ನನ್ನ ಸೋಲು ಪ್ರಧಾನಿ ಬಾಯಿಂದ ಬಂತು: ಸದನದಲ್ಲಿ ಪ್ರಧಾನಿ ಮೋದಿ ಅವರ ವಿಚಾರಗಳನ್ನು ಪ್ರಶ್ನಿಸುತ್ತಿದ್ದೆ. ಅದಕ್ಕಾಗಿಯೇ ಪ್ರಧಾನಿ ಹುದ್ದೆಯಲ್ಲಿದ್ದ ಮೋದಿ ಅವರು ಮುಂದಿನ ಸದನದಲ್ಲಿ ನೀವು ಇರುವುದಿಲ್ಲ ಎಂದಿದ್ದರು. ಅವರು ನನ್ನನ್ನು ಸೋಲಿಸಿರಬಹುದು. ಆದರೆ ನಾನು ನಂಬಿದ ಗಾಂಧಿ ಮಾರ್ಗದ ತತ್ವವನ್ನು ಬಿಡುವುದಿಲ್ಲ. ನಾನು ಮೊದಲ ಬಾರಿ ಸೋತಿದ್ದೇನೆ. ಅದಕ್ಕೆ ನನಗೆ ಬೇಸರವಿಲ್ಲ. ಆದರೆ, ಮೋದಿ-ಶಾ ಜೋಡಿ ಸಂವಿಧಾನವನ್ನು ಮುಗಿಸಲು ಹೊರಟಿದೆ. ಅದಕ್ಕೆ ಬೇಸರವಿದೆ ಎಂದು ಭಾವುಕರಾದರು.