<p><strong>ಕಲಬುರ್ಗಿ: </strong>‘ದೇಹದಲ್ಲಿನ ರೋಗ ನಿರೋಧಕ ಶಕ್ತಿಯ ಪ್ರಮಾಣವನ್ನು ಪತ್ತೆ ಮಾಡುವಂಥ ನೂತನ ವಿಧಾನವನ್ನು ಇಲ್ಲಿನ ಯುನೈಟೆಡ್ ಆಸ್ಪತ್ರೆಯಲ್ಲಿ ಪ್ರಾರಂಭಿಸಲಾಗಿದೆ. ಕೋವಿಡ್ ಉಪಟಳದ ನಡುವೆ ಈ ಪರೀಕ್ಷೆ ಜನರ ಪ್ರಾಣ ರಕ್ಷಣೆಗೆ ಹೆಚ್ಚಿನ ಅವಕಾಶ ನೀಡಲಿದೆ’ ಎಂದು ಆಸ್ಪತ್ರೆಯ ಅಧ್ಯಕ್ಷ ಡಾ.ವಿಕ್ರಮ ಸಿದ್ದಾರೆಡ್ಡಿ ತಿಳಿಸಿದರು.</p>.<p>‘ಇಮ್ಯುನೊಆಸ್ಸೆ ವಿಧಾನದಿಂದ ಐಜಿಜಿ ಆ್ಯಂಟಿಬಾಡಿ ಸಿರೊ ಟೈಟ್ರೆ’ ಪರೀಕ್ಷೆ ಮೂಲಕ ರೋಗನಿರೋಧಕ ಶಕ್ತಿ ಪ್ರಮಾಣ ಅರಿಯಬಹುದಾಗಿದೆ. ಇದು ಅತ್ಯಂತ ನವೀನ ಹಾಗೂ ಪರಿಣಾಮಕಾರಿ ವಿಧಾನ. ಈ ರೀತಿ ರೋಗ ನಿರೋಧಕ ಶಕ್ತಿಯನ್ನು ಮುಂಚಿತವಾಗಿಯೇ ಅರಿಯುವುದರಿಂದ ಕೋವಿಡ್ ಮತ್ತಿತರ ಸೋಂಕುಗಳಿಂದ ಬಚಾವಾಗಬಹುದು’ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.</p>.<p>‘ಐಜಿಜಿ ಪ್ರತಿಕಾಯ ಮಾನವನ ದೇಹದಲ್ಲಿನ ಕೋವಿಡ್-19 ವೈರಸ್ ಅನ್ನು ನಾಶಮಾಡುವ ಸಾಮರ್ಥ್ಯ ಹೊಂದಿದೆ. ಉತ್ತಮ ಮಟ್ಟದ ಐಜಿಜಿ ಪ್ರತಿಕಾಯಗಳು ಇರುವುದರಿಂದ ಕೋವಿಡ್-19 ವಿರುದ್ಧದ ರಕ್ಷಣೆ ಸುಲಭ. ಒಂದು ಬಾರಿ ಅಭಿವೃದ್ಧಿಪಡಿಸಿದ ನಂತರ, ಈ ಐಜಿಜಿ ಪ್ರತಿಕಾಯಗಳು ದೀರ್ಘಕಾಲದವರೆಗೆ ರಕ್ತ ಪರಿಚಲನೆಯಲ್ಲಿ ಉಳಿಯುತ್ತವೆ. ಇದರಿಂದಾಗಿ ವ್ಯಕ್ತಿಯು ಭವಿಷ್ಯದಲ್ಲಿ ಸೋಂಕಿನಿಂದ ಸಂಪೂರ್ಣ ರೋಗನಿರೋಧಕ ಶಕ್ತಿ ಹೊಂದಿರುತ್ತಾನೆ. ಇನ್ನೊಂದು ತರಹ ವಿವರಿಸುವುದಾದರೆ; ಉತ್ತಮ ಮಟ್ಟದ ಐಜಿಜಿ ಆ್ಯಂಟಿಬಾಡಿ ಸಿರೊ ಟೈಟ್ರೆ ಹೊಂದಿರುವ ವ್ಯಕ್ತಿ ಇತರರಿಗೆ ಸೋಂಕು ತಗುಲಿಸುವುದಿಲ್ಲ. ಭವಿಷ್ಯದಲ್ಲಿ ಇತರರಿಂದ ಸೋಂಕಿಗೆ ಒಳಗಾಗುವುದಿಲ್ಲ’ ಎಂದು ಅವರು ಹೇಳಿದರು.</p>.<p>‘ಐಜಿಜಿ ಆಂಟಿಬಾಡಿ ಸಿರೊ ಪರೀಕ್ಷೆಯು ಐಜಿಜಿ ಪ್ರತಿಕಾಯಗಳ ಉಪಸ್ಥಿತಿಯನ್ನು ದೃಢಪಡಿಸುತ್ತದೆ. ಕೋವಿಡ್-19ನಿಂದ ಶೇಕಡ 100ರಷ್ಟು ಯಾರು ಸುರಕ್ಷಿತರಾಗಿದ್ದಾರೆ ಎಂದು ನಿಖರ ಮಾಹಿತಿ ಸಿಗುತ್ತದೆ. ಜತೆಗೆ ಕೋವಿಡ್-19 ವಿರುದ್ಧದ ಪ್ರತಿರಕ್ಷೆಯನ್ನು ಈ ಪರೀಕ್ಷೆ ಖಚಿತ ಪಡಿಸುತ್ತದೆ’ ಎಂದೂ ಡಾ.ವಿಕ್ರಮ ವಿವರಿಸಿದರು.</p>.<p>‘ಆಸ್ಪತ್ರೆಯ ಯುನೈಟೆಡ್ ಡಯಾಗ್ನಾಸ್ಟಿಕ್ಸ್ ಕೋವಿಡ್-19 ಅನ್ನು ಪತ್ತೆಹಚ್ಚಲು ಆರ್ಟಿಪಿಸಿಆರ್ ಪರೀಕ್ಷೆ ಪ್ರಾರಂಭಿಸಿದ ಬೆಂಗಳೂರು ಹೊರಗಿನ ಮೊದಲ ಖಾಸಗಿ ಪ್ರಯೋಗಾಲಯವಾಗಿದೆ. ಸರ್ಕಾರಿ ಮತ್ತು ಖಾಸಗಿ ಮಾದರಿ ಒಳಗೊಂಡ 12,000ಕ್ಕೂ ಅಧಿಕ ಆರ್ಟಿ–ಪಿಸಿಆರ್ ಪರೀಕ್ಷೆ ಈವರೆಗೆ ನಡೆಸಿದೆ. ರೋಗ ಲಕ್ಷಣ ಇಲ್ಲದವರಿಗೆ ಚಿಕಿತ್ಸೆ ನೀಡಲು ವಿಶೇಷವಾದ ಕೋವಿಡ್-19 ಆರೈಕೆ ಕೇಂದ್ರವನ್ನು ಸ್ಥಾಪಿಸಲಾಗಿದೆ. ಯುನೈಟೆಡ್ನ ಐಸಿಯು, ಎಚ್ಡಿಯು ಸೇರಿ ಕೋವಿಡ್ ಚಿಕಿತ್ಸೆಗಾಗಿ ಪ್ರತ್ಯೇಕ 24 ಹಾಸಿಗೆಗಳ ಸೌಲಭ್ಯ ಹೊಂದಿದೆ’ ಎಂದರು.</p>.<p>ಮಾಹಿತಿಗೆ ಮೊಬೈಲ್ 9535601919, 9343382517ಗೆ ಸಂಪರ್ಕಿಸಲು ಅವರು ಕೋರಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಲಬುರ್ಗಿ: </strong>‘ದೇಹದಲ್ಲಿನ ರೋಗ ನಿರೋಧಕ ಶಕ್ತಿಯ ಪ್ರಮಾಣವನ್ನು ಪತ್ತೆ ಮಾಡುವಂಥ ನೂತನ ವಿಧಾನವನ್ನು ಇಲ್ಲಿನ ಯುನೈಟೆಡ್ ಆಸ್ಪತ್ರೆಯಲ್ಲಿ ಪ್ರಾರಂಭಿಸಲಾಗಿದೆ. ಕೋವಿಡ್ ಉಪಟಳದ ನಡುವೆ ಈ ಪರೀಕ್ಷೆ ಜನರ ಪ್ರಾಣ ರಕ್ಷಣೆಗೆ ಹೆಚ್ಚಿನ ಅವಕಾಶ ನೀಡಲಿದೆ’ ಎಂದು ಆಸ್ಪತ್ರೆಯ ಅಧ್ಯಕ್ಷ ಡಾ.ವಿಕ್ರಮ ಸಿದ್ದಾರೆಡ್ಡಿ ತಿಳಿಸಿದರು.</p>.<p>‘ಇಮ್ಯುನೊಆಸ್ಸೆ ವಿಧಾನದಿಂದ ಐಜಿಜಿ ಆ್ಯಂಟಿಬಾಡಿ ಸಿರೊ ಟೈಟ್ರೆ’ ಪರೀಕ್ಷೆ ಮೂಲಕ ರೋಗನಿರೋಧಕ ಶಕ್ತಿ ಪ್ರಮಾಣ ಅರಿಯಬಹುದಾಗಿದೆ. ಇದು ಅತ್ಯಂತ ನವೀನ ಹಾಗೂ ಪರಿಣಾಮಕಾರಿ ವಿಧಾನ. ಈ ರೀತಿ ರೋಗ ನಿರೋಧಕ ಶಕ್ತಿಯನ್ನು ಮುಂಚಿತವಾಗಿಯೇ ಅರಿಯುವುದರಿಂದ ಕೋವಿಡ್ ಮತ್ತಿತರ ಸೋಂಕುಗಳಿಂದ ಬಚಾವಾಗಬಹುದು’ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.</p>.<p>‘ಐಜಿಜಿ ಪ್ರತಿಕಾಯ ಮಾನವನ ದೇಹದಲ್ಲಿನ ಕೋವಿಡ್-19 ವೈರಸ್ ಅನ್ನು ನಾಶಮಾಡುವ ಸಾಮರ್ಥ್ಯ ಹೊಂದಿದೆ. ಉತ್ತಮ ಮಟ್ಟದ ಐಜಿಜಿ ಪ್ರತಿಕಾಯಗಳು ಇರುವುದರಿಂದ ಕೋವಿಡ್-19 ವಿರುದ್ಧದ ರಕ್ಷಣೆ ಸುಲಭ. ಒಂದು ಬಾರಿ ಅಭಿವೃದ್ಧಿಪಡಿಸಿದ ನಂತರ, ಈ ಐಜಿಜಿ ಪ್ರತಿಕಾಯಗಳು ದೀರ್ಘಕಾಲದವರೆಗೆ ರಕ್ತ ಪರಿಚಲನೆಯಲ್ಲಿ ಉಳಿಯುತ್ತವೆ. ಇದರಿಂದಾಗಿ ವ್ಯಕ್ತಿಯು ಭವಿಷ್ಯದಲ್ಲಿ ಸೋಂಕಿನಿಂದ ಸಂಪೂರ್ಣ ರೋಗನಿರೋಧಕ ಶಕ್ತಿ ಹೊಂದಿರುತ್ತಾನೆ. ಇನ್ನೊಂದು ತರಹ ವಿವರಿಸುವುದಾದರೆ; ಉತ್ತಮ ಮಟ್ಟದ ಐಜಿಜಿ ಆ್ಯಂಟಿಬಾಡಿ ಸಿರೊ ಟೈಟ್ರೆ ಹೊಂದಿರುವ ವ್ಯಕ್ತಿ ಇತರರಿಗೆ ಸೋಂಕು ತಗುಲಿಸುವುದಿಲ್ಲ. ಭವಿಷ್ಯದಲ್ಲಿ ಇತರರಿಂದ ಸೋಂಕಿಗೆ ಒಳಗಾಗುವುದಿಲ್ಲ’ ಎಂದು ಅವರು ಹೇಳಿದರು.</p>.<p>‘ಐಜಿಜಿ ಆಂಟಿಬಾಡಿ ಸಿರೊ ಪರೀಕ್ಷೆಯು ಐಜಿಜಿ ಪ್ರತಿಕಾಯಗಳ ಉಪಸ್ಥಿತಿಯನ್ನು ದೃಢಪಡಿಸುತ್ತದೆ. ಕೋವಿಡ್-19ನಿಂದ ಶೇಕಡ 100ರಷ್ಟು ಯಾರು ಸುರಕ್ಷಿತರಾಗಿದ್ದಾರೆ ಎಂದು ನಿಖರ ಮಾಹಿತಿ ಸಿಗುತ್ತದೆ. ಜತೆಗೆ ಕೋವಿಡ್-19 ವಿರುದ್ಧದ ಪ್ರತಿರಕ್ಷೆಯನ್ನು ಈ ಪರೀಕ್ಷೆ ಖಚಿತ ಪಡಿಸುತ್ತದೆ’ ಎಂದೂ ಡಾ.ವಿಕ್ರಮ ವಿವರಿಸಿದರು.</p>.<p>‘ಆಸ್ಪತ್ರೆಯ ಯುನೈಟೆಡ್ ಡಯಾಗ್ನಾಸ್ಟಿಕ್ಸ್ ಕೋವಿಡ್-19 ಅನ್ನು ಪತ್ತೆಹಚ್ಚಲು ಆರ್ಟಿಪಿಸಿಆರ್ ಪರೀಕ್ಷೆ ಪ್ರಾರಂಭಿಸಿದ ಬೆಂಗಳೂರು ಹೊರಗಿನ ಮೊದಲ ಖಾಸಗಿ ಪ್ರಯೋಗಾಲಯವಾಗಿದೆ. ಸರ್ಕಾರಿ ಮತ್ತು ಖಾಸಗಿ ಮಾದರಿ ಒಳಗೊಂಡ 12,000ಕ್ಕೂ ಅಧಿಕ ಆರ್ಟಿ–ಪಿಸಿಆರ್ ಪರೀಕ್ಷೆ ಈವರೆಗೆ ನಡೆಸಿದೆ. ರೋಗ ಲಕ್ಷಣ ಇಲ್ಲದವರಿಗೆ ಚಿಕಿತ್ಸೆ ನೀಡಲು ವಿಶೇಷವಾದ ಕೋವಿಡ್-19 ಆರೈಕೆ ಕೇಂದ್ರವನ್ನು ಸ್ಥಾಪಿಸಲಾಗಿದೆ. ಯುನೈಟೆಡ್ನ ಐಸಿಯು, ಎಚ್ಡಿಯು ಸೇರಿ ಕೋವಿಡ್ ಚಿಕಿತ್ಸೆಗಾಗಿ ಪ್ರತ್ಯೇಕ 24 ಹಾಸಿಗೆಗಳ ಸೌಲಭ್ಯ ಹೊಂದಿದೆ’ ಎಂದರು.</p>.<p>ಮಾಹಿತಿಗೆ ಮೊಬೈಲ್ 9535601919, 9343382517ಗೆ ಸಂಪರ್ಕಿಸಲು ಅವರು ಕೋರಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>