ಕಲಬುರಗಿಯಲ್ಲಿರುವ ಪತಿ ಶರಣಪ್ಪನ ಮನೆಯಲ್ಲಿ ಹೊಂದಾಣಿಕೆ ಯಾಗದ್ದಕ್ಕೆ ಅಶ್ವಿನಿ ಮರಳಿ ತವರೂರಾದ ಕುಲಾಲಿಗೆ ಬಂದಿದ್ದರು. 2019ರ ಫೆಬ್ರುವರಿ 21ರಂದು ಜೀಪ್ನಲ್ಲಿ ಕುಲಾಲಿಗೆ ಬಂದ ಶರಣಪ್ಪ ಕೊರಳ್ಳಿ, ಆತನ ತಂದೆ ಅಂಬಾರಾಯ, ತಮ್ಮ ವಾಸುದೇವ ಹಾಗೂ ಶರಣಪ್ಪನ ತಂಗಿ ಗೌರಮ್ಮ ಸೇರಿಕೊಂಡು ಅಶ್ವಿನಿಯನ್ನು ನಿಂದಿಸಲಾರಂಭಿಸಿದರು. ಈ ಸಂದರ್ಭ ದಲ್ಲಿ ತನಗೆ ವಿಚ್ಛೇದನ ನೀಡಬೇಕು. ಇಲ್ಲವಾದರೆ ಕೊಲೆ ಮಾಡುತ್ತೇನೆ ಎಂದು ಶರಣಪ್ಪ ಬೆದರಿಕೆ ಹಾಕಿದ್ದ. ಇದಕ್ಕೆ ಆತನ ತಂದೆ ಅಂಬಾರಾಯ ಸಾಥ್ ನೀಡಿದ್ದರು. ಜೀಪ್ನಲ್ಲಿಟ್ಟಿದ್ದ ವಿಷದ ಬಾಟಲಿಯನ್ನು ಅಶ್ವಿನಿಗೆ ಕುಡಿಸಲು ಮುಂದಾದ. ಈ ಸಂದರ್ಭದಲ್ಲಿ ಅದನ್ನು ಗಮನಿಸಿದ ಸಾರ್ವಜನಿಕರು ಬಿಡಿಸಿದ್ದರು.