ಸಿದ್ದರಾಮಯ್ಯ ಅವರಂತಹ ದೊಡ್ಡ ಜಾತಿವಾದಿ ಯಾರೂ ಇಲ್ಲ. ಕಳೆದ ಬಾರಿ ವೀರಶೈವ-ಲಿಂಗಾಯತರ ಮಧ್ಯೆ ಒಡಕುಂಟು ಮಾಡಿ ಜಗಳ ಹಚ್ಚಿ ಧರ್ಮ ಒಡೆಯಲು ನೋಡಿದರು. ನಳಿನ್ ಕುಮಾರ್ ಕಟೀಲ್ ಅವರಂತಹ ಸಜ್ಜನ ವ್ಯಕ್ತಿಯನ್ನು ಭಯೋತ್ಪಾದಕ ಎಂದು ಕರೆಯುತ್ತಾರೆ. ಜೊತೆಗೆ ಜಮೀರ್ ಅಹ್ಮದ್ ಅಂಥವರನ್ನು ಜೊತೆಯಲ್ಲಿಟ್ಟುಕೊಳ್ಳುತ್ತಾರೆ. ಶ್ರೀಮಂತ ಕುಳಗಳನ್ನು ಆರಿಸಿ ಟಿಕೆಟ್ ಕೊಟ್ಟಿದ್ದನ್ನು ಪ್ರಶ್ನಿಸಿದ್ದಕ್ಕೆ ನನ್ನನ್ನು ಪೆದ್ದ ಎನ್ನುತ್ತಾರೆ. ಅವರಿಗೆ ಪೆದ್ದ ಎನ್ನಬೇಕೇ, ದಡ್ಡ ಎನ್ನಬೇಕೇ ಎಂದು ಪ್ರಶ್ನಿಸಿದರು.