‘ಕಟ್ಟಿದ್ದ ಜೋಪಡಿ (ಗುಡಿಸಲು)ಗಳು ಮಳೆ ನೀರಿನ ರಭಸಕ್ಕೆ ನುಚ್ಚುನೂರಾಗಿವೆ. ಗುಡಿಸಲಲ್ಲಿದ್ದ ಸಾಮಗ್ರಿಗಳು, ಬಟ್ಟೆ, ದಿನಸಿ ವಸ್ತು, ದವಸ ಧಾನ್ಯಗಳು ನದಿ ಪಾಲಾಗಿವೆ. ಸದ್ಯ ತಾತ್ಕಾಲಿಕವಾಗಿ ಸಿಕ್ಕ ಬೆಚ್ಚಗಿರುವ ಸ್ಥಳದಲ್ಲಿಯೇ ಮಲಗುತ್ತಿದ್ದೇವೆ. ಪರ್ಯಾಯ ಮಾರ್ಗವಿಲ್ಲದೆ ಸಾಮಗ್ರಿ ಜೋಡಿಸಿ ಮತ್ತೆ ಮೀನುಗಾರಿಕೆ ಮಾಡುವ ಪ್ರಯತ್ನದಲ್ಲಿದ್ದೇವೆ’ ಎನ್ನುತ್ತಾರೆ ಮೀನುಗಾರರು.