‘ಕಲಬುರ್ಗಿಯಲ್ಲಿ ಮಂಗಳವಾರ ಬೆಳಿಗ್ಗೆ ನಡೆದ ಸಮಾಲೋಚನಾ ಸಭೆಯಲ್ಲಿ ಸಾಹಿತ್ಯಾಸಕ್ತರು ಮಂಡಿಸಿದ ಅಭಿಪ್ರಾಯಗಳನ್ನು ಒಪ್ಪಿಕೊಂಡಿದ್ದೇನೆ. ಕಲ್ಯಾಣ ಕರ್ನಾಟಕ ಅಭಿವೃದ್ಧಿಯ ಸವಾಲುಗಳು ಹಾಗೂ ಪರಿಹಾರಗಳು, ನೈಸರ್ಗಿಕ ವಿಕೋಪ, ದಲಿತ ಬಂಡಾಯ ಸಾಹಿತ್ಯಗೋಷ್ಠಿ, ಈ ಭಾಗದ ತತ್ವಪದಕಾರರು, ಶರಣರು, ಸಂತರ ಕೊಡುಗೆಗಳು, ಚಿತ್ರಕಲೆ, ಸಂಗೀತ, ಕೃಷಿ, ನೀರಾವರಿ ಬಗ್ಗೆಯೂ ಗೋಷ್ಠಿಗಳನ್ನು ನಡೆಸಲಾಗುವುದು. ಈ ಭಾಗದ ಪ್ರತಿಭೆಗಳಿಗೆ ಅನ್ಯಾಯ ಆಗದಂತೆಯೂ ಸಮ್ಮೇಳನದಲ್ಲಿ ಎಚ್ಚರ ವಹಿಸಲಾಗುವುದು’ ಎಂದರು.