ರಾಜ್ಯ ಹೆದ್ದಾರಿ ಕಲಬುರ್ಗಿ–ರಿಬ್ಬನಪಲ್ಲಿ ಮಧ್ಯದ ಮಳಖೇಡ (ರಾಷ್ಟ್ರಕೂಟರ ರಾಜಧಾನಿಯಾಗಿದ್ದ ಪಟ್ಟಣ) ಸೇತುವೆ ನಾಲ್ಕು ದಿನಗಳ ಕಾಲ ತುಂಬಿ ಹರಿದಿತ್ತು. ಇದರಿಂದಾಗಿ ಸೇಡಂ–ಕಲಬುರ್ಗಿ ನೇರ ಸಂಪರ್ಕ ಕಡಿತಗೊಂಡು ಪ್ರಯಾಣಿಕರು ತೊಂದರೆ ಅನುಭವಿಸಿದ್ದರು. ಕಾಗಿಣಾ ನದಿ ನೀರಿನ ಹರಿವು ಇಳಿಮುಖವಾಗಿದ್ದರಿಂದ ಸಂಚಾರ ಆರಂಭಗೊಂಡಿದೆ. ಇದರಿಂದಾಗಿ ಪ್ರಯಾಣಿಕರು ನಿಟ್ಟುಸಿರು ಬಿಡುವಂತಾಗಿದೆ.