ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿನಿಯರನ್ನು ಗಮನವಿರಿಸಿಕೊಂಡು ಸುಸಜ್ಜಿತ ಶೌಚಾಲಯಗಳನ್ನು ನಿರ್ಮಿಸಬೇಕು. ಪ್ರಮುಖ ಕಾಲೇಜುಗಳ ಬಳಿ ಇಂದಿರಾ ಕ್ಯಾಂಟೀನ್ ಆರಂಭಿಸಬೇಕುರಬಿಯಾ ಇಪ್ಫತ್ ಗ್ರಂಥಪಾಲಕಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕಲಬುರಗಿ
ಕಲಬುರಗಿ ನಗರದ 50 ವರ್ಷಗಳ ಮುಂದಿನ ಜನಸಂಖ್ಯೆಯನ್ನು ಗಮನದಲ್ಲಿರಿಸಿಕೊಂಡು ಮೆಟ್ರೊ ರೈಲು ಆರಂಭಿಸಲು ಸರ್ವೆ ನಡೆಸಬೇಕು. ಜಿಲ್ಲೆಯಲ್ಲಿ ಆಹಾರ ಸಂಸ್ಕರಣಾ ಘಟಕ ಉದ್ಯೋಗಾಧಾರಿತ ಕೈಗಾರಿಕೆ ಆರಂಭಿಸಬೇಕುಪ್ರೊ. ರಮೇಶ ಲಂಡನಕರ್ ಪ್ರಾಧ್ಯಾಪಕ ಗುಲಬರ್ಗಾ ವಿ.ವಿ.
ಜಿಲ್ಲೆಯಲ್ಲಿ ಕೌಶಲ ವಿಶ್ವವಿದ್ಯಾಲಯ ಆರಂಭಿಸಬೇಕು. ಅಂತರರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ನಿರ್ಮಿಸಬೇಕು. ಎರಡನೇ ವರ್ತುಲ ರಸ್ತೆಗೆ ಹಣ ನಿಗದಿಪಡಿಸಬೇಕುಸುನೀಲ ಕುಲಕರ್ಣಿ ಅಧ್ಯಕ್ಷ ಕಲ್ಯಾಣ ಕರ್ನಾಟಕ ಗ್ರಾಹಕ ವೇದಿಕೆ
ಕಲ್ಯಾಣ ಕರ್ನಾಟಕದಲ್ಲಿ ಚಿತ್ರಕಲಾವಿದರು ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ಅವರಿಗೆ ಉತ್ತೇಜನ ನೀಡಲು ಕಲಾಗ್ಯಾಲರಿ ಆರಂಭಿಸಬೇಕು. ಎಸ್.ಎಂ. ಪಂಡಿತ್ ರಂಗಮಂದಿರವನ್ನು ಅಭಿವೃದ್ಧಿಪಡಿಸಬೇಕುಅಶೋಕ ನೆಲ್ಲಗಿ ಚಿತ್ರಕಲಾವಿದ ಕಲಬುರಗಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.