‘ಗೋಷ್ಠಿ ನಡೆಸಲಿ ಅಥವಾ ಬಿಡಲಿ, ನಾವಂತೂ ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಳ್ಳೋಣ. ಸಮಸ್ಯೆ ತೋಡಿಕೊಳ್ಳೋಣ ಎಂದು ಬಂದೆವು. ಮಾತನಾಡಲು ನಮಗೆ ಕನಿಷ್ಠ 10 ನಿಮಿಷ ಕಾಲಾವಕಾಶ ಸಿಗುವುದು ಎಂಬ ನಿರೀಕ್ಷೆ ಇತ್ತು. ಆದರೆ, ಸಮ್ಮೇಳನದ ಆಯೋಜಕರು ಗುರುವಾರ ಬದಲು ಶುಕ್ರವಾರ ಸಮಾರೋಪ ಸಮಾರಂಭದಲ್ಲಿ ಅವಕಾಶ ಕಲ್ಪಿಸಲು ಪ್ರಯತ್ನಿಸಲಾಗುವುದು ಎಂದರು. ಇದರಿಂದ ನಮಗೆ ತುಂಬಾ ಬೇಸರವಾಯಿತು' ಎಂದು ತಿಳಿಸಿದರು.