‘ಪೊಲೀಸ್ ಇಲಾಖೆಯಿಂದ ನಾವು ಯಾರಿಗೂ ಪಾಸ್ ಕೊಡುತ್ತಿಲ್ಲ. ವಿವಿಧ ಸಂಸ್ಥೆಗಳು, ರಾಜಕೀಯ ಪಕ್ಷಗಳು, ಸಂಘಟನೆಗಳ ಮುಖಂಡರು ತಮ್ಮ ಸದಸ್ಯರಿಗೆ ಗುರುತಿನ ಚೀಟಿಯನ್ನು ವಿತರಿಸಬೇಕು. ಎಷ್ಟು ಗುರುತಿನ ಚೀಟಿ ಕೊಟ್ಟಿದ್ದಾರೆ. ಅದರ ಸಂಖ್ಯೆ ಏನು ಎಂಬ ಮಾಹಿತಿಯನ್ನು ಇಲಾಖೆಗೆ ಸಲ್ಲಿಸಬೇಕು. ಒಂದೊಮ್ಮೆ ಅಂಥವರ ವಾಹನ ಹಿಡಿದಾಗ ಗುರುತಿನ ಚೀಟಿ ತೋರಿಸಿದಾಗ ಅವರನ್ನು ಮುಂದೆ ಹೋಗಲು ಅವಕಾಶ ನೀಡಲಾಗುತ್ತದೆ’ ಎಂದು ಸತೀಶಕುಮಾರ್ ತಿಳಿಸಿದರು.