ಶನಿವಾರ, 5 ಜುಲೈ 2025
×
ADVERTISEMENT
ADVERTISEMENT

ಕಲಬುರಗಿ: ಮನೆ ಮನೆಗೂ ಮಣ್ಣಿನ ಗಣೇಶ

Published : 15 ಸೆಪ್ಟೆಂಬರ್ 2023, 5:13 IST
Last Updated : 15 ಸೆಪ್ಟೆಂಬರ್ 2023, 5:13 IST
ಫಾಲೋ ಮಾಡಿ
Comments
ಮಣ್ಣಿನ ಮೂರ್ತಿಗಳನ್ನು ಮನೆಯಲ್ಲೇ ನೀರಿನಲ್ಲಿ ವಿಸರ್ಜಿಸಿ ಆ ಮಣ್ಣನ್ನು ಗಿಡಗಳಿಗೆ ಬಳಸಬಹುದು. ಕುಂಡಗಳಲ್ಲಿ ಹಾಕಿ ಸಸಿಗಳನ್ನು ನೆಡಬಹುದು
- ಪ್ರಕಾಶ ದಾದಾಪುರ, ಬಸವ ಬುಕ್‌ಸ್ಟಾಲ್‌ ಮಾಲೀಕ
ಮಣ್ಣಿನ ಮೂರ್ತಿಗಳು ಕಲಾವಿದರ ತಾಳ್ಮೆಯನ್ನು ಕೇಳುವುದರಿಂದ ಪಿಒಪಿಗಿಂತ ದರ ಸ್ವಲ್ಪ ಹೆಚ್ಚೆನಿಸಬಹುದು. ಹಾಗಂತ ಪರಿಸರಕ್ಕೆ ವಿಷ ಹಾಕಬಾರದು
- ಸಂಗಮೇಶ, ಸ್ವದೇಶಿ ಮಳಿಗೆ ಮಾಲೀಕ
ಗಣೇಶ ಹಬ್ಬ ಶುರುವಾಗುವ ಮೂರು ತಿಂಗಳು ಮುಂಚೆಯೇ ನಾವು ಕೆಲಸಕ್ಕೆ ಅಣಿಯಾಗುತ್ತೇವೆ. ಅಲಂಕಾರಕ್ಕೆ ಜಲವರ್ಣ ನೈಸರ್ಗಿಕ ಬಣ್ಣಗಳನ್ನು ಬಳಸುತ್ತೇವೆ
ಮಲ್ಲಿಕಾರ್ಜುನ, ಕಲಾವಿದ
ಸಾರ್ವಜನಿಕ ಗಣಪಗೆ ಬೇಕು ಅನುಮತಿ
ಈ ಮೊದಲು ಮನೆಗೆ ಮಾತ್ರ ಸೀಮಿತವಾಗಿದ್ದ ಬೆನಕನನ್ನು ಸಾರ್ವಜನಿಕವಾಗಿ ಪ್ರತಿಷ್ಠಾಪಿಸಿದ್ದು ಸ್ವಾತಂತ್ರ್ಯ ಹೋರಾಟಗಾರ ಬಾಲಗಂಗಾಧರ ತಿಲಕ ಅವರು. ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಹೋರಾಟಗಾರರು ಸಭೆ ಸೇರಲು ಬ್ರಿಟಿಷರು ಅವಕಾಶ ನೀಡದೇ ಇದ್ದಾಗ ಗಣೇಶನನ್ನು ಸಾರ್ವಜನಿಕವಾಗಿ ಪ್ರತಿಷ್ಠಾಪಿಸಿ ಹಬ್ಬ ಆಚರಿಸಿ ಅಲ್ಲಿಯೇ ಸ್ವಾತಂತ್ರ್ಯ ಹೋರಾಟದ ರೂಪುರೇಷೆಗಳನ್ನು ಹೆಣೆಯುತ್ತಿದ್ದರು. ಹೀಗಾಗಿ ಇಂದಿಗೂ ಮಹಾರಾಷ್ಟ್ರದಲ್ಲಿ ಗಣೇಶೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಕಲಬುರಗಿ ನಗರದಲ್ಲೂ ಹಲವೆಡೆ ಸಾರ್ವಜನಿಕವಾಗಿ ಗಣಪತಿಯನ್ನು ಪ್ರತಿಷ್ಠಾಪಿಸಲಾಗುತ್ತದೆ. ಅದಕ್ಕಾಗಿ ಪಾಲಿಕೆ ವತಿಯಿಂದ ಅನುಮತಿ ಪಡೆಯಬೇಕಾಗುತ್ತದೆ. ಈಗಾಗಲೇ ಅರ್ಜಿಗಳು ಬಂದಿವೆ ಎಂದು ಮಹಾನಗರ ಪಾಲಿಕೆ ಉಪ ಆಯುಕ್ತ(ಅಭಿವೃದ್ಧಿ) ಆರ್‌.ಪಿ.ಜಾಧವ ತಿಳಿಸಿದರು.
ಮೂರ್ತಿ ತಯಾರಿಸುವ ಪ್ರಕ್ರಿಯೆ
ಮೊದಲು ಮಣ್ಣನ್ನು ಸಂಗ್ರಹಿಸಿ ಸೋಸಲಾಗುತ್ತದೆ. ಬಳಿಕ ಅದನ್ನು ಯಂತ್ರಗಳಿಗೆ ಹಾಕಿ ಮತ್ತಷ್ಟು ಪುಡಿ ಮಾಡಲಾಗುತ್ತದೆ. ನಂತರ 1 ವಾರ ನೆನೆ ಹಾಕಿ ಅದಕ್ಕೆ ಹತ್ತಿ ತೆಂಗಿನಕಾಯಿ ನಾರು ಸೇರಿಸಲಾಗುತ್ತದೆ. ಮತ್ತೆ ಒಂದು ವಾರದ ಬಳಿಕ ಮೂರ್ತಿ ತಯಾರಿಕೆಗೆ ಅಣಿ ಮಾಡಲಾಗುತ್ತದೆ. ಬೇರೆ ಬೇರೆ ಅಂಗಗಳನ್ನು ತಯಾರಿಸಿ ಬಳಿಕ ಜೋಡಿಸಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT