<p><strong>ಕಲಬುರಗಿ</strong>: ನಗರದ ಸಾರ್ವಜನಿಕ ಉದ್ಯಾನದ ಬಳಿ ವ್ಯಕ್ತಿಯೊಬ್ಬರ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿ ಕೊರಳಲ್ಲಿದ್ದ 10 ಗ್ರಾಂ ಚಿನ್ನದ ಚೈನು, ₹400 ನಗದು ದೋಚಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬ್ರಹ್ಮಪುರ ಪೊಲೀಸರು ಬಂಧಿಸಿದ್ದಾರೆ.</p>.<p>ಬಾಪುನಗರ ಮಾಂಗರವಾಡಿ ಗಲ್ಲಿ ನಿವಾಸಿಗಳಾದ ವಿಶಾಲ ಅಲಿಯಾಸ್ ವಿಶು ಉಪಾಧ್ಯ (21) ಹಾಗೂ ರೋಹಿತ ಕಾಳೆ (25) ಬಂಧಿತರು. ಬಂಧಿತರಿಂದ ₹1 ಲಕ್ಷ ಮೌಲ್ಯದ ಚಿನ್ನದ ಚೈನು ಹಾಗೂ ಕೃತ್ಯಕ್ಕೆ ಬಳಸಿದ್ದ ಮಚ್ಚನ್ನು ಪೊಲೀಸರು ಜಪ್ತಿ ಮಾಡಿಕೊಂಡಿದ್ದಾರೆ.</p>.<p>ಇನ್ಸ್ಪೆಕ್ಟರ್ ದಿಲೀಪ್ ಸಗರ, ಪಿಎಸ್ಐ ವಂದನಾ, ಎಎಸ್ಐ ಬಸವರಾಜ ಗೋಣಿ, ಸಿಬ್ಬಂದಿ ಕೇಶವ, ಶಶಿಕಾಂತ, ವೆಂಕಟೇಶ, ಗುರುನಾಥ, ನವೀನಕುಮಾರ, ಪರಶುರಾಮ, ವೀರೇಶ ಅವರ ತಂಡವು ಆರೋಪಿಗಳನ್ನು ಬಂಧಿಸಿದೆ.</p>.<p class="Briefhead">ಆಟೊದಲ್ಲಿ ಪಯಣಿಸುವಾಗ ಕಳವು</p>.<p>ಕಲಬುರಗಿ: ನಗರದ ಜೇವರ್ಗಿ ರಿಂಗ್ ರಸ್ತೆಯಿಂದ ಸೇಡಂ ರಿಂಗ್ ರಸ್ತೆಗೆ ಮಹಿಳೆಯೊಬ್ಬರು ಆಟೊದಲ್ಲಿ ಪ್ರಯಾಣಿಸುವಾಗ ಸಹ ಪ್ರಯಾಣಿಕರ ಸೋಗಿನಲ್ಲಿದ್ದ ಕಳ್ಳರು 25 ಗ್ರಾಂ ಚಿನ್ನಾಭರಣ ಕದ್ದು ಪರಾರಿಯಾಗಿದ್ದಾರೆ.</p>.<p>ವಿಜಯಪುರ ಜಿಲ್ಲೆಯ ತಾಳಿಕೋಟೆ ನಿವಾಸಿ ಶಹನಾಜ್ ಲಾಹೋರಿ ಚಿನ್ನಾಭರಣ ಕಳೆದುಕೊಂಡವರು.</p>.<p>‘ಸಂಬಂಧಿಕರ ನಿಶ್ಚಿತಾರ್ಥದಲ್ಲಿ ಪಾಲ್ಗೊಳ್ಳಲು ಸಂಬಂಧಿಕರೊಂದಿಗೆ ವಿಜಯಪುರದಿಂದ ನಗರಕ್ಕೆ ಬಂದಿದ್ದೆ. ಆಟೊದಲ್ಲಿ ಜೇವರ್ಗಿ ಕ್ರಾಸ್ನಿಂದ ಸೇಡಂ ಕ್ರಾಸ್ ವರೆಗೂ ಆಟೊದಲ್ಲಿ ಪ್ರಯಾಣಿಸುವಾಗ ₹1.25 ಲಕ್ಷ ಮೌಲ್ಯದ ಚಿನ್ನಾಭರಣ ಕಳುವಾಗಿದೆ. ಇನ್ನಿಬ್ಬರು ಮಹಿಳೆಯರು ನಮ್ಮೊಂದಿಗೆ ಆಟೊದಲ್ಲಿದ್ದರು’ ಎಂದು ದೂರಿನಲ್ಲಿ ಶಹನಾಜ್ ತಿಳಿಸಿದ್ದಾರೆ.</p>.<p>ಈ ಕುರಿತು ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಲಬುರಗಿ</strong>: ನಗರದ ಸಾರ್ವಜನಿಕ ಉದ್ಯಾನದ ಬಳಿ ವ್ಯಕ್ತಿಯೊಬ್ಬರ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿ ಕೊರಳಲ್ಲಿದ್ದ 10 ಗ್ರಾಂ ಚಿನ್ನದ ಚೈನು, ₹400 ನಗದು ದೋಚಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬ್ರಹ್ಮಪುರ ಪೊಲೀಸರು ಬಂಧಿಸಿದ್ದಾರೆ.</p>.<p>ಬಾಪುನಗರ ಮಾಂಗರವಾಡಿ ಗಲ್ಲಿ ನಿವಾಸಿಗಳಾದ ವಿಶಾಲ ಅಲಿಯಾಸ್ ವಿಶು ಉಪಾಧ್ಯ (21) ಹಾಗೂ ರೋಹಿತ ಕಾಳೆ (25) ಬಂಧಿತರು. ಬಂಧಿತರಿಂದ ₹1 ಲಕ್ಷ ಮೌಲ್ಯದ ಚಿನ್ನದ ಚೈನು ಹಾಗೂ ಕೃತ್ಯಕ್ಕೆ ಬಳಸಿದ್ದ ಮಚ್ಚನ್ನು ಪೊಲೀಸರು ಜಪ್ತಿ ಮಾಡಿಕೊಂಡಿದ್ದಾರೆ.</p>.<p>ಇನ್ಸ್ಪೆಕ್ಟರ್ ದಿಲೀಪ್ ಸಗರ, ಪಿಎಸ್ಐ ವಂದನಾ, ಎಎಸ್ಐ ಬಸವರಾಜ ಗೋಣಿ, ಸಿಬ್ಬಂದಿ ಕೇಶವ, ಶಶಿಕಾಂತ, ವೆಂಕಟೇಶ, ಗುರುನಾಥ, ನವೀನಕುಮಾರ, ಪರಶುರಾಮ, ವೀರೇಶ ಅವರ ತಂಡವು ಆರೋಪಿಗಳನ್ನು ಬಂಧಿಸಿದೆ.</p>.<p class="Briefhead">ಆಟೊದಲ್ಲಿ ಪಯಣಿಸುವಾಗ ಕಳವು</p>.<p>ಕಲಬುರಗಿ: ನಗರದ ಜೇವರ್ಗಿ ರಿಂಗ್ ರಸ್ತೆಯಿಂದ ಸೇಡಂ ರಿಂಗ್ ರಸ್ತೆಗೆ ಮಹಿಳೆಯೊಬ್ಬರು ಆಟೊದಲ್ಲಿ ಪ್ರಯಾಣಿಸುವಾಗ ಸಹ ಪ್ರಯಾಣಿಕರ ಸೋಗಿನಲ್ಲಿದ್ದ ಕಳ್ಳರು 25 ಗ್ರಾಂ ಚಿನ್ನಾಭರಣ ಕದ್ದು ಪರಾರಿಯಾಗಿದ್ದಾರೆ.</p>.<p>ವಿಜಯಪುರ ಜಿಲ್ಲೆಯ ತಾಳಿಕೋಟೆ ನಿವಾಸಿ ಶಹನಾಜ್ ಲಾಹೋರಿ ಚಿನ್ನಾಭರಣ ಕಳೆದುಕೊಂಡವರು.</p>.<p>‘ಸಂಬಂಧಿಕರ ನಿಶ್ಚಿತಾರ್ಥದಲ್ಲಿ ಪಾಲ್ಗೊಳ್ಳಲು ಸಂಬಂಧಿಕರೊಂದಿಗೆ ವಿಜಯಪುರದಿಂದ ನಗರಕ್ಕೆ ಬಂದಿದ್ದೆ. ಆಟೊದಲ್ಲಿ ಜೇವರ್ಗಿ ಕ್ರಾಸ್ನಿಂದ ಸೇಡಂ ಕ್ರಾಸ್ ವರೆಗೂ ಆಟೊದಲ್ಲಿ ಪ್ರಯಾಣಿಸುವಾಗ ₹1.25 ಲಕ್ಷ ಮೌಲ್ಯದ ಚಿನ್ನಾಭರಣ ಕಳುವಾಗಿದೆ. ಇನ್ನಿಬ್ಬರು ಮಹಿಳೆಯರು ನಮ್ಮೊಂದಿಗೆ ಆಟೊದಲ್ಲಿದ್ದರು’ ಎಂದು ದೂರಿನಲ್ಲಿ ಶಹನಾಜ್ ತಿಳಿಸಿದ್ದಾರೆ.</p>.<p>ಈ ಕುರಿತು ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>