<p><strong>ಕಾಳಗಿ: ‘</strong>ಹಬ್ಬದ ಆಚರಣೆ, ಪೂರ್ವತಯಾರಿ ವೇಳೆ ಏನೇ ಸಮಸ್ಯೆ ಎದುರಾದರೂ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೆ ಅದಕ್ಕೆ ಸೂಕ್ತ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತದೆ. ಇಲ್ಲವಾದಲ್ಲಿ ಘಟನೆ ಬೇರೆ ರೂಪ ತಾಳಿ ಸಮಾಜದಲ್ಲಿ ಅಶಾಂತಿ ನಿರ್ಮಾಣವಾಗುತ್ತದೆ’ ಎಂದು ಶಹಾಬಾದ್ ಡಿವೈಎಸ್ಪಿ ಶಂಕರಗೌಡ ಪಾಟೀಲ ಹೇಳಿದರು.</p>.<p>ಬಕ್ರೀದ್ ಅಂಗವಾಗಿ ಸ್ಥಳೀಯ ಪೊಲೀಸ್ ಠಾಣೆ ಮಂಗಳವಾರ ಆಯೋಜಿಸಿದ ಶಾಂತಿಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.</p>.<p>‘ಪ್ರತಿ ಹಬ್ಬದ ಆಚರಣೆ ಶಾಂತಿ, ಸೌಹಾರ್ದತೆಯಿಂದ ಕೂಡಿರಲು ನಾವು ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕಾಗುತ್ತದೆ. ಈ ದಿಸೆಯಲ್ಲಿ ನಮ್ಮ ಇಲಾಖೆ ಸೂಕ್ತ ಬಂದೋಬಸ್ತ್ ಕಲ್ಪಿಸುತ್ತದೆ. ಹಬ್ಬಗಳ ಆಚರಣೆ ಇತರರಿಗೆ ಮಾದರಿಯಾಗಲಿ’ ಎಂದರು. </p>.<p>ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಡಾ.ಬಸಲಿಂಗಪ್ಪ ಡಿಗ್ಗಿ ಮಾತನಾಡಿ ‘ಜಾನುವಾರು ಸಾಗಾಟದಲ್ಲಿ ಪಶುವೈದ್ಯರ ಪ್ರಮಾಣ ಪತ್ರ ಅಗತ್ಯ. ಪ್ರಾಣಿಗಳ ತ್ಯಾಜ್ಯವನ್ನು ನಿಗದಿತ ಸ್ಥಳದಲ್ಲಿ ವಿಲೇವಾರಿ ಮಾಡದೆ ಎಲ್ಲೆಂದರಲ್ಲಿ ಬಿಸಾಡಿದರೆ ನಾಯಿಗಳ ಹಾವಳಿ ಹೆಚ್ಚಾಗುತ್ತದೆ. ಸರ್ಕಾರದ ನಿಯಮಗಳನ್ನು ತಪ್ಪದೇ ಪಾಲಿಸಬೇಕು’ ಎಂದು ತಿಳಿಸಿದರು.</p>.<p>ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಪಂಕಜಾ ಎ. ಮಾತನಾಡಿ ‘ಪ್ರತಿವರ್ಷದಂತೆ ಎಲ್ಲರ ಸಹಕಾರ ಇರಲಿ. ತ್ಯಾಜ್ಯ ಕೊಂಡೊಯ್ಯಲು ನಮ್ಮ ವಾಹನಗಳು ಬರುತ್ತವೆ. ಸಂಭ್ರಮದಿಂದ ಹಬ್ಬ ಆಚರಿಸಬೇಕು’ ಎಂದು ಹೇಳಿದರು.</p>.<p>ತಹಶೀಲ್ದಾರ್ ಘಮಾವತಿ ರಾಠೋಡ, ನಿವೃತ್ತ ಶಿಕ್ಷಕ ಮಹ್ಮದ ಘುಡುಸಾಬ ಕಮಲಾಪುರ, ಪಶುವೈದ್ಯ ಡಾ.ಸಂದೀಪ್ ಪಟವಾರಿ, ಮುಸ್ಲಿಂ ಕಮಿಟಿ ಅಧ್ಯಕ್ಷ ಜಾವೋದ್ದಿನ್ ಸೌದಾಗರ, ಕಲ್ಯಾಣರಾವ ಡೊಣ್ಣೂರ, ಭೀಮರಾಯ ಮಲಘಾಣ ಮಾತನಾಡಿದರು.</p>.<p>ಸಿಪಿಐ ಜಗದೇವಪ್ಪ ಪಾಳಾ, ಉಪ ತಹಶೀಲ್ದಾರ್ ಮಾಣಿಕ ಘತ್ತರಗಿ ವೇದಿಕೆಯಲ್ಲಿದ್ದರು. ಪಿಎಸ್ಐ ತಿಮ್ಮಯ್ಯ ಬಿ.ಕೆ ಸ್ವಾಗತಿಸಿದರು. ಮಂಜುನಾಥ ಬಡಿಗೇರ ನಿರೂಪಿಸಿ, ರಾವುತ್ ಬಂಕಲಗಿ ವಂದಿಸಿದರು.</p>.<p>ಮುಖಂಡ ಶಿವಶರಣಪ್ಪ ಕಮಲಾಪುರ, ಶಿವರಾಜ ಪಾಟೀಲ ಗೊಣಗಿ, ವೀರಣ್ಣಾ ಗಂಗಾಣಿ, ರವಿದಾಸ ಪತಂಗೆ, ಇಬ್ರಾಹಿಂಪಾಶಾ ಗಿರಣಿಕರ್, ಗಿರೀಶ್ ದೇವರಮನಿ, ಗಂಗರಾಮ ದಳಪತಿ, ಸಾದಿಕ್ ಮಿಯಾ ಗಾಡಿವಾನ್, ಪಾಶಾ ಸೇರಿದಂತೆ ಅನೇಕರು ಪಾಲ್ಗೊಂಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಾಳಗಿ: ‘</strong>ಹಬ್ಬದ ಆಚರಣೆ, ಪೂರ್ವತಯಾರಿ ವೇಳೆ ಏನೇ ಸಮಸ್ಯೆ ಎದುರಾದರೂ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೆ ಅದಕ್ಕೆ ಸೂಕ್ತ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತದೆ. ಇಲ್ಲವಾದಲ್ಲಿ ಘಟನೆ ಬೇರೆ ರೂಪ ತಾಳಿ ಸಮಾಜದಲ್ಲಿ ಅಶಾಂತಿ ನಿರ್ಮಾಣವಾಗುತ್ತದೆ’ ಎಂದು ಶಹಾಬಾದ್ ಡಿವೈಎಸ್ಪಿ ಶಂಕರಗೌಡ ಪಾಟೀಲ ಹೇಳಿದರು.</p>.<p>ಬಕ್ರೀದ್ ಅಂಗವಾಗಿ ಸ್ಥಳೀಯ ಪೊಲೀಸ್ ಠಾಣೆ ಮಂಗಳವಾರ ಆಯೋಜಿಸಿದ ಶಾಂತಿಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.</p>.<p>‘ಪ್ರತಿ ಹಬ್ಬದ ಆಚರಣೆ ಶಾಂತಿ, ಸೌಹಾರ್ದತೆಯಿಂದ ಕೂಡಿರಲು ನಾವು ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕಾಗುತ್ತದೆ. ಈ ದಿಸೆಯಲ್ಲಿ ನಮ್ಮ ಇಲಾಖೆ ಸೂಕ್ತ ಬಂದೋಬಸ್ತ್ ಕಲ್ಪಿಸುತ್ತದೆ. ಹಬ್ಬಗಳ ಆಚರಣೆ ಇತರರಿಗೆ ಮಾದರಿಯಾಗಲಿ’ ಎಂದರು. </p>.<p>ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಡಾ.ಬಸಲಿಂಗಪ್ಪ ಡಿಗ್ಗಿ ಮಾತನಾಡಿ ‘ಜಾನುವಾರು ಸಾಗಾಟದಲ್ಲಿ ಪಶುವೈದ್ಯರ ಪ್ರಮಾಣ ಪತ್ರ ಅಗತ್ಯ. ಪ್ರಾಣಿಗಳ ತ್ಯಾಜ್ಯವನ್ನು ನಿಗದಿತ ಸ್ಥಳದಲ್ಲಿ ವಿಲೇವಾರಿ ಮಾಡದೆ ಎಲ್ಲೆಂದರಲ್ಲಿ ಬಿಸಾಡಿದರೆ ನಾಯಿಗಳ ಹಾವಳಿ ಹೆಚ್ಚಾಗುತ್ತದೆ. ಸರ್ಕಾರದ ನಿಯಮಗಳನ್ನು ತಪ್ಪದೇ ಪಾಲಿಸಬೇಕು’ ಎಂದು ತಿಳಿಸಿದರು.</p>.<p>ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಪಂಕಜಾ ಎ. ಮಾತನಾಡಿ ‘ಪ್ರತಿವರ್ಷದಂತೆ ಎಲ್ಲರ ಸಹಕಾರ ಇರಲಿ. ತ್ಯಾಜ್ಯ ಕೊಂಡೊಯ್ಯಲು ನಮ್ಮ ವಾಹನಗಳು ಬರುತ್ತವೆ. ಸಂಭ್ರಮದಿಂದ ಹಬ್ಬ ಆಚರಿಸಬೇಕು’ ಎಂದು ಹೇಳಿದರು.</p>.<p>ತಹಶೀಲ್ದಾರ್ ಘಮಾವತಿ ರಾಠೋಡ, ನಿವೃತ್ತ ಶಿಕ್ಷಕ ಮಹ್ಮದ ಘುಡುಸಾಬ ಕಮಲಾಪುರ, ಪಶುವೈದ್ಯ ಡಾ.ಸಂದೀಪ್ ಪಟವಾರಿ, ಮುಸ್ಲಿಂ ಕಮಿಟಿ ಅಧ್ಯಕ್ಷ ಜಾವೋದ್ದಿನ್ ಸೌದಾಗರ, ಕಲ್ಯಾಣರಾವ ಡೊಣ್ಣೂರ, ಭೀಮರಾಯ ಮಲಘಾಣ ಮಾತನಾಡಿದರು.</p>.<p>ಸಿಪಿಐ ಜಗದೇವಪ್ಪ ಪಾಳಾ, ಉಪ ತಹಶೀಲ್ದಾರ್ ಮಾಣಿಕ ಘತ್ತರಗಿ ವೇದಿಕೆಯಲ್ಲಿದ್ದರು. ಪಿಎಸ್ಐ ತಿಮ್ಮಯ್ಯ ಬಿ.ಕೆ ಸ್ವಾಗತಿಸಿದರು. ಮಂಜುನಾಥ ಬಡಿಗೇರ ನಿರೂಪಿಸಿ, ರಾವುತ್ ಬಂಕಲಗಿ ವಂದಿಸಿದರು.</p>.<p>ಮುಖಂಡ ಶಿವಶರಣಪ್ಪ ಕಮಲಾಪುರ, ಶಿವರಾಜ ಪಾಟೀಲ ಗೊಣಗಿ, ವೀರಣ್ಣಾ ಗಂಗಾಣಿ, ರವಿದಾಸ ಪತಂಗೆ, ಇಬ್ರಾಹಿಂಪಾಶಾ ಗಿರಣಿಕರ್, ಗಿರೀಶ್ ದೇವರಮನಿ, ಗಂಗರಾಮ ದಳಪತಿ, ಸಾದಿಕ್ ಮಿಯಾ ಗಾಡಿವಾನ್, ಪಾಶಾ ಸೇರಿದಂತೆ ಅನೇಕರು ಪಾಲ್ಗೊಂಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>