<p><strong>ಆಳಂದ (ಕಲಬುರಗಿ ಜಿಲ್ಲೆ):</strong> ಉತ್ತರ ಪ್ರದೇಶದ ಅಯೋಧ್ಯೆಗೆ ಬೀದರ್ನ ಪ್ರವಾಸಿಗರನ್ನು ಕರೆದುಹೊಯ್ಯುತ್ತಿದ್ದ ಸಂದರ್ಭದಲ್ಲಿ ಅಪಘಾತಕ್ಕೀಡಾಗಿ ಮೃತಪಟ್ಟ ಟೆಂಪೊ ಟ್ರಾವೆಲರ್ ಚಾಲಕ ವಿಠಲ ಅಂಬಾರಾಯ ಮರಡಿ (35) ಪಾರ್ಥಿವ ಶರೀರದ ಅಂತ್ಯಕ್ರಿಯೆ ಸ್ವಗ್ರಾಮ ಗುಂಜ ಬಬಲಾದನಲ್ಲಿ ಸೋಮವಾರ ಸಂಜೆ ನಡೆಯಿತು.</p>.<p>ಅವರಿಗೆ ತಂದೆ, ತಾಯಿ, ಪತ್ನಿ, ಇಬ್ಬರು ಪುತ್ರರು ಇದ್ದಾರೆ.</p>.<p><a href="https://www.prajavani.net/district/bidar/bidar-and-kalaburagi-people-killed-in-road-accidents-in-lakhimpur-kheri-uttar-pradesh-940735.html" target="_blank">ಉತ್ತರಪ್ರದೇಶ ರಸ್ತೆ ಅಪಘಾತದಲ್ಲಿ ಬೀದರ್ನ 7, ಕಲಬುರಗಿಯ ಒಬ್ಬರು ಸ್ಥಳದಲ್ಲೇ ಸಾವು</a></p>.<p>ಕಲಬುರ್ಗಿಯಲ್ಲಿ ಟೆಂಪೊ, ಕಾರು ಚಾಲಕರಾಗಿದ್ದ ವಿಠಲ ಮರಡಿ, ಅಯೋಧ್ಯೆ ಸೇರಿದಂತೆ ಉತ್ತರ ಭಾರತದ ವಿವಿಧ ಯಾತ್ರಾ ಸ್ಥಳಗಳಿಗೆ ಪ್ರವಾಸಕ್ಕೆ ಯಾತ್ರಿಗಳನ್ನು ಕರೆದೊಯ್ದಿದ್ದರು.</p>.<p>ನೌನಿಹಾಲ್ನ ಖೇರಿ-ನನ್ಪಾರಾ ಹೆದ್ದಾರಿಯಲ್ಲಿ ಭಾನುವಾರ ಸಂಭವಿಸಿದ ಭೀಕರ ಅಪಘಾತದಲ್ಲಿ ವಿಠಲ ಸೇರಿದಂತೆ ಬೀದರ್ನ ಎಂಟು ಜನ ಮೃತಪಟ್ಟಿದ್ದರು.</p>.<p>ಸೋಮವಾರ ಸಂಜೆ ಉತ್ತರ ಪ್ರದೇಶದಿಂದ ಹೈದರಾಬಾದ್ವರೆಗೆ ವಿಮಾನದ ಮೂಲಕ ವಿಠಲ ಪಾರ್ಥಿವ ಶರೀರವನ್ನು ತರಲಾಯಿತು.</p>.<p>ಕುಟುಂಬದವರ ಆಕ್ರಂದನದ ನಡುವೆ ಅಂತ್ಯಸಂಸ್ಕಾರ ನಡೆಯಿತು.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>
<p><strong>ಆಳಂದ (ಕಲಬುರಗಿ ಜಿಲ್ಲೆ):</strong> ಉತ್ತರ ಪ್ರದೇಶದ ಅಯೋಧ್ಯೆಗೆ ಬೀದರ್ನ ಪ್ರವಾಸಿಗರನ್ನು ಕರೆದುಹೊಯ್ಯುತ್ತಿದ್ದ ಸಂದರ್ಭದಲ್ಲಿ ಅಪಘಾತಕ್ಕೀಡಾಗಿ ಮೃತಪಟ್ಟ ಟೆಂಪೊ ಟ್ರಾವೆಲರ್ ಚಾಲಕ ವಿಠಲ ಅಂಬಾರಾಯ ಮರಡಿ (35) ಪಾರ್ಥಿವ ಶರೀರದ ಅಂತ್ಯಕ್ರಿಯೆ ಸ್ವಗ್ರಾಮ ಗುಂಜ ಬಬಲಾದನಲ್ಲಿ ಸೋಮವಾರ ಸಂಜೆ ನಡೆಯಿತು.</p>.<p>ಅವರಿಗೆ ತಂದೆ, ತಾಯಿ, ಪತ್ನಿ, ಇಬ್ಬರು ಪುತ್ರರು ಇದ್ದಾರೆ.</p>.<p><a href="https://www.prajavani.net/district/bidar/bidar-and-kalaburagi-people-killed-in-road-accidents-in-lakhimpur-kheri-uttar-pradesh-940735.html" target="_blank">ಉತ್ತರಪ್ರದೇಶ ರಸ್ತೆ ಅಪಘಾತದಲ್ಲಿ ಬೀದರ್ನ 7, ಕಲಬುರಗಿಯ ಒಬ್ಬರು ಸ್ಥಳದಲ್ಲೇ ಸಾವು</a></p>.<p>ಕಲಬುರ್ಗಿಯಲ್ಲಿ ಟೆಂಪೊ, ಕಾರು ಚಾಲಕರಾಗಿದ್ದ ವಿಠಲ ಮರಡಿ, ಅಯೋಧ್ಯೆ ಸೇರಿದಂತೆ ಉತ್ತರ ಭಾರತದ ವಿವಿಧ ಯಾತ್ರಾ ಸ್ಥಳಗಳಿಗೆ ಪ್ರವಾಸಕ್ಕೆ ಯಾತ್ರಿಗಳನ್ನು ಕರೆದೊಯ್ದಿದ್ದರು.</p>.<p>ನೌನಿಹಾಲ್ನ ಖೇರಿ-ನನ್ಪಾರಾ ಹೆದ್ದಾರಿಯಲ್ಲಿ ಭಾನುವಾರ ಸಂಭವಿಸಿದ ಭೀಕರ ಅಪಘಾತದಲ್ಲಿ ವಿಠಲ ಸೇರಿದಂತೆ ಬೀದರ್ನ ಎಂಟು ಜನ ಮೃತಪಟ್ಟಿದ್ದರು.</p>.<p>ಸೋಮವಾರ ಸಂಜೆ ಉತ್ತರ ಪ್ರದೇಶದಿಂದ ಹೈದರಾಬಾದ್ವರೆಗೆ ವಿಮಾನದ ಮೂಲಕ ವಿಠಲ ಪಾರ್ಥಿವ ಶರೀರವನ್ನು ತರಲಾಯಿತು.</p>.<p>ಕುಟುಂಬದವರ ಆಕ್ರಂದನದ ನಡುವೆ ಅಂತ್ಯಸಂಸ್ಕಾರ ನಡೆಯಿತು.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>