<p><strong>ಕಲಬುರಗಿ:</strong> ನಗರದ ಆಳಂದ ಚೆಕ್ಪೋಸ್ಟ್ ಬಳಿ ದ್ವಿಚಕ್ರ ವಾಹನಕ್ಕೆ ಪೆಟ್ರೋಲ್ ಹಾಕುವ ವಿಷಯಕ್ಕೆ ಜಗಳ ತೆಗೆದು ಪೆಟ್ರೊಲ್ ಬಂಕ್ ಕಾರ್ಮಿಕನ ಮೇಲೆ ದುಷ್ಕರ್ಮಿಗಳು ಚಾಕುವಿನಿಂದ ಹಲ್ಲೆ ನಡೆಸಿದ್ದಾರೆ. ಈ ಘಟನೆ ಸಿ.ಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.</p>.<p>ನಗರದ ಆಳಂದ ರಸ್ತೆಯ ವಿಶ್ವಾರಾಧ್ಯ ದೇವಸ್ಥಾನ ಬಳಿಯ ಪೆಟ್ರೋಲ್ ಬಂಕ್ನಲ್ಲಿ ಅ.3ರಂದು ಸಂಜೆ 8.27ರ ವೇಳೆಯಲ್ಲಿ ಈ ಘಟನೆ ನಡೆದಿದ್ದು, ಪೆಟ್ರೋಲ್ ಬಂಕ್ ಕಾರ್ಮಿಕ ತ್ರಿಶೂಲ್ ಗಂಭೀರವಾಗಿ ಗಾಯಗೊಂಡಿದ್ದಾರೆ.</p>.<p><strong>ವಿಡಿಯೊದಲ್ಲಿ ಏನಿದೆ?:</strong></p>.<p>ಕಾರ್ಮಿಕ ತ್ರಿಶೂಲ್ನೊಂದಿಗೆ ವಾಗ್ವಾದ ನಡೆಸುವ ಹಾಗೂ ಅವರನ್ನು ಕೈಯಿಂದ ಗುದ್ದುವ, ಕಾಲಿಂದ ಒದೆಯುವ ಹಾಗೂ ಮಾರಕಾಸ್ತ್ರದಿಂದ ಹಲ್ಲೆ ಮಾಡುವ ದೃಶ್ಯಗಳು ವಿಡಿಯೊದಲ್ಲಿವೆ. ದುಷ್ಕರ್ಮಿಗಳು ಹೊಡೆಯುವ ತೀವ್ರತೆ ಮತ್ತು ಆಕ್ರೋಶಕ್ಕೆ ಸುತ್ತಲು ಇದ್ದ ಜನರೂ ಹಲ್ಲೆ ತಡೆಯಲು ಮುಂದಾಗಿಲ್ಲ.</p>.<p>‘ಕೊಲೆ ಉದ್ದೇಶದಿಂದ ದುಷ್ಕರ್ಮಿಗಳು ಪೆಟ್ರೋಲ್ ಹಾಕುವುದಕ್ಕೆ ಸಂಬಂಧಿಸಿದಂತೆ ಜಗಳ ತೆಗೆದು ಚಾಕುವಿನಿಂದ ಹೊಡೆದು ಗಾಯಗೊಳಿಸಿದ್ದಾರೆ. ಜೀವ ಬೆದರಿಕೆ ಹಾಕಿದ್ದಾರೆ’ ಎಂದು ತ್ರಿಶೂಲ್ ತಂದೆ ಶಿವಕುಮಾರ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.</p>.<p>ಈ ಕುರಿತು ನಗರದ ಸಬ್ ಅರ್ಬನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. </p>.<p>ಮೊಬೈಲ್ ದರೋಡೆ</p>.<p>ಕಲಬುರಗಿ ನಗರದ ಸಿಟಿ ಬಸ್ ನಿಲ್ದಾಣದ ಬಳಿ ಬೈಕ್ನಲ್ಲಿ ಹೊರಟಿದ್ದವರನ್ನು ತಡೆದ ಮೂರ್ನಾಲ್ಕು ಜನರ ಗುಂಪೊಂದು ಬೈಕ್ ಸವಾರರ ಬಳಿಯಿದ್ದ ಮೊಬೈಲ್ ಫೋನ್ ಹಾಗೂ ಬೆಳ್ಳಿ ಚೈನು ಕಿತ್ತುಕೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.</p>.<p>‘ಸ್ನೇಹಿತರೊಂದಿಗೆ ಸಿಟಿ ಬಸ್ ನಿಲ್ದಾಣದ ಬಳಿ ಹೊರಟ್ಟಿದ್ದಾಗ ಮೂರ್ನಾಲ್ಕು ಯುವಕರ ಗುಂಪೊಂದು ನಮ್ಮನ್ನು ತಡೆದು ಕನ್ನಡ ಮತ್ತು ಹಿಂದಿಯಲ್ಲಿ ಬೈದು ಹಣ ನೀಡುವಂತೆ ಹೆದರಿಸಿತು. ದುಡ್ಡಿಲ್ಲ ಎಂದಾಗ ಕೈಯಿಂದ ಹೊಡೆದಿದ್ದಾರೆ. ಚಾಕು ಹಾಗೂ ಕಲ್ಲಿನಿಂದ ಹಲ್ಲೆ ನಡೆಸಿದ್ದಾರೆ. ಬಳಿಕ ನನ್ನ ಬಳಿಯಿದ್ದ ₹50 ಸಾವಿರ ಮೊತ್ತದ ಐಫೋನ್, 3 ತೊಲ ಬೆಳ್ಳಿಯ ಚೈನು ಹಾಗೂ ಪಾಕೇಟ್ ಕಸಿದುಕೊಂಡು ಪರಾರಿಯಾಗಿದ್ದಾರೆ’ ಎಂದು ಮೊಬೈಲ್ ಫೋನ್ ಹಾಗೂ ಬೆಳ್ಳಿ ಚೈನು ಕಳೆದುಕೊಂಡಿರುವ ಚಿಂಚೋಳಿ ತಾಲ್ಲೂಕಿನ ಪೋಲಕಪಲ್ಲಿಯ ನಿವಾಸಿ, ಚಾಲಕ ತಯ್ಯಬ್ ಮೆಹಬೂಬ್ಸಾಬ್ ದೂರಿನಲ್ಲಿ ತಿಳಿಸಿದ್ದಾರೆ.</p>.<p>ಈ ಕುರಿತು ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<p><strong>ಚಿನ್ನಾಭರಣ ಕಳವು</strong></p>.<p>ಕಲಬುರಗಿಯ ಕೋಟನೂರು(ಡಿ) ಪ್ರದೇಶದ ಮಯೂರ ನಗರದಲ್ಲಿರುವ ಮನೆ ಬಾಗಿಲ ಕೊಂಡಿ ಮುರಿದ ಕಳ್ಳರು ಬೆಡ್ರೂಂನ ಲಾಕರ್ ಒಡೆದು 20 ಗ್ರಾಂ ಚಿನ್ನಾಭರಣ, 25 ಗ್ರಾಂ ಬೆಳ್ಳಿ ಆಭರಣ ಕದ್ದು ಪರಾರಿಯಾಗಿದ್ದಾರೆ.</p>.<p>ಜ್ಯೋತಿ ರೆಡ್ಡಿ ಚಿನ್ನ–ಬೆಳ್ಳಿ ಆಭರಣ ಕಳೆದುಕೊಂಡ ಮಹಿಳೆ. ಜೇವರ್ಗಿ ಸರ್ಕಾರಿ ಆಸ್ಪತ್ರೆಯಲ್ಲಿ ಕೆಲಸ ಮಾಡುವ ಜ್ಯೋತಿ ಅವರು ಬೆಂಗಳೂರಿಗೆ ತಂಗಿ ಮನೆಗೆ ಹೋಗಿದ್ದ ವೇಳೆ ಕಳವು ನಡೆದಿದೆ. ಈ ಕುರಿತು ಜ್ಯೋತಿ ನೀಡಿರುವ ದೂರಿನನ್ವಯ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಲಬುರಗಿ:</strong> ನಗರದ ಆಳಂದ ಚೆಕ್ಪೋಸ್ಟ್ ಬಳಿ ದ್ವಿಚಕ್ರ ವಾಹನಕ್ಕೆ ಪೆಟ್ರೋಲ್ ಹಾಕುವ ವಿಷಯಕ್ಕೆ ಜಗಳ ತೆಗೆದು ಪೆಟ್ರೊಲ್ ಬಂಕ್ ಕಾರ್ಮಿಕನ ಮೇಲೆ ದುಷ್ಕರ್ಮಿಗಳು ಚಾಕುವಿನಿಂದ ಹಲ್ಲೆ ನಡೆಸಿದ್ದಾರೆ. ಈ ಘಟನೆ ಸಿ.ಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.</p>.<p>ನಗರದ ಆಳಂದ ರಸ್ತೆಯ ವಿಶ್ವಾರಾಧ್ಯ ದೇವಸ್ಥಾನ ಬಳಿಯ ಪೆಟ್ರೋಲ್ ಬಂಕ್ನಲ್ಲಿ ಅ.3ರಂದು ಸಂಜೆ 8.27ರ ವೇಳೆಯಲ್ಲಿ ಈ ಘಟನೆ ನಡೆದಿದ್ದು, ಪೆಟ್ರೋಲ್ ಬಂಕ್ ಕಾರ್ಮಿಕ ತ್ರಿಶೂಲ್ ಗಂಭೀರವಾಗಿ ಗಾಯಗೊಂಡಿದ್ದಾರೆ.</p>.<p><strong>ವಿಡಿಯೊದಲ್ಲಿ ಏನಿದೆ?:</strong></p>.<p>ಕಾರ್ಮಿಕ ತ್ರಿಶೂಲ್ನೊಂದಿಗೆ ವಾಗ್ವಾದ ನಡೆಸುವ ಹಾಗೂ ಅವರನ್ನು ಕೈಯಿಂದ ಗುದ್ದುವ, ಕಾಲಿಂದ ಒದೆಯುವ ಹಾಗೂ ಮಾರಕಾಸ್ತ್ರದಿಂದ ಹಲ್ಲೆ ಮಾಡುವ ದೃಶ್ಯಗಳು ವಿಡಿಯೊದಲ್ಲಿವೆ. ದುಷ್ಕರ್ಮಿಗಳು ಹೊಡೆಯುವ ತೀವ್ರತೆ ಮತ್ತು ಆಕ್ರೋಶಕ್ಕೆ ಸುತ್ತಲು ಇದ್ದ ಜನರೂ ಹಲ್ಲೆ ತಡೆಯಲು ಮುಂದಾಗಿಲ್ಲ.</p>.<p>‘ಕೊಲೆ ಉದ್ದೇಶದಿಂದ ದುಷ್ಕರ್ಮಿಗಳು ಪೆಟ್ರೋಲ್ ಹಾಕುವುದಕ್ಕೆ ಸಂಬಂಧಿಸಿದಂತೆ ಜಗಳ ತೆಗೆದು ಚಾಕುವಿನಿಂದ ಹೊಡೆದು ಗಾಯಗೊಳಿಸಿದ್ದಾರೆ. ಜೀವ ಬೆದರಿಕೆ ಹಾಕಿದ್ದಾರೆ’ ಎಂದು ತ್ರಿಶೂಲ್ ತಂದೆ ಶಿವಕುಮಾರ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.</p>.<p>ಈ ಕುರಿತು ನಗರದ ಸಬ್ ಅರ್ಬನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. </p>.<p>ಮೊಬೈಲ್ ದರೋಡೆ</p>.<p>ಕಲಬುರಗಿ ನಗರದ ಸಿಟಿ ಬಸ್ ನಿಲ್ದಾಣದ ಬಳಿ ಬೈಕ್ನಲ್ಲಿ ಹೊರಟಿದ್ದವರನ್ನು ತಡೆದ ಮೂರ್ನಾಲ್ಕು ಜನರ ಗುಂಪೊಂದು ಬೈಕ್ ಸವಾರರ ಬಳಿಯಿದ್ದ ಮೊಬೈಲ್ ಫೋನ್ ಹಾಗೂ ಬೆಳ್ಳಿ ಚೈನು ಕಿತ್ತುಕೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.</p>.<p>‘ಸ್ನೇಹಿತರೊಂದಿಗೆ ಸಿಟಿ ಬಸ್ ನಿಲ್ದಾಣದ ಬಳಿ ಹೊರಟ್ಟಿದ್ದಾಗ ಮೂರ್ನಾಲ್ಕು ಯುವಕರ ಗುಂಪೊಂದು ನಮ್ಮನ್ನು ತಡೆದು ಕನ್ನಡ ಮತ್ತು ಹಿಂದಿಯಲ್ಲಿ ಬೈದು ಹಣ ನೀಡುವಂತೆ ಹೆದರಿಸಿತು. ದುಡ್ಡಿಲ್ಲ ಎಂದಾಗ ಕೈಯಿಂದ ಹೊಡೆದಿದ್ದಾರೆ. ಚಾಕು ಹಾಗೂ ಕಲ್ಲಿನಿಂದ ಹಲ್ಲೆ ನಡೆಸಿದ್ದಾರೆ. ಬಳಿಕ ನನ್ನ ಬಳಿಯಿದ್ದ ₹50 ಸಾವಿರ ಮೊತ್ತದ ಐಫೋನ್, 3 ತೊಲ ಬೆಳ್ಳಿಯ ಚೈನು ಹಾಗೂ ಪಾಕೇಟ್ ಕಸಿದುಕೊಂಡು ಪರಾರಿಯಾಗಿದ್ದಾರೆ’ ಎಂದು ಮೊಬೈಲ್ ಫೋನ್ ಹಾಗೂ ಬೆಳ್ಳಿ ಚೈನು ಕಳೆದುಕೊಂಡಿರುವ ಚಿಂಚೋಳಿ ತಾಲ್ಲೂಕಿನ ಪೋಲಕಪಲ್ಲಿಯ ನಿವಾಸಿ, ಚಾಲಕ ತಯ್ಯಬ್ ಮೆಹಬೂಬ್ಸಾಬ್ ದೂರಿನಲ್ಲಿ ತಿಳಿಸಿದ್ದಾರೆ.</p>.<p>ಈ ಕುರಿತು ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<p><strong>ಚಿನ್ನಾಭರಣ ಕಳವು</strong></p>.<p>ಕಲಬುರಗಿಯ ಕೋಟನೂರು(ಡಿ) ಪ್ರದೇಶದ ಮಯೂರ ನಗರದಲ್ಲಿರುವ ಮನೆ ಬಾಗಿಲ ಕೊಂಡಿ ಮುರಿದ ಕಳ್ಳರು ಬೆಡ್ರೂಂನ ಲಾಕರ್ ಒಡೆದು 20 ಗ್ರಾಂ ಚಿನ್ನಾಭರಣ, 25 ಗ್ರಾಂ ಬೆಳ್ಳಿ ಆಭರಣ ಕದ್ದು ಪರಾರಿಯಾಗಿದ್ದಾರೆ.</p>.<p>ಜ್ಯೋತಿ ರೆಡ್ಡಿ ಚಿನ್ನ–ಬೆಳ್ಳಿ ಆಭರಣ ಕಳೆದುಕೊಂಡ ಮಹಿಳೆ. ಜೇವರ್ಗಿ ಸರ್ಕಾರಿ ಆಸ್ಪತ್ರೆಯಲ್ಲಿ ಕೆಲಸ ಮಾಡುವ ಜ್ಯೋತಿ ಅವರು ಬೆಂಗಳೂರಿಗೆ ತಂಗಿ ಮನೆಗೆ ಹೋಗಿದ್ದ ವೇಳೆ ಕಳವು ನಡೆದಿದೆ. ಈ ಕುರಿತು ಜ್ಯೋತಿ ನೀಡಿರುವ ದೂರಿನನ್ವಯ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>