ಶನಿವಾರ, 5 ಜುಲೈ 2025
×
ADVERTISEMENT
ADVERTISEMENT

ಕಲಬುರಗಿ: ಪುತ್ರನ ಭವಿಷ್ಯಕ್ಕಾಗಿ ಮತ್ತೆ ‘ಕೈ’ ಹಿಡಿದರೇ ಮಾಲೀಕಯ್ಯ ಗುತ್ತೇದಾರ?

Published : 20 ಏಪ್ರಿಲ್ 2024, 6:29 IST
Last Updated : 20 ಏಪ್ರಿಲ್ 2024, 6:29 IST
ಫಾಲೋ ಮಾಡಿ
Comments
ಡಾ. ಉಮೇಶ ಜಾಧವ
ಡಾ. ಉಮೇಶ ಜಾಧವ
‘ರಾಧಾಕೃಷ್ಣ ಗೆಲ್ಲಿಸಲು ಪಣ’
‘ಬಿಜೆಪಿಯವರು ಇತ್ತೀಚಿನ ದಿನಗಳಲ್ಲಿ ನನ್ನ ಯಾವ ಮಾತಿಗೂ ಕಿಮ್ಮತ್ತು ಕೊಡುತ್ತಿರಲಿಲ್ಲ. ಮಣಿಕಂಠನಂತಹ ಅಪರಾಧ ಹಿನ್ನೆಲೆಯ ವ್ಯಕ್ತಿಗೆ ಟಿಕೆಟ್ ನೀಡಿದರು. ನನ್ನ ವಿರೋಧದ ಹೊರತಾಗಿಯೂ ತಮ್ಮ ನಿತಿನ್‌ನನ್ನು ಬಿಜೆಪಿಗೆ ಸೇರಿಸಿಕೊಂಡರು. ಒಂದು ವೇಳೆ ಎಂ.ವೈ. ಪಾಟೀಲ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡರೂ ನಾನು ಒಪ್ಪುತ್ತಿದ್ದೆ. ಆದರೆ ಕುತಂತ್ರ ಬುದ್ಧಿಯ ನಿತಿನ್ ನನ್ನ ಸಹೋದರರು ಸಹೋದರಿಯರ ತಲೆ ಕೆಡಿಸಿ ತನ್ನತ್ತ ಸೆಳೆದ. ಆತನನ್ನು ಪಕ್ಷಕ್ಕೆ ಕರೆದುಕೊಂಡಿದ್ದು ದೊಡ್ಡ ತಪ್ಪು’ ಎಂದು ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ ‘ಪ್ರಜಾವಾಣಿ’ಗೆ ತಿಳಿಸಿದರು. ‘ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ಕೂತು ಮಾತನಾಡಿ ಎಲ್ಲ ಕಹಿ ಘಟನೆಗಳನ್ನು ಮರೆತಿದ್ದೇನೆ. ಈ ಬಾರಿ ರಾಧಾಕೃಷ್ಣ ಅವರನ್ನು ಗೆಲ್ಲಿಸುವ ಮೂಲಕ ಇತಿಹಾಸ ಸೃಷ್ಟಿಸುತ್ತೇವೆ. ಮರಳಿ ನನ್ನ ಪಕ್ಷಕ್ಕೆ ಬಂದಿದ್ದು ಖುಷಿಯಾಗಿದೆ’ ಎಂದರು. ‘ಯಾವ ನಿರೀಕ್ಷೆ ಇಲ್ಲದೆಯೇ ಪಕ್ಷಕ್ಕೆ ಸೇರ್ಪಡೆಯಾಗಿದ್ದೇನೆ. ನನ್ನ ಮಗ ತಾನೇ ಜನರ ಮಧ್ಯೆ ನಿಂತು ಕೆಲಸ ಮಾಡುವ ಮೂಲಕ ಜನ ತನ್ನನ್ನು ಒಪ್ಪುವಂತೆ ಮಾಡಬೇಕು’ ಎಂದು ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT