ಮನೆಯೊಳಗೆ ನುಗ್ಗುವ ಕಲುಷಿತ ನೀರಿನ ಜತೆಗೆ ವಿಷಜಂತುಗಳು, ಕ್ರಿಮಿ ಕೀಟಗಳ ಭಯದಲ್ಲೇ ಕಾಲ ಕಳೆಯಬೇಕಿದೆ. ಪ್ರತಿ ವರ್ಷ ಗ್ರಾಮಕ್ಕೆ ನುಗ್ಗುವ ನೀರು ಹಲವು ಮನೆಗಳ ತಳಪಾಯ ಸಡಿಲಗೊಳಿಸುತ್ತಿದೆ. ಕಳೆದ ವರ್ಷ 3 ಬಾರಿ ಗ್ರಾಮಕ್ಕೆ ನುಗ್ಗಿತ್ತು. ಇದು ಗ್ರಾಮಸ್ಥರನ್ನು ಹೈರಾಣಾಗಿಸಿತ್ತು. ಪಾತ್ರೆ, ಸಾಮಾನು ಸಹಿತ ದವಸ ಧಾನ್ಯಗಳು ನೀರಿನಲ್ಲಿ ಕೊಚ್ಚಿ ಹೋದವು. ಜತೆಗೆ ಜಮೀನುಗಳಲ್ಲಿ ಬೆಳೆದು ನಿಂತಿದ್ದ ಬೆಳೆಗಳನ್ನೂ ನಾಶಪಡಿಸಿತು. ನೆರೆಯ ಅಪಾಯ ಅರಿತ ಪ್ರಾಣವನ್ನು ಕೈಯಲ್ಲಿ ಹಿಡಿದುಕೊಂಡು ಹಲವು ರಾತ್ರಿಗಳನ್ನು ಆತಂಕದಲ್ಲಿ ಕಳೆದಿದ್ದೇವೆ ಎಂದು ಗ್ರಾಮಸ್ಥರು ಅಲವತ್ತುಕೊಂಡರು.