ್ಮದಿ ನೀಡಬೇಕು ಎಂದು ಒತ್ತಾಯಿಸುತ್ತಾರೆ ಇಲ್ಲಿನ ನಿವಾಸಿಗಳು.</p>.<p>* ಮಳೆಗಾಲದಲ್ಲಿ ಕೊಳಚೆ ಮಿಶ್ರಿತ ನೀರನ್ನು ದಾಟಿಕೊಂಡೇ ಮನೆ ಸೇರಬೇಕು. ರಾತ್ರಿ ವೇಳೆ ಹಾವು, ಚೇಳಿನ ಭಯ ಶುರುವಾಗುತ್ತದೆ. ಅಧಿಕಾರಿಗಳು ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕು.</p>.<p><em><strong>-ವಿಠ್ಠಲ ಆರ್.ಅಳಗಿ, ನಿವಾಸಿ</strong></em></p>.<p>* ಬಸಂತನಗರ ಬಡಾವಣೆಯಲ್ಲಿ ಸಮಸ್ಯೆ ಇರುವುದು ಗಮನಕ್ಕೆ ಬಂದಿಲ್ಲ. ಅಧಿಕಾರಿಗಳನ್ನು ಕಳುಹಿಸಿ ಪರಿಶೀಲಿಸುತ್ತೇವೆ. ಸಮಸ್ಯೆ ಪರಿಹರಿಸುತ್ತೇವೆ.</p>.<p><em><strong>-ಆರ್.ಪಿ. ಜಾಧವ, ಮಹಾನಗರ ಪಾಲಿಕೆ ಉಪ ಆಯುಕ್ತ (ಅಭಿವೃದ್ಧಿ)</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಲಬುರ್ಗಿ: </strong>ಇಲ್ಲಿನ ಬಿದ್ದಾಪುರಕ್ಕೆ ಹೊಂದಿಕೊಂಡಂತಿರುವ ಬಸಂತನಗರದ ನಿವಾಸಿಗಳಿಗೆ ಪ್ರತಿ ಮಳೆಗಾಲ ದಿಗಿಲಿನ ರಾತ್ರಿಗಳನ್ನು ಹೊತ್ತು ತರುತ್ತದೆ. ಚರಂಡಿ ಕೃತಕ ಕೆರೆ ಸೃಷ್ಟಿಸುತ್ತದೆ.</p>.<p>ಅನೇಕ ಬಾರಿ ಮನವಿ ಮಾಡಿದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ಇಲ್ಲಿನ ನಿವಾಸಿಗಳುಹೇಳುತ್ತಾರೆ.</p>.<p>ವಾರ್ಡ್ ಸಂಖ್ಯೆ 54ಕ್ಕೆ ಒಳಪಡುವ ಈ ಪ್ರದೇಶದಲ್ಲಿಅಂದಾಜು400 ಕುಟುಂಬಗಳು ವಾಸವಾಗಿವೆ. ದೂರದ ಭೋಸಗಾದಿಂದ ಇಲ್ಲಿನ ಹೀರಾಪುರದ ಮಸೀದಿ ಬಳಿ ಹರಿದು ಬರುವ ಚರಂಡಿ ನೀರು ಇವರ ನೆಮ್ಮದಿಯನ್ನೇ ಕಿತ್ತುಕೊಂಡಿದೆ.</p>.<p>ರಾಜಕಾಲುವೆಯಲ್ಲಿ ಹೂಳು ತುಂಬಿರುವುದರಿಂದ ಮಳೆಗಾಲದಲ್ಲಿ ಈ ನೀರು ಮನೆಗಳಿಗೆ ನುಗ್ಗುತ್ತದೆ. ಸೂಚನೆ ಅರಿತ ಕೆಲವರು ಮನೆ ತೊರೆದು ಹಳ್ಳಿಗಳಲ್ಲಿರುವ ಸಂಬಂಧಿಕರ ಮನೆಗಳಿಗೆ ತೆರಳುತ್ತಾರೆ.</p>.<p>ಇನ್ನೂ ಕೆಲವರು ಮನೆ ಮುಂದೆ ಸಾಕಷ್ಟು ಮಣ್ಣು ಹಾಕಿಸಿಕೊಂಡು ನೀರು ನುಗ್ಗದಂತೆ ನೋಡಿಕೊಳ್ಳುತ್ತಾರೆ. ಈ ಎರಡೂ ಸಾಧ್ಯವಾಗದವರಿಗೆ ಜಾಗರಣೆ ಅನಿವಾರ್ಯ. ಇಲ್ಲಿ ದುಡಿಯುವ ವರ್ಗದವರೇ ಹೆಚ್ಚಾಗಿರುವುದರಿಂದ ಎರಡು ದಿನ ಕೆಲಸ ಬಿಟ್ಟು ಮನೆಗೆ ನುಗ್ಗಿದ ನೀರು ಹೊರ ಹಾಕುತ್ತಾರೆ.</p>.<p class="Subhead">ಶತ್ರುವಿನಂತೆ ಕಾಡುವ ತಗ್ಗು ಪ್ರದೇಶ: ಈ ಬಡಾವಣೆಯಲ್ಲಿ ನೆಲ ಸಮತಟ್ಟಾಗಿಲ್ಲ. ತಗ್ಗು ಪ್ರದೇಶ ಹೆಚ್ಚಾಗಿದೆ. ಆದ್ದರಿಂದ ಚರಂಡಿ ನೀರು ಹೊತ್ತು ನಿಲ್ಲುತ್ತದೆ. ಎಲ್ಲೆಂದರಲ್ಲಿ ಬೆಳೆದ ಮುಳ್ಳು–ಕಂಟಿ ವಿಷಜಂತುಗಳನ್ನು ಪೋಷಿಸುತ್ತಿದೆ. ಮಳೆಗಾಲದಲ್ಲಿ ನೀರಿನೊಂದಿಗೆ ಚೇಳು, ಹಾವು ಹಾಗೂ ತ್ಯಾಜ್ಯ ಮನೆ ಸೇರಿ ಜನರ ನೆಮ್ಮದಿ ಹಾಳು ಮಾಡುತ್ತವೆ.</p>.<p class="Subhead"><strong>ಸರ್ಕಸ್ ಮಾಡಿಸುವ ರಸ್ತೆ: </strong>ಈ ಬಡಾವಣೆಯಲ್ಲಿ ಕೆಲ ಕಡೆ ರಸ್ತೆ ನಿರ್ಮಿಸಲಾಗಿದೆ. ಇನ್ನೂ ಕೆಲವು ಕಡೆ ರಸ್ತೆ ನೋಡಲೂ ಸಿಗುವುದಿಲ್ಲ. ವಾಹನ ಸವಾರರು ನೀರು ನಿಂತ ಮಣ್ಣಿನ ರಸ್ತೆಗಳ ಗುಂಡಿಗಳಲ್ಲಿ ಸರ್ಕಸ್ ಮಾಡಬೇಕಾದ ಪರಿಸ್ಥಿತಿ ಇದೆ.</p>.<p class="Subhead">ಪಾಲಿಕೆಯವರು ನಿಯಮಿತವಾಗಿ ತ್ಯಾಜ್ಯ ವಿಲೇವಾರಿ ಮಾಡುವುದಿಲ್ಲ. ಆದ್ದರಿಂದ ಎಲ್ಲ ಕಡೆ ತ್ಯಾಜ್ಯ ಸಾಮಾನ್ಯವಾಗಿದೆ ಎನ್ನುತ್ತಾರೆ ನಿವಾಸಿಗಳು.</p>.<p class="Subhead">‘ಪ್ರತಿ ವರ್ಷವೂ ಈ ಸಮಸ್ಯೆ ಎದುರಾಗುತ್ತದೆ. ಚರಂಡಿ ಹೂಳು ತೆಗೆಯಬೇಕು ಎಂದು ಹಲವು ಬಾರಿ ಮನವಿ ಮಾಡಲಾಗಿದೆ. ಆದರೂ ಅಧಿಕಾರಿಗಳೂ ಇತ್ತ ಸುಳಿದಿಲ್ಲ’ ಎನ್ನುತ್ತಾರೆ ಇಲ್ಲಿನ ನಿವಾಸಿ ರಾಜು.</p>.<p>ಈ ಸಮಸ್ಯೆಗೆ ಮಹಾನಗರ ಪಾಲಿಕೆಯವರು ಶಾಶ್ವತ ಪರಿಹಾರ ಕಲ್ಪಿಸಬೇಕು. ಈ ಮೂಲಕ ನೆಮ್ಮದಿ ನೀಡಬೇಕು ಎಂದು ಒತ್ತಾಯಿಸುತ್ತಾರೆ ಇಲ್ಲಿನ ನಿವಾಸಿಗಳು.</p>.<p>* ಮಳೆಗಾಲದಲ್ಲಿ ಕೊಳಚೆ ಮಿಶ್ರಿತ ನೀರನ್ನು ದಾಟಿಕೊಂಡೇ ಮನೆ ಸೇರಬೇಕು. ರಾತ್ರಿ ವೇಳೆ ಹಾವು, ಚೇಳಿನ ಭಯ ಶುರುವಾಗುತ್ತದೆ. ಅಧಿಕಾರಿಗಳು ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕು.</p>.<p><em><strong>-ವಿಠ್ಠಲ ಆರ್.ಅಳಗಿ, ನಿವಾಸಿ</strong></em></p>.<p>* ಬಸಂತನಗರ ಬಡಾವಣೆಯಲ್ಲಿ ಸಮಸ್ಯೆ ಇರುವುದು ಗಮನಕ್ಕೆ ಬಂದಿಲ್ಲ. ಅಧಿಕಾರಿಗಳನ್ನು ಕಳುಹಿಸಿ ಪರಿಶೀಲಿಸುತ್ತೇವೆ. ಸಮಸ್ಯೆ ಪರಿಹರಿಸುತ್ತೇವೆ.</p>.<p><em><strong>-ಆರ್.ಪಿ. ಜಾಧವ, ಮಹಾನಗರ ಪಾಲಿಕೆ ಉಪ ಆಯುಕ್ತ (ಅಭಿವೃದ್ಧಿ)</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>