ಬುಧವಾರ, 9 ಜುಲೈ 2025
×
ADVERTISEMENT
ADVERTISEMENT

ಕಲ್ಯಾಣ ಕರ್ನಾಟಕ: ಬಜೆಟ್‌ನಲ್ಲಿ ಸಿಗಲಿದೆಯೇ ಕೈಗಾರಿಕೆಗೆ ಉತ್ತೇಜನ?

Published : 13 ಫೆಬ್ರುವರಿ 2024, 6:15 IST
Last Updated : 13 ಫೆಬ್ರುವರಿ 2024, 6:15 IST
ಫಾಲೋ ಮಾಡಿ
Comments
ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿನಿಯರನ್ನು ಗಮನವಿರಿಸಿಕೊಂಡು ಸುಸಜ್ಜಿತ ಶೌಚಾಲಯಗಳನ್ನು ನಿರ್ಮಿಸಬೇಕು. ಪ್ರಮುಖ ಕಾಲೇಜುಗಳ ಬಳಿ ಇಂದಿರಾ ಕ್ಯಾಂಟೀನ್ ಆರಂಭಿಸಬೇಕು
ರಬಿಯಾ ಇಪ್ಫತ್ ಗ್ರಂಥಪಾಲಕಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕಲಬುರಗಿ
ಕಲಬುರಗಿ ನಗರದ 50 ವರ್ಷಗಳ ಮುಂದಿನ ಜನಸಂಖ್ಯೆಯನ್ನು ಗಮನದಲ್ಲಿರಿಸಿಕೊಂಡು ಮೆಟ್ರೊ ರೈಲು ಆರಂಭಿಸಲು ಸರ್ವೆ ನಡೆಸಬೇಕು. ಜಿಲ್ಲೆಯಲ್ಲಿ ಆಹಾರ ಸಂಸ್ಕರಣಾ ಘಟಕ ಉದ್ಯೋಗಾಧಾರಿತ ಕೈಗಾರಿಕೆ ಆರಂಭಿಸಬೇಕು
ಪ್ರೊ. ರಮೇಶ ಲಂಡನಕರ್ ಪ್ರಾಧ್ಯಾಪಕ ಗುಲಬರ್ಗಾ ವಿ.ವಿ.
ಜಿಲ್ಲೆಯಲ್ಲಿ ಕೌಶಲ ವಿಶ್ವವಿದ್ಯಾಲಯ ಆರಂಭಿಸಬೇಕು. ಅಂತರರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ನಿರ್ಮಿಸಬೇಕು. ಎರಡನೇ ವರ್ತುಲ ರಸ್ತೆಗೆ ಹಣ ನಿಗದಿಪಡಿಸಬೇಕು
ಸುನೀಲ ಕುಲಕರ್ಣಿ ಅಧ್ಯಕ್ಷ ಕಲ್ಯಾಣ ಕರ್ನಾಟಕ ಗ್ರಾಹಕ ವೇದಿಕೆ
ಕಲ್ಯಾಣ ಕರ್ನಾಟಕದಲ್ಲಿ ಚಿತ್ರಕಲಾವಿದರು ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ಅವರಿಗೆ ಉತ್ತೇಜನ ನೀಡಲು ಕಲಾಗ್ಯಾಲರಿ ಆರಂಭಿಸಬೇಕು. ಎಸ್.ಎಂ. ಪಂಡಿತ್ ರಂಗಮಂದಿರವನ್ನು ಅಭಿವೃದ್ಧಿಪಡಿಸಬೇಕು
ಅಶೋಕ ನೆಲ್ಲಗಿ ಚಿತ್ರಕಲಾವಿದ ಕಲಬುರಗಿ
ಬೇಕಿದೆ ಕಲಬುರಗಿ ಸಮಗ್ರ ಅಭಿವೃದ್ಧಿ ಪ್ಯಾಕೇಜ್
ಕಲ್ಯಾಣ ಕರ್ನಾಟಕದ ಹೆಬ್ಬಾಗಿಲು ಎನಿಸಿಕೊಂಡ ಕಲಬುರಗಿ ಪ್ರಾದೇಶಿಕ ಕೇಂದ್ರವೂ ಹೌದು. ರಾಜ್ಯದ ಇತರ ಪ್ರಾದೇಶಿಕ ಕೇಂದ್ರಗಳಾದ ಮೈಸೂರು ಮಂಗಳೂರು ಬೆಳಗಾವಿಗೆ ಹೋಲಿಸಿದರೆ ತೀವ್ರ ನಿರಾಸೆ ಕಾಡುತ್ತಿದೆ. ನಗರದ ಕೇಂದ್ರ ಬಸ್ ನಿಲ್ದಾಣದ ಎದುರಿನ ತಗ್ಗು ಗುಂಡಿಗಳ ರಸ್ತೆ ಜಿಲ್ಲೆಯ ಜನಪ್ರತಿನಿಧಿಗಳು ಅಧಿಕಾರಿಗಳು ನಗರದ ಸೌಂದರೀಕರಣದ ಬಗ್ಗೆ ವಹಿಸಿರುವ ನಿರ್ಲಕ್ಷ್ಯಕ್ಕೆ ಕನ್ನಡಿ ಹಿಡಿಯುತ್ತದೆ. ನಗರದ ಬಹುತೇಕ ಬಡಾವಣೆಗಳಿಗೆ ಪೂರೈಕೆಯಾಗುವ ಕಲುಷಿತ ನೀರು ಕಸ ವಿಲೇವಾರಿ ಘನತ್ಯಾಜ್ಯ ವಿಲೇವಾರಿಯಲ್ಲಿನ ಸಮಸ್ಯೆ ನಗರಗಳು ಬೆಳೆದರೂ ಒಳಚರಂಡಿ ಒಳರಸ್ತೆಗಳು ಸುಧಾರಿಸದಿರುವುದು ಬಡಾವಣೆಗಳ ಉದ್ಯಾನಗಳು ನಿರ್ವಹಣೆಯಿಲ್ಲದೇ ಸೊರಗಿರುವುದು ನಾಗರಿಕರಲ್ಲಿ ತೀವ್ರ ನಿರಾಸೆಯನ್ನೂ ಜುಗುಪ್ಸೆಯನ್ನೂ ಮೂಡಿಸುತ್ತದೆ. ಇನ್ನು ನಗರದ ಕೊಳಚೆಪ್ರದೇಶಗಳ ಜನರ ಗೋಳನ್ನು ಕೇಳುವವರೇ ಇಲ್ಲ ಎಂಬಂತಾಗಿದೆ. ಜಿಲ್ಲೆಯಲ್ಲಿ ಪ್ರವಾಸೋದ್ಯಮ ಬೆಳವಣಿಗೆಗೆ ಸಾಕಷ್ಟು ಅವಕಾಶಗಳಿದ್ದರೂ ಅದನ್ನು ಬಳಸಿಕೊಳ್ಳದೇ ಇರುವುದು ಸಹ ಜಿಲ್ಲೆಯ ಮಟ್ಟಿಗೆ ಪ್ರಮುಖ ಹಿನ್ನಡೆಯಾಗಿದೆ.  ಹೀಗಾಗಿ ಕಲಬುರಗಿ ನಗರಕ್ಕೆ ಮೂಲಸೌಕರ್ಯ ಕಲ್ಪಿಸಲು ಒಂದು ಪ್ರತ್ಯೇಕ ಪ್ಯಾಕೇಜ್ ಘೋಷಿಸಬೇಕು ಎಂಬುದು ಜನತೆಯ ಹಂಬಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT