ಕಲಬುರಗಿ ನಗರದಲ್ಲಿ ಶುಕ್ರವಾರ ಈದ್ ಮಿಲಾದ್ ಮೆರವಣಿಗೆಯಲ್ಲಿ ಡ್ರೈಫ್ರೂಟ್ಸ್ನಲ್ಲಿ ಮಾಡಿದ್ದ ಸ್ತಬ್ಧಚಿತ್ರ ಗಮನ ಸೆಳೆಯಿತು
ಪ್ರಜಾವಾಣಿ ಚಿತ್ರ: ತಾಜುದ್ದೀನ್ ಆಜಾದ್
ಈದ್ ಮಿಲಾದ್ ಆಚರಣೆ ಅಂಗವಾಗಿ ಕಲಬುರಗಿ ನಗರದಲ್ಲಿ ಕುದುರೆ ಕುಣಿತ ಜನರನ್ನು ರಂಜಿಸಿತು
ಪ್ರಜಾವಾಣಿ ಚಿತ್ರ: ತಾಜುದ್ದೀನ್ ಆಜಾದ್
ಕಲಬುರಗಿಯ ಅಬ್ದುಲ್ ಕಲಾಂ ವೃತ್ತದಲ್ಲಿ ಶುಕ್ರವಾರ ಎಸ್ಐಒ ಸಂಘಟನೆಯವರು ‘ಮಾನವೀಯತೆ ಗಾಜಾದೊಂದಿಗೆ ನಿಲ್ಲಲಿ’ ಎಂದು ಪ್ರತಿಭಟನೆ ನಡೆಸಿದರು ಪ್ರಜಾವಾಣಿ ಚಿತ್ರ

ಇಸ್ಲಾಂ ಧರ್ಮದಲ್ಲಿ ಸಲಾಂ ಎಂದು ಹೇಳುವುದು ಬೇರೆಯವರಿಗಾಗಿ ಅಲ್ಲಾನಲ್ಲಿ ಪ್ರಾರ್ಥಿಸುವುದಾಗಿದೆ. ಪೈಗಂಬರರ ಜೀವನ ನಮಗೆ ದಿಕ್ಸೂಚಿಯಾಗಿದೆ
ಸೈಯದ್ ಮುಹಮ್ಮದ್ ಅಲಿ ಅಲ್–ಹುಸೇನಿ ಖಾಜಾ ಬಂದಾನವಾಜ ದರ್ಗಾದ ಮುಖ್ಯಸ್ಥಪ್ಯಾಲೆಸ್ತೀನ್ ಪರ ಪ್ರತಿಭಟನೆ
ಪ್ಯಾಲೆಸ್ತೀನ್ ಮೇಲೆ ಇಸ್ರೇಲ್ ನಡೆಸುತ್ತಿರುವ ದಾಳಿಯನ್ನು ಖಂಡಿಸಿ ಎಸ್ಐಒ ಸಂಘಟನೆಯಿಂದ ‘ಮಾನವೀಯತೆ ಗಾಜಾದೊಂದಿಗೆ ನಿಲ್ಲಲಿ’ ಎಂದು ಅಬ್ದುಲ್ ಕಲಾಂ ವೃತ್ತದಲ್ಲಿ ಗಾಜಾ ಸಂಘರ್ಷದ ಭಿತ್ತಿಚಿತ್ರಗಳನ್ನು ಹಾಕಿ ಪ್ರತಿಭಟನೆ ವ್ಯಕ್ತಪಡಿಸುತ್ತಿದ್ದರು. ಸ್ಥಳಕ್ಕಾಗಮಿಸಿದ ಜಿಲ್ಲಾಡಳಿತದ ಸಿಬ್ಬಂದಿ ಭಿತ್ತಿಚಿತ್ರಗಳನ್ನು ತೆರವುಗೊಳಿಸಲು ಮುಂದಾದರು. ಈ ವೇಳೆ ವಾಗ್ವಾದ ನಡೆಯಿತು. ಪ್ಯಾಲೇಸ್ತೀನ್ನಲ್ಲಿ ಮಹಿಳೆ ಮಕ್ಕಳ ಹತ್ಯಾಕಾಂಡ ನಡೆಯುತ್ತಿದೆ ಎಂದು ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು. ಹಬ್ಬದ ಸಂದರ್ಭದಲ್ಲಿ ವಿವಾದ ಬೇಡ ಎಂದು ಜಿಲ್ಲಾಡಳಿತದ ಸಿಬ್ಬಂದಿ ಮನವೊಲಿಸಿ ಭಿತ್ತಿಚಿತ್ರಗಳನ್ನು ತೆರವುಗೊಳಿಸಿದರು.