1970ರ ದಶಕದಲ್ಲಿ ಹೋರಾಟದ ಹಾಡುಗಳು ಸಮಾಜ ಬದಲಾವಣೆಯಲ್ಲಿ ಬಹುದೊಡ್ಡ ಪಾತ್ರವನ್ನು ನಿರ್ವಹಿಸಿದ್ದವು. ಕವಿ, ಹೋರಾಟಗಾರರಾಗಿದ್ದ ಚಂದ್ರಪ್ರಸಾದ್ ತ್ಯಾಗಿ, ಸಿದ್ದಲಿಂಗಯ್ಯ, ಕೆ.ಬಿ. ಸಿದ್ದಯ್ಯ, ಕೋಟಗಾನಹಳ್ಳಿ ರಾಮಯ್ಯ ಅವರ ಕವಿತೆಗಳು ಜನಜನಿತವಾಗಿದ್ದವು. ದೇವನೂರು ಮಹಾದೇವ ಅವರ ಕುಸುಮಬಾಲೆಯಲ್ಲಿ ತ್ಯಾಗಿ ಅವರ ಪಾತ್ರವನ್ನು ಸೃಷ್ಟಿಸಿದ್ದರು. ಹಾಸನದಲ್ಲಿ ಜೀತ ಮಾಡುತ್ತಿದ್ದ ವ್ಯಕ್ತಿ ಹೋರಾಟದ ಹಾಡುಗಳನ್ನು ಕೇಳಿ ಜೀತವನ್ನೇ ಬಿಟ್ಟು ದಲಿತ ಸಂಘರ್ಷ ಸಮಿತಿ ಕಾರ್ಯಕರ್ತನಾದನು ಎಂದು ಸ್ಮರಿಸಿದರು.