<p><strong>ಕಲಬುರಗಿ</strong>: ಶನಿವಾರ ನಾಪತ್ತೆಯಾಗಿದ್ದ ಯುವಕರೊಬ್ಬರು ನಗರದ ಬಸವೇಶ್ವರ ಕಾಲೊನಿ ಸಮೀಪ ಚರಂಡಿಯಲ್ಲಿ ಶವವಾಗಿ ಭಾನುವಾರ ಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.</p>.<p>ನಗರದ ಕೆಬಿಎನ್ ದರ್ಗಾ ಪ್ರದೇಶದ ನಯಾ ಮೊಹಲ್ಲಾದ ನಿವಾಸಿ ಮುಝಮಿಲ್ ಸಿದ್ದೀಕ್ ಅಹ್ಮದ್ (18) ಮೃತರು.</p>.<p>ಮುಝಮಿಲ್ ಶನಿವಾರ ರಾತ್ರಿ ಮನೆಗೆ ಬಾರದ ಕಾರಣ ಪಾಲಕರು ತಡರಾತ್ರಿ ಪೊಲೀಸರಿಗೆ ದೂರು ನೀಡಲು ಮುಂದಾಗಿದ್ದರು. ಆದರೆ, ಬೆಳಿಗ್ಗೆಯಷ್ಟೊತ್ತಿಗೆ ಎಂ.ಬಿ.ನಗರ ಸಮೀಪದ ಮಳೆ ನೀರುಗಾಲುವೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.</p>.<p>ಈ ಕುರಿತು ಎಂ.ಬಿ.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<p><strong>ಚಿನ್ನಾಭರಣ ಕಳವು</strong></p>.<p>ಕಲಬುರಗಿಯ ಭವಾನಿ ನಗರದ ಹನುಮಾನ ದೇವಸ್ಥಾನದ ಸಮೀಪದ ಕಿರಾಣಿ ಅಂಗಡಿ ಕೀಲಿ ಮುರಿದ ಕಳ್ಳರು ಚಿನ್ನಾಭರಣ ಕದ್ದು ಪರಾರಿಯಾಗಿದ್ದಾರೆ.</p>.<p>ಚಂದ್ರಕಾಂತ ಗೋಳಾ ಚಿನ್ನಾಭರಣ ಕಳೆದುಕೊಂಡವರು.</p>.<p>‘ಅಂಗಡಿಯ ಹಿಂದಿನ ಬಾಗಿಲಿನ ಕೀಲಿ ಮುರಿದು ಅಂಗಡಿಯ ಕೌಂಟರ್ ಟೇಬಲ್ನ ಡ್ರಾನಲ್ಲಿದ್ದ 30 ಗ್ರಾಂ ಚಿನ್ನಾಭರಣ ಹಾಗೂ ₹12 ಸಾವಿರ ಕದ್ದು ಪರಾರಿಯಾಗಿದ್ದಾರೆ’ ಎಂದು ದೂರಿನಲ್ಲಿ ಚಂದ್ರಕಾಂತ ತಿಳಿಸಿದ್ದಾರೆ. ಚೌಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<p><strong>₹39 ಲಕ್ಷ ವಂಚನೆ</strong></p>.<p>ಷೇರುಪೇಟೆಯಲ್ಲಿ ಹೂಡಿಕೆ ಮಾಡಿ ಹೆಚ್ಚಿನ ಲಾಭ ಗಳಿಸುವ ಆಮಿಷವೊಡ್ಡಿ ವ್ಯಕ್ತಿಯೊಬ್ಬರಿಗೆ ₹39 ಲಕ್ಷ ವಂಚಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.</p>.<p>ನಗರದ ಹಳೇ ಜೇವರ್ಗಿ ರಸ್ತೆಯ ಶಹಬಾಜ್ ಕಾಲೊನಿಯ ನಿವಾಸಿ ಸೈಯದ್ ಮೋಯಿನ್ ಪಾಶಾ ವಂಚನೆಗೊಳಗಾದವರು.</p>.<p>‘ಷೇರುಪೇಟೆಯಲ್ಲಿ ಹೂಡಿಕೆ ಕುರಿತು ಅಂತರ್ಜಾಲದಲ್ಲಿ ಹುಡುಕುವಾಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕ ಲಿಂಕ್ ಮೂಲಕ ನನ್ನ ವೈಯಕ್ತಿಕ ವಿವರ ನಮೂದಿಸಿದೆ. ಬಳಿಕ ವಾಟ್ಸ್ಆ್ಯಪ್ ಮೂಲಕ ಕೆಲವರು ಹೂಡಿಕೆಗೆ ಪ್ರೇರೆಪಿಸಿದರು. ನಾನು ಹಂತಹಂತವಾಗಿ ₹33 ಲಕ್ಷ ಹೂಡಿಕೆ ಮಾಡಿದೆ. ಬಳಿಕ ನನ್ನ ಡಿಮ್ಯಾಟ್ ಖಾತೆಯಲ್ಲಿ ₹80 ಲಕ್ಷ ಲಾಭ ತೋರಿಸಿತ್ತು. ಅದರಿಂದ ಲಾಭಾಂಶ ಹಿಂಪಡೆಯಲು ಯತ್ನಿಸಿದಾಗ ₹6 ಲಕ್ಷದಷ್ಟು ಹಣ ಕಮಿಷನ್ ರೂಪದಲ್ಲಿ ಕಟ್ಟಲು ಸೂಚಿಸಿದರು. ಅದನ್ನೂ ಕಟ್ಟಿದಾಗ ಮತ್ತೆ ₹4.74 ಲಕ್ಷ ವರ್ಗಾಯಿಸಲು ತಿಳಿಸಿದಾಗ ಹೆಚ್ಚಿನ ಲಾಭದ ಆಮಿಷವೊಡ್ಡಿ ವಂಚಿಸಿರುವುದು ಗೊತ್ತಾಯಿತು’ ಎಂದು ಸೈಯದ್ ಮೋಯಿನ್ ಪಾಶಾ ದೂರಿನಲ್ಲಿ ತಿಳಿಸಿದ್ದಾರೆ.</p>.<p>ಈ ಕುರಿತು ನಗರದ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಲಬುರಗಿ</strong>: ಶನಿವಾರ ನಾಪತ್ತೆಯಾಗಿದ್ದ ಯುವಕರೊಬ್ಬರು ನಗರದ ಬಸವೇಶ್ವರ ಕಾಲೊನಿ ಸಮೀಪ ಚರಂಡಿಯಲ್ಲಿ ಶವವಾಗಿ ಭಾನುವಾರ ಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.</p>.<p>ನಗರದ ಕೆಬಿಎನ್ ದರ್ಗಾ ಪ್ರದೇಶದ ನಯಾ ಮೊಹಲ್ಲಾದ ನಿವಾಸಿ ಮುಝಮಿಲ್ ಸಿದ್ದೀಕ್ ಅಹ್ಮದ್ (18) ಮೃತರು.</p>.<p>ಮುಝಮಿಲ್ ಶನಿವಾರ ರಾತ್ರಿ ಮನೆಗೆ ಬಾರದ ಕಾರಣ ಪಾಲಕರು ತಡರಾತ್ರಿ ಪೊಲೀಸರಿಗೆ ದೂರು ನೀಡಲು ಮುಂದಾಗಿದ್ದರು. ಆದರೆ, ಬೆಳಿಗ್ಗೆಯಷ್ಟೊತ್ತಿಗೆ ಎಂ.ಬಿ.ನಗರ ಸಮೀಪದ ಮಳೆ ನೀರುಗಾಲುವೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.</p>.<p>ಈ ಕುರಿತು ಎಂ.ಬಿ.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<p><strong>ಚಿನ್ನಾಭರಣ ಕಳವು</strong></p>.<p>ಕಲಬುರಗಿಯ ಭವಾನಿ ನಗರದ ಹನುಮಾನ ದೇವಸ್ಥಾನದ ಸಮೀಪದ ಕಿರಾಣಿ ಅಂಗಡಿ ಕೀಲಿ ಮುರಿದ ಕಳ್ಳರು ಚಿನ್ನಾಭರಣ ಕದ್ದು ಪರಾರಿಯಾಗಿದ್ದಾರೆ.</p>.<p>ಚಂದ್ರಕಾಂತ ಗೋಳಾ ಚಿನ್ನಾಭರಣ ಕಳೆದುಕೊಂಡವರು.</p>.<p>‘ಅಂಗಡಿಯ ಹಿಂದಿನ ಬಾಗಿಲಿನ ಕೀಲಿ ಮುರಿದು ಅಂಗಡಿಯ ಕೌಂಟರ್ ಟೇಬಲ್ನ ಡ್ರಾನಲ್ಲಿದ್ದ 30 ಗ್ರಾಂ ಚಿನ್ನಾಭರಣ ಹಾಗೂ ₹12 ಸಾವಿರ ಕದ್ದು ಪರಾರಿಯಾಗಿದ್ದಾರೆ’ ಎಂದು ದೂರಿನಲ್ಲಿ ಚಂದ್ರಕಾಂತ ತಿಳಿಸಿದ್ದಾರೆ. ಚೌಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<p><strong>₹39 ಲಕ್ಷ ವಂಚನೆ</strong></p>.<p>ಷೇರುಪೇಟೆಯಲ್ಲಿ ಹೂಡಿಕೆ ಮಾಡಿ ಹೆಚ್ಚಿನ ಲಾಭ ಗಳಿಸುವ ಆಮಿಷವೊಡ್ಡಿ ವ್ಯಕ್ತಿಯೊಬ್ಬರಿಗೆ ₹39 ಲಕ್ಷ ವಂಚಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.</p>.<p>ನಗರದ ಹಳೇ ಜೇವರ್ಗಿ ರಸ್ತೆಯ ಶಹಬಾಜ್ ಕಾಲೊನಿಯ ನಿವಾಸಿ ಸೈಯದ್ ಮೋಯಿನ್ ಪಾಶಾ ವಂಚನೆಗೊಳಗಾದವರು.</p>.<p>‘ಷೇರುಪೇಟೆಯಲ್ಲಿ ಹೂಡಿಕೆ ಕುರಿತು ಅಂತರ್ಜಾಲದಲ್ಲಿ ಹುಡುಕುವಾಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕ ಲಿಂಕ್ ಮೂಲಕ ನನ್ನ ವೈಯಕ್ತಿಕ ವಿವರ ನಮೂದಿಸಿದೆ. ಬಳಿಕ ವಾಟ್ಸ್ಆ್ಯಪ್ ಮೂಲಕ ಕೆಲವರು ಹೂಡಿಕೆಗೆ ಪ್ರೇರೆಪಿಸಿದರು. ನಾನು ಹಂತಹಂತವಾಗಿ ₹33 ಲಕ್ಷ ಹೂಡಿಕೆ ಮಾಡಿದೆ. ಬಳಿಕ ನನ್ನ ಡಿಮ್ಯಾಟ್ ಖಾತೆಯಲ್ಲಿ ₹80 ಲಕ್ಷ ಲಾಭ ತೋರಿಸಿತ್ತು. ಅದರಿಂದ ಲಾಭಾಂಶ ಹಿಂಪಡೆಯಲು ಯತ್ನಿಸಿದಾಗ ₹6 ಲಕ್ಷದಷ್ಟು ಹಣ ಕಮಿಷನ್ ರೂಪದಲ್ಲಿ ಕಟ್ಟಲು ಸೂಚಿಸಿದರು. ಅದನ್ನೂ ಕಟ್ಟಿದಾಗ ಮತ್ತೆ ₹4.74 ಲಕ್ಷ ವರ್ಗಾಯಿಸಲು ತಿಳಿಸಿದಾಗ ಹೆಚ್ಚಿನ ಲಾಭದ ಆಮಿಷವೊಡ್ಡಿ ವಂಚಿಸಿರುವುದು ಗೊತ್ತಾಯಿತು’ ಎಂದು ಸೈಯದ್ ಮೋಯಿನ್ ಪಾಶಾ ದೂರಿನಲ್ಲಿ ತಿಳಿಸಿದ್ದಾರೆ.</p>.<p>ಈ ಕುರಿತು ನಗರದ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>