<p><strong>ಜೇವರ್ಗಿ: </strong>ತಾಲ್ಲೂಕು ಕೇಂದ್ರದಿಂದ 4 ಕಿ.ಮೀ ಅಂತರದಲ್ಲಿರುವ ಚನ್ನೂರ ಗ್ರಾಮವು ನಾಡಿನ ಪ್ರಥಮ ಮುಸ್ಲಿಂ ತತ್ವಪದಕಾರ ಜಲಾಲ ಸಾಹೇಬರು ಹಾಗೂ ಸೂಫಿ ಸಂತ ದಾವಲ ಮಲೀಕ್ ಸಾಹೇಬರ ಹುಟ್ಟೂರು.</p>.<p>17ನೇ ಶತಮಾನದಲ್ಲಿ ಜೇವರ್ಗಿಯ ಶ್ರೇಷ್ಠ ವಚನಕಾರ ಷಣ್ಮುಖ ಶಿವಯೋಗಿಗಳು, ತತ್ವ ಪದಕಾರರಾದ ಕಡಕೋಳದ ಮಡಿವಾಳಪ್ಪ, ರಾಮಪೂರದ ಬಕ್ಕಪ್ಪಯ್ಯ ಪ್ರಭುಗಳು ಸೇರಿದಂತೆ ಅನೇಕ ಶರಣರು, ಸಂತರು, ದಾರ್ಶನಿಕರು, ಸೂಫಿಗಳು ಬಾಳಿ ಬೆಳಗಿದ ಪುಣ್ಯಭೂಮಿ ಜೇವರ್ಗಿ ತಾಲ್ಲೂಕು.</p>.<p>ಷಣ್ಮುಖ ಶಿವಯೋಗಿಗಳು ತಮ್ಮ ವಚನಗಳ ಮೂಲಕ ಸಮಾಜದಲ್ಲಿ ಬೇರೂರಿದ್ದ ಮೂಢನಂಬಿಕೆ, ಕಂದಾಚಾರಗಳನ್ನು ತೊಡೆದು ಹಾಕಲು ಅವಿರತವಾಗಿ ಶ್ರಮಿಸಿದ್ದರು. ಕಡಕೋಳದ ಮಡಿವಾಳಪ್ಪ, ರಾಮಪೂರದ ಬಕ್ಕಪ್ಪಯ್ಯ ಪ್ರಭುಗಳು ತತ್ವಪದಗಳ ಮೂಲಕ ಸಮಾಜದಲ್ಲಿ ಸಾಮರಸ್ಯ ಮೂಡಿಸಲು ಅವಿರತವಾಗಿ ಶ್ರಮಿಸಿದರು.</p>.<p>ಸೂಫಿ ಸಂತ ಚನ್ನೂರಿನ ದಾವಲ ಮಲೀಕ್ ಸಾಹೇಬರು ಸಮಾನತೆ, ಸಾಮರಸ್ಯದ ಚಿಂತಕರಾಗಿದ್ದರು. ದಾವಲ ಮಲೀಕ್ ದರ್ಗಾ ಭಾವೈಕ್ಯಕ್ಕೆ ಹೆಸರು ವಾಸಿಯಾದ ಪ್ರಮುಖ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾಗಿದೆ. ದಾವಲ ಮಲೀಕ್ ದರ್ಗಾದಲ್ಲಿ ಅವರ ಮಜ್ಹರ (ಸಮಾಧಿ) ಇದೆ.</p>.<p>ಸರಳ, ಸಜ್ಜನಿಕೆ ಮೈಗೂಡಿಸಿಕೊಂಡಿದ್ದ ದಾವಲ ಮಲೀಕ್ ಸಾಹೇಬರು ಭಕ್ತರ ಕಷ್ಟ, ಕಾರ್ಪಣ್ಯಗಳನ್ನು ತೊಡೆದು ಹಾಕಲು ಧರ್ಮ ಮಾರ್ಗ ಅನುಸರಿಸುತ್ತಿದ್ದರು. ಸಾತ್ವಿಕ ಬದುಕು, ಸರಳತೆಯನ್ನು ಬದುಕಿನಲ್ಲಿ ಅಳವಡಿಸಿಕೊಂಡು ತಾಲ್ಲೂಕಿನ ಅನೇಕ ಜನ ಶರಣರು, ಸಂತರು, ವಚನಕಾರರು, ತತ್ವ ಪದಕಾರರೊಂದಿಗೆ ಒಡನಾಟ ಹೊಂದಿದ್ದರು.</p>.<p><strong>ಭಾವೈಕ್ಯದ ತಾಣ</strong></p>.<p>ಕಲಬುರ್ಗಿ ಸೇರಿದಂತೆ ರಾಜ್ಯ ಮತ್ತು ಹೊರರಾಜ್ಯಗಳ ಭಕ್ತರು ಚನ್ನೂರ ದಾವಲ ಮಲೀಕ್ ದರ್ಗಾಕ್ಕೆ ಭೇಟಿ ನೀಡಿ ಹರಕೆ ತೀರಿಸುತ್ತಾರೆ. ಹಿಂದೂ– ಮುಸ್ಲಿಂ ಸೇರಿದಂತೆ ಸರ್ವಧರ್ಮೀಯರು ದಾವಲ ಮಲೀಕ್ ಸಾಹೇಬರ ದರ್ಗಾಕ್ಕೆ ಭೇಟಿ ನೀಡುತ್ತಾರೆ.</p>.<p><strong>ಅನುದಾನಕ್ಕೆ ಆಗ್ರಹ</strong></p>.<p>ದಾವಲ ಮಲೀಕ್ ದರ್ಗಾಕ್ಕೆ ಭೇಟಿ ನೀಡುವ ಭಕ್ತರಿಗೆ ಅನುಕೂಲ ಕಲ್ಪಿಸಲು ಯಾತ್ರಿ ನಿವಾಸ್, ಕುಡಿಯುವ ನೀರಿನ ಸೌಲಭ್ಯ, ವಿದ್ಯುತ್ ಸೌಲಭ್ಯ, ಅಡುಗೆ ಕೋಣೆಗಳ ನಿರ್ಮಾಣಕ್ಕೆ ಕ್ಷೇತ್ರದ ಶಾಸಕ ಡಾ.ಅಜಯ ಸಿಂಗ್ಅನುದಾನ ಬಿಡುಗಡೆ ಮಾಡಬೇಕು ಎಂಬುದು ಗ್ರಾಮಸ್ಥರ ಆಗ್ರಹವಾಗಿದೆ.</p>.<p>ಪ್ರತಿ ವರ್ಷ ರಂಜಾನ್ ಹಬ್ಬದ 15 ದಿನಗಳ ನಂತರ ದಾವಲ ಮಲೀಕ್ ಜಾತ್ರಾ ಮಹೋತ್ಸವ ನಡೆಯುತ್ತದೆ. ಚನ್ನೂರ ಮತ್ತು ಬುಟ್ನಾಳ ಗ್ರಾಮಸ್ಥರು ಸೇರಿ ಗಂಧ, ದೀಪೋತ್ಸವ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ನೆರವೇರಿಸುತ್ತಾರೆ.</p>.<p><strong>ಜಾತ್ರೆ</strong></p>.<p>ಪ್ರತಿ ವರ್ಷ ರಂಜಾನ್ ಮಾಸ ಪೂರ್ಣಗೊಂಡ ನಂತರ 20 ದಿನಗಳ ಅಂತರದಲ್ಲಿ ನಡೆಯುವ ದಾವಲ ಮಲೀಕ್ ಜಾತ್ರಾ ಮಹೋತ್ಸವದಲ್ಲಿ ಸಹಸ್ರಾರು ಜನ ಭಾಗವಹಿಸುತ್ತಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಜೇವರ್ಗಿ: </strong>ತಾಲ್ಲೂಕು ಕೇಂದ್ರದಿಂದ 4 ಕಿ.ಮೀ ಅಂತರದಲ್ಲಿರುವ ಚನ್ನೂರ ಗ್ರಾಮವು ನಾಡಿನ ಪ್ರಥಮ ಮುಸ್ಲಿಂ ತತ್ವಪದಕಾರ ಜಲಾಲ ಸಾಹೇಬರು ಹಾಗೂ ಸೂಫಿ ಸಂತ ದಾವಲ ಮಲೀಕ್ ಸಾಹೇಬರ ಹುಟ್ಟೂರು.</p>.<p>17ನೇ ಶತಮಾನದಲ್ಲಿ ಜೇವರ್ಗಿಯ ಶ್ರೇಷ್ಠ ವಚನಕಾರ ಷಣ್ಮುಖ ಶಿವಯೋಗಿಗಳು, ತತ್ವ ಪದಕಾರರಾದ ಕಡಕೋಳದ ಮಡಿವಾಳಪ್ಪ, ರಾಮಪೂರದ ಬಕ್ಕಪ್ಪಯ್ಯ ಪ್ರಭುಗಳು ಸೇರಿದಂತೆ ಅನೇಕ ಶರಣರು, ಸಂತರು, ದಾರ್ಶನಿಕರು, ಸೂಫಿಗಳು ಬಾಳಿ ಬೆಳಗಿದ ಪುಣ್ಯಭೂಮಿ ಜೇವರ್ಗಿ ತಾಲ್ಲೂಕು.</p>.<p>ಷಣ್ಮುಖ ಶಿವಯೋಗಿಗಳು ತಮ್ಮ ವಚನಗಳ ಮೂಲಕ ಸಮಾಜದಲ್ಲಿ ಬೇರೂರಿದ್ದ ಮೂಢನಂಬಿಕೆ, ಕಂದಾಚಾರಗಳನ್ನು ತೊಡೆದು ಹಾಕಲು ಅವಿರತವಾಗಿ ಶ್ರಮಿಸಿದ್ದರು. ಕಡಕೋಳದ ಮಡಿವಾಳಪ್ಪ, ರಾಮಪೂರದ ಬಕ್ಕಪ್ಪಯ್ಯ ಪ್ರಭುಗಳು ತತ್ವಪದಗಳ ಮೂಲಕ ಸಮಾಜದಲ್ಲಿ ಸಾಮರಸ್ಯ ಮೂಡಿಸಲು ಅವಿರತವಾಗಿ ಶ್ರಮಿಸಿದರು.</p>.<p>ಸೂಫಿ ಸಂತ ಚನ್ನೂರಿನ ದಾವಲ ಮಲೀಕ್ ಸಾಹೇಬರು ಸಮಾನತೆ, ಸಾಮರಸ್ಯದ ಚಿಂತಕರಾಗಿದ್ದರು. ದಾವಲ ಮಲೀಕ್ ದರ್ಗಾ ಭಾವೈಕ್ಯಕ್ಕೆ ಹೆಸರು ವಾಸಿಯಾದ ಪ್ರಮುಖ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾಗಿದೆ. ದಾವಲ ಮಲೀಕ್ ದರ್ಗಾದಲ್ಲಿ ಅವರ ಮಜ್ಹರ (ಸಮಾಧಿ) ಇದೆ.</p>.<p>ಸರಳ, ಸಜ್ಜನಿಕೆ ಮೈಗೂಡಿಸಿಕೊಂಡಿದ್ದ ದಾವಲ ಮಲೀಕ್ ಸಾಹೇಬರು ಭಕ್ತರ ಕಷ್ಟ, ಕಾರ್ಪಣ್ಯಗಳನ್ನು ತೊಡೆದು ಹಾಕಲು ಧರ್ಮ ಮಾರ್ಗ ಅನುಸರಿಸುತ್ತಿದ್ದರು. ಸಾತ್ವಿಕ ಬದುಕು, ಸರಳತೆಯನ್ನು ಬದುಕಿನಲ್ಲಿ ಅಳವಡಿಸಿಕೊಂಡು ತಾಲ್ಲೂಕಿನ ಅನೇಕ ಜನ ಶರಣರು, ಸಂತರು, ವಚನಕಾರರು, ತತ್ವ ಪದಕಾರರೊಂದಿಗೆ ಒಡನಾಟ ಹೊಂದಿದ್ದರು.</p>.<p><strong>ಭಾವೈಕ್ಯದ ತಾಣ</strong></p>.<p>ಕಲಬುರ್ಗಿ ಸೇರಿದಂತೆ ರಾಜ್ಯ ಮತ್ತು ಹೊರರಾಜ್ಯಗಳ ಭಕ್ತರು ಚನ್ನೂರ ದಾವಲ ಮಲೀಕ್ ದರ್ಗಾಕ್ಕೆ ಭೇಟಿ ನೀಡಿ ಹರಕೆ ತೀರಿಸುತ್ತಾರೆ. ಹಿಂದೂ– ಮುಸ್ಲಿಂ ಸೇರಿದಂತೆ ಸರ್ವಧರ್ಮೀಯರು ದಾವಲ ಮಲೀಕ್ ಸಾಹೇಬರ ದರ್ಗಾಕ್ಕೆ ಭೇಟಿ ನೀಡುತ್ತಾರೆ.</p>.<p><strong>ಅನುದಾನಕ್ಕೆ ಆಗ್ರಹ</strong></p>.<p>ದಾವಲ ಮಲೀಕ್ ದರ್ಗಾಕ್ಕೆ ಭೇಟಿ ನೀಡುವ ಭಕ್ತರಿಗೆ ಅನುಕೂಲ ಕಲ್ಪಿಸಲು ಯಾತ್ರಿ ನಿವಾಸ್, ಕುಡಿಯುವ ನೀರಿನ ಸೌಲಭ್ಯ, ವಿದ್ಯುತ್ ಸೌಲಭ್ಯ, ಅಡುಗೆ ಕೋಣೆಗಳ ನಿರ್ಮಾಣಕ್ಕೆ ಕ್ಷೇತ್ರದ ಶಾಸಕ ಡಾ.ಅಜಯ ಸಿಂಗ್ಅನುದಾನ ಬಿಡುಗಡೆ ಮಾಡಬೇಕು ಎಂಬುದು ಗ್ರಾಮಸ್ಥರ ಆಗ್ರಹವಾಗಿದೆ.</p>.<p>ಪ್ರತಿ ವರ್ಷ ರಂಜಾನ್ ಹಬ್ಬದ 15 ದಿನಗಳ ನಂತರ ದಾವಲ ಮಲೀಕ್ ಜಾತ್ರಾ ಮಹೋತ್ಸವ ನಡೆಯುತ್ತದೆ. ಚನ್ನೂರ ಮತ್ತು ಬುಟ್ನಾಳ ಗ್ರಾಮಸ್ಥರು ಸೇರಿ ಗಂಧ, ದೀಪೋತ್ಸವ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ನೆರವೇರಿಸುತ್ತಾರೆ.</p>.<p><strong>ಜಾತ್ರೆ</strong></p>.<p>ಪ್ರತಿ ವರ್ಷ ರಂಜಾನ್ ಮಾಸ ಪೂರ್ಣಗೊಂಡ ನಂತರ 20 ದಿನಗಳ ಅಂತರದಲ್ಲಿ ನಡೆಯುವ ದಾವಲ ಮಲೀಕ್ ಜಾತ್ರಾ ಮಹೋತ್ಸವದಲ್ಲಿ ಸಹಸ್ರಾರು ಜನ ಭಾಗವಹಿಸುತ್ತಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>