<p><strong>ಕಲಬುರಗಿ</strong>: ಇಲ್ಲಿನ ರಾಜ್ಯ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಕಚೇರಿಯ ಬೀಗ ಮುರಿದ ಕಳ್ಳರು, ಕಚೇರಿಯಲ್ಲಿನ ಸಾಮಗ್ರಿಗಳನ್ನು ಕದ್ದೊಯ್ದಿದ್ದಾರೆ.</p>.<p>ಭಾನುವಾರದ ರಜೆಯ ಬಳಿಕ ಸೋಮವಾರ ಬೆಳಿಗ್ಗೆ ನಿಗಮದ ಕಚೇರಿಗೆ ಬಂದು ನೋಡಿದಾಗ ಬೀಗ ಮುರಿದು, ಬಾಗಿಲು ತೆರೆದಿತ್ತು. ಒಳಗಿದ್ದ ಸಾಮಾನುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಮೇವು ಕಟಾವು ಯಂತ್ರ, ನಿರುಪಯುಕ್ತ ಯುಪಿಎಸ್ ಬ್ಯಾಟರಿ, ಮುರಿದ ಪ್ಲಾಸ್ಟಿಕ್ ಕುರ್ಚಿ ಸೇರಿ ₹ 29,300 ಮೌಲ್ಯದ ಸಾಮಗ್ರಿಗಳು ಕಳುವಾಗಿವೆ ಎಂದು ಬ್ರಹ್ಮಪುರ ಠಾಣೆಯ ಪೊಲೀಸರು ತಿಳಿಸಿದ್ದಾರೆ.</p>.<p><strong>ಜಾಮೀನಿನ ಮೇಲೆ ಬಂದು ಜೀವಬೆದರಿಕೆ:</strong> ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಮಾಡಿ ಜೀವಬೆದರಿಕೆ ಹಾಕಿದ ಆರೋಪದಡಿ ಅತ್ಯಾಚಾರ ಪ್ರಕರಣದಡಿ ಜೈಲಿಗೆ ಹೋಗಿ ಜಾಮೀನಿನ ಮೇಲೆ ಹೊರಬಂದ ಆಪಾದಿತನ ವಿರುದ್ಧ ಆರ್.ಜಿ. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<p>ವಿಶ್ವರಾಧ್ಯ ವೀರಣ್ಣ ಎಂಬಾತನ ವಿರುದ್ಧ ಸುಂದರ ನಗರದ ನಿವಾಸಿ ಬಸವರಾಜ ಗೊಬ್ಬೂರ ದೂರು ನೀಡಿದ್ದಾರೆ. ನಗರದ ಹೋಟೆಲ್ ಒಂದರಲ್ಲಿ ಉಪಹಾರ ಸೇವಿಸುತ್ತಿದ್ದ ವೇಳೆ ವಿಶ್ವರಾಧ್ಯ ಎಂಬಾತ ಹಲ್ಲೆ ಮಾಡಿ, ಜೀವ ಬೆದರಿಕೆ ಹಾಕಿದ್ದ ಎಂದು ಪೊಲೀಸರು ಹೇಳಿದ್ದಾರೆ.</p>.<p><strong>ಚಾಕು ತೋರಿಸಿ ಚಿನ್ನಾಭರಣ ದೋಚಿ ಪರಾರಿ:</strong> ಬೈಕ್ ಮೇಲೆ ಹೋಗುತ್ತಿದ್ದವರನ್ನು ತಡೆದು ಚಾಕು ತೋರಿಸಿ ಅವರ ಚಿನ್ನಾಭರಣ ದೋಚಿ ಪರಾರಿಯಾದ ಘಟನೆ ನಾಗನಹಳ್ಳಿ ಸಮೀಪದ ರಸ್ತೆಯಲ್ಲಿ ನಡೆದಿದೆ.</p>.<p>ನಗರದ ನಿವಾಸಿ ಶಿವಮ್ಮ ಶಾಂತಪ್ಪ ಅವರ ಬಳಿಯಿಂದ ಬೈಕ್ ಮೇಲೆ ಬಂದ ಮೂವರು ಕಳ್ಳರು ₹ 72,500 ಮೌಲ್ಯದ ಚಿನ್ನಾಭರಣ, ₹ 16 ಸಾವಿರ ಮೌಲ್ಯದ ಮೊಬೈಲ್, ₹ 8 ಸಾವಿರ ಮೊತ್ತದ ನಗದು, ₹ 2 ಸಾವಿರ ಮೌಲ್ಯದ ಕೈಗಡಿ ಹಾಗೂ ಮಲ್ಲಿಕಾರ್ಜುನ ಅವರ ₹ 15 ಸಾವಿರ ಮೌಲ್ಯದ ಮೊಬೈಲ್ ದೋಚಿದ್ದಾರೆ ಎಂದು ವಿಶ್ವವಿದ್ಯಾಲಯ ಠಾಣೆಯ ಪೊಲೀಸರು ತಿಳಿಸಿದ್ದಾರೆ.</p>.<p><strong>ಜೀವಬೆದರಿಕೆ:</strong> ಸಾರ್ವಜನಿಕ ಸ್ಥಳದಲ್ಲಿ ಮಾರಕಾಸ್ತ್ರಗಳನ್ನು ಹಿಡಿದು ಜೀವಬೆದರಿಕೆ ಹಾಕಿದ ಆರೋಪದಡಿ ಎಂ.ಬಿ ನಗರ ಪೊಲೀಸ್ ಠಾಣೆಯಲ್ಲಿ ಸೊಹೇಲ್ ಖಾಜಾ ಪಾಶಾ, ಖಾಜಾ ಪಾಶಾ ಸಿರಾಜ್, ಸಮೀರ್ ಮತ್ತು ಅಷ್ಪಾಕ್ ಎಂಬುವವರ ವಿರುದ್ಧ ದೂರು ದಾಖಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಲಬುರಗಿ</strong>: ಇಲ್ಲಿನ ರಾಜ್ಯ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಕಚೇರಿಯ ಬೀಗ ಮುರಿದ ಕಳ್ಳರು, ಕಚೇರಿಯಲ್ಲಿನ ಸಾಮಗ್ರಿಗಳನ್ನು ಕದ್ದೊಯ್ದಿದ್ದಾರೆ.</p>.<p>ಭಾನುವಾರದ ರಜೆಯ ಬಳಿಕ ಸೋಮವಾರ ಬೆಳಿಗ್ಗೆ ನಿಗಮದ ಕಚೇರಿಗೆ ಬಂದು ನೋಡಿದಾಗ ಬೀಗ ಮುರಿದು, ಬಾಗಿಲು ತೆರೆದಿತ್ತು. ಒಳಗಿದ್ದ ಸಾಮಾನುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಮೇವು ಕಟಾವು ಯಂತ್ರ, ನಿರುಪಯುಕ್ತ ಯುಪಿಎಸ್ ಬ್ಯಾಟರಿ, ಮುರಿದ ಪ್ಲಾಸ್ಟಿಕ್ ಕುರ್ಚಿ ಸೇರಿ ₹ 29,300 ಮೌಲ್ಯದ ಸಾಮಗ್ರಿಗಳು ಕಳುವಾಗಿವೆ ಎಂದು ಬ್ರಹ್ಮಪುರ ಠಾಣೆಯ ಪೊಲೀಸರು ತಿಳಿಸಿದ್ದಾರೆ.</p>.<p><strong>ಜಾಮೀನಿನ ಮೇಲೆ ಬಂದು ಜೀವಬೆದರಿಕೆ:</strong> ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಮಾಡಿ ಜೀವಬೆದರಿಕೆ ಹಾಕಿದ ಆರೋಪದಡಿ ಅತ್ಯಾಚಾರ ಪ್ರಕರಣದಡಿ ಜೈಲಿಗೆ ಹೋಗಿ ಜಾಮೀನಿನ ಮೇಲೆ ಹೊರಬಂದ ಆಪಾದಿತನ ವಿರುದ್ಧ ಆರ್.ಜಿ. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<p>ವಿಶ್ವರಾಧ್ಯ ವೀರಣ್ಣ ಎಂಬಾತನ ವಿರುದ್ಧ ಸುಂದರ ನಗರದ ನಿವಾಸಿ ಬಸವರಾಜ ಗೊಬ್ಬೂರ ದೂರು ನೀಡಿದ್ದಾರೆ. ನಗರದ ಹೋಟೆಲ್ ಒಂದರಲ್ಲಿ ಉಪಹಾರ ಸೇವಿಸುತ್ತಿದ್ದ ವೇಳೆ ವಿಶ್ವರಾಧ್ಯ ಎಂಬಾತ ಹಲ್ಲೆ ಮಾಡಿ, ಜೀವ ಬೆದರಿಕೆ ಹಾಕಿದ್ದ ಎಂದು ಪೊಲೀಸರು ಹೇಳಿದ್ದಾರೆ.</p>.<p><strong>ಚಾಕು ತೋರಿಸಿ ಚಿನ್ನಾಭರಣ ದೋಚಿ ಪರಾರಿ:</strong> ಬೈಕ್ ಮೇಲೆ ಹೋಗುತ್ತಿದ್ದವರನ್ನು ತಡೆದು ಚಾಕು ತೋರಿಸಿ ಅವರ ಚಿನ್ನಾಭರಣ ದೋಚಿ ಪರಾರಿಯಾದ ಘಟನೆ ನಾಗನಹಳ್ಳಿ ಸಮೀಪದ ರಸ್ತೆಯಲ್ಲಿ ನಡೆದಿದೆ.</p>.<p>ನಗರದ ನಿವಾಸಿ ಶಿವಮ್ಮ ಶಾಂತಪ್ಪ ಅವರ ಬಳಿಯಿಂದ ಬೈಕ್ ಮೇಲೆ ಬಂದ ಮೂವರು ಕಳ್ಳರು ₹ 72,500 ಮೌಲ್ಯದ ಚಿನ್ನಾಭರಣ, ₹ 16 ಸಾವಿರ ಮೌಲ್ಯದ ಮೊಬೈಲ್, ₹ 8 ಸಾವಿರ ಮೊತ್ತದ ನಗದು, ₹ 2 ಸಾವಿರ ಮೌಲ್ಯದ ಕೈಗಡಿ ಹಾಗೂ ಮಲ್ಲಿಕಾರ್ಜುನ ಅವರ ₹ 15 ಸಾವಿರ ಮೌಲ್ಯದ ಮೊಬೈಲ್ ದೋಚಿದ್ದಾರೆ ಎಂದು ವಿಶ್ವವಿದ್ಯಾಲಯ ಠಾಣೆಯ ಪೊಲೀಸರು ತಿಳಿಸಿದ್ದಾರೆ.</p>.<p><strong>ಜೀವಬೆದರಿಕೆ:</strong> ಸಾರ್ವಜನಿಕ ಸ್ಥಳದಲ್ಲಿ ಮಾರಕಾಸ್ತ್ರಗಳನ್ನು ಹಿಡಿದು ಜೀವಬೆದರಿಕೆ ಹಾಕಿದ ಆರೋಪದಡಿ ಎಂ.ಬಿ ನಗರ ಪೊಲೀಸ್ ಠಾಣೆಯಲ್ಲಿ ಸೊಹೇಲ್ ಖಾಜಾ ಪಾಶಾ, ಖಾಜಾ ಪಾಶಾ ಸಿರಾಜ್, ಸಮೀರ್ ಮತ್ತು ಅಷ್ಪಾಕ್ ಎಂಬುವವರ ವಿರುದ್ಧ ದೂರು ದಾಖಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>