‘ಬರಗೂರರು ತಮ್ಮ ಕಾದಂಬರಿ ಭರತ್ ನಗರಿಯಲ್ಲಿ ರಾಷ್ಟ್ರಗೀತೆ ಬಗ್ಗೆ ಅತ್ಯಂತ ಅವಹೇಳನಕಾರಿಯಾಗಿ ಬರೆದಿದ್ದಾರೆ ಎಂಬ ವದಂತಿ ಹಬ್ಬಿಸಿ, ತೇಜೋವಧೆ ಮಾಡುವ ಹುನ್ನಾರದಿಂದ ಸುಳ್ಳು ಕೇಸು ದಾಖಲಿಸಲಾಗಿದೆ. ದೂರು ನೀಡುವ ಧಾವಂತದಲ್ಲಿ ಬಿಜೆಪಿ ಸರ್ಕಾರದವರು ಇನ್ನೊಂದು ಹೊಸ ಬದಲಾವಣೆ ಗಮನಿಸಿಲ್ಲ. ಕೆಲ ತಿಂಗಳ ಹಿಂದೆ ಸಮಗ್ರ ಸಾಹಿತ್ಯ ಸಂಪುಟಗಳನ್ನು ಹೊರತಂದಿರುವ ಬರಗೂರರು ಅದರಲ್ಲಿ ಪರಿಷ್ಕರಣೆಯನ್ನೂ ಮಾಡಿದ್ದಾರೆ’ ಎಂದು ಅವರು ತಿಳಿಸಿದ್ದಾರೆ.