ಗುಡ್ಡೇವಾಡಿ ಗ್ರಾಮದ ಗುರು ಚಾಂದಕೋಟೆ, ಕೊಳ್ಳೂರ ಗ್ರಾಮದ ಭಾಗಣ್ಣ ಕುಂಬಾರ, ಸಿದ್ದು ಹಿಂದಿನಮನಿ ಮಾಹಿತಿ ನೀಡಿ, ‘ನಮ್ಮ ಗ್ರಾಮಕ್ಕೆ ಕಾಲುವೆ ಬಂದು 20 ವರ್ಷ ಕಳೆದರೂ ಒಂದು ದಿನವೂ ಕಾಲುವೆಗೆ ನೀರು ಹರಿದಿಲ್ಲ. ಕಾಲುವೆ ನಿರ್ಮಾಣವಾದಾಗ ಬಹಳ ಸಂತಸವಾಗಿತ್ತು. ಇದರಿಂದ ವರ್ಷದಲ್ಲಿ ಎರಡು ಬೆಳೆ ಬೆಳೆಯಲು ಅನುಕೂಲವಾಗುತ್ತಿತ್ತು. ನೀರೇ ಬರಲಿಲ್ಲ’ ಎಂದು ಅವರು
ಹೇಳಿದರು.