ಘಟನೆ: ಗುರುವಾರ ಸಂಜೆ ಅದೇ ಶಾಲಾ ಬಸ್ನಿಂದ ಪುತ್ರ ಭುವನನನ್ನು ಕರೆತರಲು ಬಾಲಕಿಯ ಸೋದರತ್ತೆ ಸುಧಾರಾಣಿ ತೆರಳಿದ್ದರು. ಅವರೊಂದಿಗೆ ಬಾಲಕಿಯೂ ರಸ್ತೆಯಲ್ಲಿದ್ದಳು. ಚಾಲಕ ಸರಿಯಾಗಿ ಗಮನಿಸದೆ ವೇಗವಾಗಿ ವಾಹನ ಚಲಾಯಿಸಿದ್ದು, ಬಾಲಕಿಯ ಮೇಲೆ ಬಸ್ ಚಕ್ರ ಹತ್ತಿದೆ. ಇದರಿಂದ ಬಾಲಕಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ ಎಂದು ವೆಂಕಟೇಶ ತಿಳಿಸಿದರು.