‘ಈ ಹಿಂದೆ ಇಂದಿರಾ ಗಾಂಧಿ ಅವರನ್ನು ಅಧಿಕಾರದಿಂದ ಇಳಿಸಲು ಎಲ್ಲ ಪಕ್ಷಗಳೂ ಒಂದಾಗಿದ್ದವು. ಈಗ ಮಹಾರಾಷ್ಟ್ರದಲ್ಲಿ ಬಿಜೆಪಿ ದೂರ ಇಡಲು ಎಲ್ಲ ಪಕ್ಷಗಳೂ ಒಂದಾಗುತ್ತಿವೆ. ಶಿವಸೇನೆಯ ಬಲದಿಂದಲೇ ಬಿಜೆಪಿಯವರು ಅಧಿಕಾರ ನಡೆಸಿದರು. ಆದರೆ, ಈಗ ಉದ್ಧವ್ ಠಾಕ್ರೆ ದೊಡ್ಡವರಾಗಿದ್ದಾರೆ. ಪ್ರಬಲರಾಗಿದ್ದಾರೆ. ಹಾಗಾಗಿ, ಬಿಜೆಪಿಗೇ ಸೆಡ್ಡು ಹೊಡೆಯುತ್ತಿದ್ದಾರೆ. ಇತಿಹಾಸ ಹೀಗೆಯೇ ಮರಳುತ್ತದೆ’ ಎಂದೂ ಅವರು ವಿಶ್ಲೇಷಿಸಿದರು.