<p>ಕಲಬುರಗಿ: ‘ತಾಂತ್ರಿಕ ಅಭಿವೃದ್ಧಿ ಮತ್ತು ತಂತ್ರಾಂಶದಲ್ಲಿ ಭಾರತವು ಅಭಿವೃದ್ಧಿ ಹೊಂದಿದ ರಾಷ್ಟ್ರಗಳಿಗೆ ಸಮನಾಗಿದೆ’ ಎಂದು ಮಹಾರಾಷ್ಟ್ರ ಯಶವಂತರಾವ್ ಚೌವಾಣ ಮುಕ್ತ ವಿಶ್ವವಿದ್ಯಾಲಯದ ಮಾಜಿ ಕುಲಪತಿ ಪ್ರೊ.ಇ.ಎ. ವಯುನಂದನ ಹೇಳಿದರು.</p>.<p>ಆಳಂದ ತಾಲ್ಲೂಕಿನ ಕಡಗಂಚಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ‘ಡಿಜಿಟಲ್ ಇಂಡಿಯಾದ ಅನುಷ್ಠಾನದ ಪರಿಣಾಮದ ಮೌಲ್ಯಮಾಪನ’ ಕುರಿತು ಹಮ್ಮಿಕೊಂಡ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.</p>.<p>‘ತಂತ್ರಜ್ಞಾನವನ್ನು ನಮ್ಮ ಅನುಕೂಲಕ್ಕಾಗಿ ಬಳಸಬೇಕೆ ವಿನಃ ಅದಕ್ಕಾಗಿ ನಾವಾಗಬಾರದು. ಆಡಳಿತವನ್ನು ಮನೆ ಬಾಗಿಲಿಗೆ ತರಲು ಇ-ಆಡಳಿತವನ್ನು ಪ್ರಾರಂಭಿಸಲಾಯಿತು. ಆದ್ದರಿಂದ ತಳಮಟ್ಟದಿಂದ ಸಂಸತ್ತಿನವರೆಗೆ ಸರ್ಕಾರವು ಇ-ಆಡಳಿತವನ್ನು ಜಾರಿಗೆ ತಂದಿದೆ. ಇದರಿಂದ ಜನರ ಜೀವನದಲ್ಲಿ ಪರಿವರ್ತನೆಯಾಗಿರುವುದನ್ನು ನೋಡಬಹುದಾಗಿದೆ’ ಎಂದು ಹೇಳಿದರು.</p>.<p>ಡಿಜಿಟಲ್ ತಂತ್ರಜ್ಞಾನದ ಅಳವಡಿಕೆಯು ಆಡಳಿತದಲ್ಲಿ ದಕ್ಷತೆ, ಸಮಯದ ಉಳಿತಾಯ, ಭ್ರಷ್ಟಾಚಾರ ಮತ್ತು ಸಂಘರ್ಷ ಮುಕ್ತತೆ, ಕಾರ್ಯಾಚರಣೆಯ ವೆಚ್ಚದ ಕಡಿತ, ಪಾರದರ್ಶಕತೆ ಮತ್ತು ವರ್ಧಿತ ಹೆಚ್ಚಿನ ಹೊಣೆಗಾರಿಕೆಯಂತಹ ಅನೇಕ ಪ್ರಯೋಜನಗಳಾಗಿವೆ’ ಎಂದರು.</p>.<p>ಗುಲಬರ್ಗಾ ವಿಶ್ವವಿದ್ಯಾಲಯದ ಕಂಪ್ಯೂಟರ್ ಸೈನ್ಸ್ ವಿಭಾಗದ ನಿವೃತ್ತ ಪ್ರಾಧ್ಯಾಪಕ ಪ್ರೊ. ಬಿ.ವಿ.ದಾಂಡ್ರಾ, ಪ್ರೊ. ವೈ.ಪಾರ್ಥಸಾರಥಿ, ಸಮಾಜ ವಿಜ್ಞಾನ ನಿಕಾಯದ ಡೀನ್ ಪ್ರೊ. ಚನ್ನವೀರ ಆರ್.ಎಂ. ಮಾತನಾಡಿದರು.</p>.<p>ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ ಅಧ್ಯಕ್ಷತೆ ವಹಿಸಿ, ‘ಸಂಶೋಧನೆಗಳು ಪದೊನ್ನತಿಗಾಗಿ ಇರಬಾರದು, ಬದಲಾಗಿ ಸಾಮಾಜಿಕ ಸಮಸ್ಯೆಗಳನ್ನು ಪರಿಹರಿಸಬೇಕು. ವಿಶ್ವವಿದ್ಯಾಲಯದ ಎಲ್ಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಮುಂದೆ ಬಂದು ತಮ್ಮ ಸುತ್ತಲಿನ ಸಮಸ್ಯೆಗಳ ಬಗ್ಗೆ ಕೆಲಸ ಮಾಡಬೇಕು’ ಎಂದರು.</p>.<p>‘ನಮ್ಮ ವಿಶ್ವವಿದ್ಯಾಲಯವು ಪಿಎಂ ಉಜ್ವಲ್, ಸ್ಕಿಲ್ ಇಂಡಿಯಾ, ಪಿಎಂ ಕಿಸಾನ್ ಸಮ್ಮಾನ್ ಮತ್ತು ಡಿಜಿಟಲ್ ಇಂಡಿಯಾ ಯೋಜನೆಗಳ ಮೌಲ್ಯಮಾಪನದಲ್ಲಿ ಕೆಲಸ ಮಾಡಿದೆ. ಈ ಅಧ್ಯಯನಗಳ ಸಂಶೋಧನೆಗಳು ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳಲು ಸರ್ಕಾರಕ್ಕೆ ಸಹಾಯ ಮಾಡಲಿವೆ’ ಎಂದು ಹೇಳಿದರು.</p>.<p>ಯೋಜನಾ ನಿರ್ದೇಶಕ ಡಾ. ಸಂದೀಪ್ ಇನಾಮಪುಡಿ ಸ್ವಾಗತಿಸಿದರು. ಗುರುರಾಜ್ ಮುಕರಂಬಿ, ದಿನೇಶ ಗೆಹ್ಲೋಟ್, ಸುಪ್ರಿಯಾ ಡೇವಿಡ್, ಮಲ್ಲಿಕಾರ್ಜುನ್ ಹೂಗಾರ್, ಅಲೋಕ್ ಗೌರವ್, ಕಿರಣ್ ಗಜನೂರು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕಲಬುರಗಿ: ‘ತಾಂತ್ರಿಕ ಅಭಿವೃದ್ಧಿ ಮತ್ತು ತಂತ್ರಾಂಶದಲ್ಲಿ ಭಾರತವು ಅಭಿವೃದ್ಧಿ ಹೊಂದಿದ ರಾಷ್ಟ್ರಗಳಿಗೆ ಸಮನಾಗಿದೆ’ ಎಂದು ಮಹಾರಾಷ್ಟ್ರ ಯಶವಂತರಾವ್ ಚೌವಾಣ ಮುಕ್ತ ವಿಶ್ವವಿದ್ಯಾಲಯದ ಮಾಜಿ ಕುಲಪತಿ ಪ್ರೊ.ಇ.ಎ. ವಯುನಂದನ ಹೇಳಿದರು.</p>.<p>ಆಳಂದ ತಾಲ್ಲೂಕಿನ ಕಡಗಂಚಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ‘ಡಿಜಿಟಲ್ ಇಂಡಿಯಾದ ಅನುಷ್ಠಾನದ ಪರಿಣಾಮದ ಮೌಲ್ಯಮಾಪನ’ ಕುರಿತು ಹಮ್ಮಿಕೊಂಡ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.</p>.<p>‘ತಂತ್ರಜ್ಞಾನವನ್ನು ನಮ್ಮ ಅನುಕೂಲಕ್ಕಾಗಿ ಬಳಸಬೇಕೆ ವಿನಃ ಅದಕ್ಕಾಗಿ ನಾವಾಗಬಾರದು. ಆಡಳಿತವನ್ನು ಮನೆ ಬಾಗಿಲಿಗೆ ತರಲು ಇ-ಆಡಳಿತವನ್ನು ಪ್ರಾರಂಭಿಸಲಾಯಿತು. ಆದ್ದರಿಂದ ತಳಮಟ್ಟದಿಂದ ಸಂಸತ್ತಿನವರೆಗೆ ಸರ್ಕಾರವು ಇ-ಆಡಳಿತವನ್ನು ಜಾರಿಗೆ ತಂದಿದೆ. ಇದರಿಂದ ಜನರ ಜೀವನದಲ್ಲಿ ಪರಿವರ್ತನೆಯಾಗಿರುವುದನ್ನು ನೋಡಬಹುದಾಗಿದೆ’ ಎಂದು ಹೇಳಿದರು.</p>.<p>ಡಿಜಿಟಲ್ ತಂತ್ರಜ್ಞಾನದ ಅಳವಡಿಕೆಯು ಆಡಳಿತದಲ್ಲಿ ದಕ್ಷತೆ, ಸಮಯದ ಉಳಿತಾಯ, ಭ್ರಷ್ಟಾಚಾರ ಮತ್ತು ಸಂಘರ್ಷ ಮುಕ್ತತೆ, ಕಾರ್ಯಾಚರಣೆಯ ವೆಚ್ಚದ ಕಡಿತ, ಪಾರದರ್ಶಕತೆ ಮತ್ತು ವರ್ಧಿತ ಹೆಚ್ಚಿನ ಹೊಣೆಗಾರಿಕೆಯಂತಹ ಅನೇಕ ಪ್ರಯೋಜನಗಳಾಗಿವೆ’ ಎಂದರು.</p>.<p>ಗುಲಬರ್ಗಾ ವಿಶ್ವವಿದ್ಯಾಲಯದ ಕಂಪ್ಯೂಟರ್ ಸೈನ್ಸ್ ವಿಭಾಗದ ನಿವೃತ್ತ ಪ್ರಾಧ್ಯಾಪಕ ಪ್ರೊ. ಬಿ.ವಿ.ದಾಂಡ್ರಾ, ಪ್ರೊ. ವೈ.ಪಾರ್ಥಸಾರಥಿ, ಸಮಾಜ ವಿಜ್ಞಾನ ನಿಕಾಯದ ಡೀನ್ ಪ್ರೊ. ಚನ್ನವೀರ ಆರ್.ಎಂ. ಮಾತನಾಡಿದರು.</p>.<p>ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ ಅಧ್ಯಕ್ಷತೆ ವಹಿಸಿ, ‘ಸಂಶೋಧನೆಗಳು ಪದೊನ್ನತಿಗಾಗಿ ಇರಬಾರದು, ಬದಲಾಗಿ ಸಾಮಾಜಿಕ ಸಮಸ್ಯೆಗಳನ್ನು ಪರಿಹರಿಸಬೇಕು. ವಿಶ್ವವಿದ್ಯಾಲಯದ ಎಲ್ಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಮುಂದೆ ಬಂದು ತಮ್ಮ ಸುತ್ತಲಿನ ಸಮಸ್ಯೆಗಳ ಬಗ್ಗೆ ಕೆಲಸ ಮಾಡಬೇಕು’ ಎಂದರು.</p>.<p>‘ನಮ್ಮ ವಿಶ್ವವಿದ್ಯಾಲಯವು ಪಿಎಂ ಉಜ್ವಲ್, ಸ್ಕಿಲ್ ಇಂಡಿಯಾ, ಪಿಎಂ ಕಿಸಾನ್ ಸಮ್ಮಾನ್ ಮತ್ತು ಡಿಜಿಟಲ್ ಇಂಡಿಯಾ ಯೋಜನೆಗಳ ಮೌಲ್ಯಮಾಪನದಲ್ಲಿ ಕೆಲಸ ಮಾಡಿದೆ. ಈ ಅಧ್ಯಯನಗಳ ಸಂಶೋಧನೆಗಳು ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳಲು ಸರ್ಕಾರಕ್ಕೆ ಸಹಾಯ ಮಾಡಲಿವೆ’ ಎಂದು ಹೇಳಿದರು.</p>.<p>ಯೋಜನಾ ನಿರ್ದೇಶಕ ಡಾ. ಸಂದೀಪ್ ಇನಾಮಪುಡಿ ಸ್ವಾಗತಿಸಿದರು. ಗುರುರಾಜ್ ಮುಕರಂಬಿ, ದಿನೇಶ ಗೆಹ್ಲೋಟ್, ಸುಪ್ರಿಯಾ ಡೇವಿಡ್, ಮಲ್ಲಿಕಾರ್ಜುನ್ ಹೂಗಾರ್, ಅಲೋಕ್ ಗೌರವ್, ಕಿರಣ್ ಗಜನೂರು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>