<p>‘ನೀನು ನಿನ್ನ ತಾಯಿಯ ಸೇವೆ ಮಾಡಿದಂತೆ ನಮ್ಮನ್ನು ನಮ್ಮ ಮಕ್ಕಳು ನೋಡಿಕೊಳ್ಳಲಪ್ಪ’ ಎಂದು ಕುಷ್ಠರೋಗಿಗಳು ಅಳಲು ತೋಡಿಕೊಂಡಾಗ ಅವರ ಸೇವೆಗೆ ನಿಂತವರು ಕಲಬುರಗಿಯ ಹನಮಂತ ದೇವನೂರ. ಅವರ ಈ ಕೆಲಸಕ್ಕೆ ಕೈಜೋಡಿಸಿದವರು ಅವರ ಪತ್ನಿ ಬಸಮ್ಮ ದೇವನೂರ. ಹನುಮಂತ ಅವರ ತಾಯಿ ಮತ್ತು ಬಸಮ್ಮ ಅವರ ತಂದೆ–ತಾಯಿ ಕುಷ್ಠರೋಗಿಗಳಾಗಿ ನೋವು ಅನುಭವಿಸಿದ್ದನ್ನು ಕಣ್ಣಾರೆ ಕಂಡಿದ್ದ ಈ ದಂಪತಿ, ಈಗ ಇತರೆ ಕುಷ್ಠರೋಗಿಗಳ ಸೇವೆಗೇ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದಾರೆ. ‘ನಮ್ಮಮ್ಮ ಕುಷ್ಠರೋಗಿಯಾಗಿ ಬೀದಿ ಬದಿ ಭಿಕ್ಷೆ ಬೇಡಿ ನಮ್ಮನ್ನು ಸಾಕುವ ಸಂದರ್ಭದಲ್ಲಿ, ಅವರ ಕಷ್ಟ ನೋಡಿ ನಮಗೆ ಆಶ್ರಯ ನೀಡಿದವರು ಇಲ್ಲಿನ ಜನ. ಈಗ ಅವರ ಋಣ ತೀರಿಸುವ ಸಮಯ ಬಂದಿದೆ’ ಎನ್ನುವ ಈ ದಂಪತಿಯ ಸ್ಫೂರ್ತಿದಾಯಕ ಕಥನವೇ ಈ ವಿಡಿಯೊ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>