<p>ಪ್ರಜಾವಾಣಿ ವಾರ್ತೆ</p>.<p>ಶಹಾಬಾದ್: ಜನಪದವು ನಶಿಸಿ ಹೋಗದಂತೆ ಹಿರಿಯ ತಲೆಮಾರಿನವರು ತಮ್ಮಲ್ಲಿನ ಕಲೆಯನ್ನು ಯುವ ಸಮುದಾಯಕ್ಕೆ ಕಲಿಸುವ ಮೂಲಕ ಜಾನಪದ ಉಳಿಸಬೇಕಾಗಿದೆ ಎಂದು ಸಿದ್ದೇಶ್ವರ ಶಾಸ್ತ್ರಿಗಳು<br />ಹೇಳಿದ್ದಾರೆ.</p>.<p>ತಾಲ್ಲೂಕಿನ ದೇವನತೆಗನೂರ ಗ್ರಾಮದಲ್ಲಿ ಸರಸ್ವತಿ ಸಾಂಸ್ಕೃತಿಕ ಕಲಾ ಟ್ರಸ್ಟ್ ವತಿಯಿಂದ ಗುರುವಾರ ಆಯೋಜಿಸಲಾಗಿದ್ದ ಗ್ರಾಮೀಣ<br />ಜನಪದ ಉತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು<br />ಮಾತನಾಡಿದರು.</p>.<p>ಸರಸ್ವತಿ ಸಾಂಸ್ಕೃತಿಕ ಕಲಾ ಟ್ರಸ್ಟ್ ಕಾರ್ಯದರ್ಶಿ ಮಹೇಶ ದೇವಣಿ ಅಧ್ಯಕ್ಷತೆ ವಹಿಸಿ ಮಾತನಾಡಿ, ‘ದೇಶದ ಭವ್ಯ ಪರಂಪರೆ ಸಾರುವ ಜನಪದ ಸಂಸ್ಕೃತಿ ಭಾರತೀಯರ ಜೀವಾಳ. ಜನಪದ ಕಲೆ, ಸಾಹಿತ್ಯ, ಸಂಸ್ಕೃತಿ, ಪರಂಪರೆಯನ್ನು ಪ್ರತಿಯೊಬ್ಬರು ಅಳವಡಿಸಿಕೊಂಡು ಮುಂದಿನ ಜನಾಂಗಕ್ಕೆ<br />ವರ್ಗಾಯಿಸಿದರೆ, ಅವರ ಬದುಕು ಸುಂದರ ಹಾಗೂ ಸಮೃದ್ಧವಾಗಲು ಸಾಧ್ಯವಿದೆ’<br />ಎಂದರು.</p>.<p>ರೈತ ಸಂಘದ ಅಧ್ಯಕ್ಷ ಅಪ್ಪಾಸಾಬ ಸರಡಗಿ, ಹಣಮಂತರಾಯ ಶಂಕರವಾಡಿ, ಕಲ್ಯಾಣಪ್ಪ ಸಿರವಾಳ, ಸಿದ್ದು ದೇವಣಿ ಸಿದ್ದಾರಾಮ ಸೇರಿದಂತೆ ಅನೇಕರು ಇದ್ದರು.<br />ಜಾನಪದ ಗಾಯನವನ್ನು ಸಾವಿತ್ರಿ.ಬಿ ತತ್ವಪದ, ಸಿದ್ದು.ಎಸ್<br />ಸೋಭಾನ ಪದ, ಸಂಗೀತಾ.ಡಿ<br />ಜೋಗುಳ ಪದ ಹಾಡಿದರು, ಶ್ರುತಿ ದತ್ತುಕುಮಾರ ಅವರಿಂದ ಭರತ ನಾಟ್ಯ ನಡೆಯಿತು.<br />ಚೇತನಕುಮಾರ ಬೀದಿಮನಿ ಮತ್ತು ಶಿವಕುಮಾರ ಅವರಿಂದ ಹಾಮೋನಿಯಂ, ಸೋಮು ಕಲ್ಯಾಣಿ ಮತ್ತು ವಿಜಯಕುಮಾರ ಅವರು ತಬಲಾ ಸೇವೆ ನೀಡಿದರು.</p>.<p>ಉತ್ಸವದಲ್ಲಿ ಕಲಾವಿದರು, ಗ್ರಾಮಸ್ಥರು, ಯುವಕರು ಇದ್ದರು</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಪ್ರಜಾವಾಣಿ ವಾರ್ತೆ</p>.<p>ಶಹಾಬಾದ್: ಜನಪದವು ನಶಿಸಿ ಹೋಗದಂತೆ ಹಿರಿಯ ತಲೆಮಾರಿನವರು ತಮ್ಮಲ್ಲಿನ ಕಲೆಯನ್ನು ಯುವ ಸಮುದಾಯಕ್ಕೆ ಕಲಿಸುವ ಮೂಲಕ ಜಾನಪದ ಉಳಿಸಬೇಕಾಗಿದೆ ಎಂದು ಸಿದ್ದೇಶ್ವರ ಶಾಸ್ತ್ರಿಗಳು<br />ಹೇಳಿದ್ದಾರೆ.</p>.<p>ತಾಲ್ಲೂಕಿನ ದೇವನತೆಗನೂರ ಗ್ರಾಮದಲ್ಲಿ ಸರಸ್ವತಿ ಸಾಂಸ್ಕೃತಿಕ ಕಲಾ ಟ್ರಸ್ಟ್ ವತಿಯಿಂದ ಗುರುವಾರ ಆಯೋಜಿಸಲಾಗಿದ್ದ ಗ್ರಾಮೀಣ<br />ಜನಪದ ಉತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು<br />ಮಾತನಾಡಿದರು.</p>.<p>ಸರಸ್ವತಿ ಸಾಂಸ್ಕೃತಿಕ ಕಲಾ ಟ್ರಸ್ಟ್ ಕಾರ್ಯದರ್ಶಿ ಮಹೇಶ ದೇವಣಿ ಅಧ್ಯಕ್ಷತೆ ವಹಿಸಿ ಮಾತನಾಡಿ, ‘ದೇಶದ ಭವ್ಯ ಪರಂಪರೆ ಸಾರುವ ಜನಪದ ಸಂಸ್ಕೃತಿ ಭಾರತೀಯರ ಜೀವಾಳ. ಜನಪದ ಕಲೆ, ಸಾಹಿತ್ಯ, ಸಂಸ್ಕೃತಿ, ಪರಂಪರೆಯನ್ನು ಪ್ರತಿಯೊಬ್ಬರು ಅಳವಡಿಸಿಕೊಂಡು ಮುಂದಿನ ಜನಾಂಗಕ್ಕೆ<br />ವರ್ಗಾಯಿಸಿದರೆ, ಅವರ ಬದುಕು ಸುಂದರ ಹಾಗೂ ಸಮೃದ್ಧವಾಗಲು ಸಾಧ್ಯವಿದೆ’<br />ಎಂದರು.</p>.<p>ರೈತ ಸಂಘದ ಅಧ್ಯಕ್ಷ ಅಪ್ಪಾಸಾಬ ಸರಡಗಿ, ಹಣಮಂತರಾಯ ಶಂಕರವಾಡಿ, ಕಲ್ಯಾಣಪ್ಪ ಸಿರವಾಳ, ಸಿದ್ದು ದೇವಣಿ ಸಿದ್ದಾರಾಮ ಸೇರಿದಂತೆ ಅನೇಕರು ಇದ್ದರು.<br />ಜಾನಪದ ಗಾಯನವನ್ನು ಸಾವಿತ್ರಿ.ಬಿ ತತ್ವಪದ, ಸಿದ್ದು.ಎಸ್<br />ಸೋಭಾನ ಪದ, ಸಂಗೀತಾ.ಡಿ<br />ಜೋಗುಳ ಪದ ಹಾಡಿದರು, ಶ್ರುತಿ ದತ್ತುಕುಮಾರ ಅವರಿಂದ ಭರತ ನಾಟ್ಯ ನಡೆಯಿತು.<br />ಚೇತನಕುಮಾರ ಬೀದಿಮನಿ ಮತ್ತು ಶಿವಕುಮಾರ ಅವರಿಂದ ಹಾಮೋನಿಯಂ, ಸೋಮು ಕಲ್ಯಾಣಿ ಮತ್ತು ವಿಜಯಕುಮಾರ ಅವರು ತಬಲಾ ಸೇವೆ ನೀಡಿದರು.</p>.<p>ಉತ್ಸವದಲ್ಲಿ ಕಲಾವಿದರು, ಗ್ರಾಮಸ್ಥರು, ಯುವಕರು ಇದ್ದರು</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>