ಕಲಬುರ್ಗಿ ಜಿಲ್ಲೆಯ ಹಳ್ಳಿಗಳಲ್ಲಿ ಈಗ ಕೊರೊನಾ ವೈರಾಣು ಉಪಟಳ ಮಿತಿಮೀರಿದೆ. ಮುಂಗಾರು ಹಂಗಾಮಿಗೆ ಸಜ್ಜಾಗಬೇಕಿದ್ದ ರೈತಾಪಿ ವರ್ಗ ಒಂದು ಸೂಕ್ಷ್ಮಜೀವಿಯಿಂದಾಗಿ ಮನೆ ಹಿಡಿದು ಕುಳಿತುಕೊಳ್ಳುವಂತಾಗಿದೆ. ಇಷ್ಟಾದರೂ ಜಿಲ್ಲಾಡಳಿತ ಅಗತ್ಯ ವೈದ್ಯಕೀಯ ವ್ಯವಸ್ಥೆ, ಚಿಕಿತ್ಸೆ, ಕಾಳಜಿ ಮಾಡುವಲ್ಲಿ ಹಿಂದೆ ಬಿದ್ದಿದೆ. ಎಲ್ಲಿ ಏನಿದೆ? ಏನಿಲ್ಲ? ಏನು ಬೇಕು ಎಂಬ ಪ್ರತ್ಯಕ್ಷ್ಯ ವರದಿ ಇಲ್ಲಿದೆ.