<p><strong>ಸೇಡಂ (ಕಲಬುರ್ಗಿ):</strong> ತಾಲ್ಲೂಕಿನ ಕಾಗಿಣಾ ನದಿ ನೀರಿನ ಪ್ರವಾಹ ಮುಂದುವರಿದಿದ್ದು ಲಾಹೋಡ್, ಯಡ್ಡಳ್ಳಿ, ತೆಲ್ಕೂರ, ಸಟಪಟನಹಳ್ಳಿ, ಬಿಬ್ಬಳ್ಳಿ, ಮೀನಹಾಬಾಳ, ಬೀರನಳ್ಳಿ, ಸಂಗಾವಿ, ಮಳಖೇಡ ಗ್ರಾಮಗಳಲ್ಲಿನ ಮನೆಗಳಿಗೆ ನೀರು ನುಗ್ಗಿದೆ.</p>.<p>ಮಳೆಯ ಮ ಪ್ರಮಾಣ ಕಡಿಮೆಯಿದ್ದರೂ ಬೆಣ್ಣೆತೊರಾ, ಚಂದ್ರಂಪಳ್ಳಿಯ ನೀರು ನದಿಗೆ ಬಿಟ್ಟಿದ್ದರಿಂದ ನದಿ ಪ್ರವಾಹ ಹೆಚ್ಚಾಗಿದೆ.</p>.<p>ಮಳಖೇಡ ಸೇತುವೆ ಮೇಲೆ ಸುಮಾರು 10-12 ಅಡಿ ಎತ್ತರದಲ್ಲಿ ನೀರು ತನ್ನ ಆರ್ಭಟ ಮುಂದುವರೆಸುತ್ತಿದೆ. ಇದರಿಂದಾಗಿ ಮಳಖೇಡನ ಕೋಲಿವಾಡ ಬಡಾವಣೆಯ ಮನೆಗಳು ನೀರು ನುಗ್ಗಿದೆ. ಸಟಪಟನಹಳ್ಳಿ ಗ್ರಾಮದ ಮನೆಗಳಿಗೆ ನೀರು ನುಗ್ಗಿದೆ. ಮಳಖೇಡ ದರ್ಗಾದ ಪ್ರದೇಶದಲ್ಲಿ ನೀರಿನ ಪ್ರವಾಹ ಹೆಚ್ಚಿದ್ದರಿಂದ ಜನರಿಗೆ ಸುರಕ್ಷತೆ ಇಲ್ಲದಂತಾಗಿದೆ.</p>.<p>ಮಳಖೇಡ ರಾಜಶ್ರೀ ಸಿಮೆಂಟ್ ಕಾರ್ಖಾನೆಯ ವತಿಯಿಂದ ಮಳಖೇಡ ದರ್ಗಾ ಕಾಲೊನಿ ನಿವಾಸಿಗಳಿಗೆ ಜಮಖಾನೆ, ಊಟದ ವ್ಯವಸ್ಥೆ, ಮಾಸ್ಕ್ ವಿತರಿಸಲಾಯಿತು.</p>.<p><strong>ಎರಡನೇ ದಿನವೂ ಮಳಖೇಡ ಸೇತುವೆ ಬಂದ್:</strong> ಜಿಲ್ಲೆಯಿಂದ ತಾಲ್ಲೂಕಿಗೆ ಸಂಪರ್ಕಿಸುವ ಮಳಖೇಡ ಸೇತುವೆ ಹಾಗೂ ಚಿತ್ತಾಪುರ ಸಂಪರ್ಕಿಸುವ ಮಾರ್ಗ ಕಡಿತಗೊಂಡಿದೆ. ಇದರಿಂದಾಗಿ ಜಿಲ್ಲೆಯಿಂದ ತಾಲ್ಲೂಕಿನ ಸಂಪರ್ಕ ಕಡಿತಗೊಂಡಿದೆ.<br /><br /><strong>37 ಜನರ ರಕ್ಷಣೆ: </strong>ತಾಲ್ಲೂಕಿನ ಮಳಖೇಡ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಸಿಲುಕಿದ್ದ 7 ಜನರನ್ನು ಹಾಗೂ ತೆಲ್ಕೂರ ಗ್ರಾಮದ ಹೊರಗಡೆ ಸಿಲುಕಿದ್ದ 30 ಮೀನುಗಾರರನ್ನು ರಾತ್ರಿ ಎನ್ ಡಿ ಆರ್ ಎಫ್ ತಂಡ ರಕ್ಷಿಸಿದೆ. ತಹಶೀಲ್ದಾರ್ ಬಸವರಾಜ ಬೆಣ್ಣೆಶಿರೂರ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸೇಡಂ (ಕಲಬುರ್ಗಿ):</strong> ತಾಲ್ಲೂಕಿನ ಕಾಗಿಣಾ ನದಿ ನೀರಿನ ಪ್ರವಾಹ ಮುಂದುವರಿದಿದ್ದು ಲಾಹೋಡ್, ಯಡ್ಡಳ್ಳಿ, ತೆಲ್ಕೂರ, ಸಟಪಟನಹಳ್ಳಿ, ಬಿಬ್ಬಳ್ಳಿ, ಮೀನಹಾಬಾಳ, ಬೀರನಳ್ಳಿ, ಸಂಗಾವಿ, ಮಳಖೇಡ ಗ್ರಾಮಗಳಲ್ಲಿನ ಮನೆಗಳಿಗೆ ನೀರು ನುಗ್ಗಿದೆ.</p>.<p>ಮಳೆಯ ಮ ಪ್ರಮಾಣ ಕಡಿಮೆಯಿದ್ದರೂ ಬೆಣ್ಣೆತೊರಾ, ಚಂದ್ರಂಪಳ್ಳಿಯ ನೀರು ನದಿಗೆ ಬಿಟ್ಟಿದ್ದರಿಂದ ನದಿ ಪ್ರವಾಹ ಹೆಚ್ಚಾಗಿದೆ.</p>.<p>ಮಳಖೇಡ ಸೇತುವೆ ಮೇಲೆ ಸುಮಾರು 10-12 ಅಡಿ ಎತ್ತರದಲ್ಲಿ ನೀರು ತನ್ನ ಆರ್ಭಟ ಮುಂದುವರೆಸುತ್ತಿದೆ. ಇದರಿಂದಾಗಿ ಮಳಖೇಡನ ಕೋಲಿವಾಡ ಬಡಾವಣೆಯ ಮನೆಗಳು ನೀರು ನುಗ್ಗಿದೆ. ಸಟಪಟನಹಳ್ಳಿ ಗ್ರಾಮದ ಮನೆಗಳಿಗೆ ನೀರು ನುಗ್ಗಿದೆ. ಮಳಖೇಡ ದರ್ಗಾದ ಪ್ರದೇಶದಲ್ಲಿ ನೀರಿನ ಪ್ರವಾಹ ಹೆಚ್ಚಿದ್ದರಿಂದ ಜನರಿಗೆ ಸುರಕ್ಷತೆ ಇಲ್ಲದಂತಾಗಿದೆ.</p>.<p>ಮಳಖೇಡ ರಾಜಶ್ರೀ ಸಿಮೆಂಟ್ ಕಾರ್ಖಾನೆಯ ವತಿಯಿಂದ ಮಳಖೇಡ ದರ್ಗಾ ಕಾಲೊನಿ ನಿವಾಸಿಗಳಿಗೆ ಜಮಖಾನೆ, ಊಟದ ವ್ಯವಸ್ಥೆ, ಮಾಸ್ಕ್ ವಿತರಿಸಲಾಯಿತು.</p>.<p><strong>ಎರಡನೇ ದಿನವೂ ಮಳಖೇಡ ಸೇತುವೆ ಬಂದ್:</strong> ಜಿಲ್ಲೆಯಿಂದ ತಾಲ್ಲೂಕಿಗೆ ಸಂಪರ್ಕಿಸುವ ಮಳಖೇಡ ಸೇತುವೆ ಹಾಗೂ ಚಿತ್ತಾಪುರ ಸಂಪರ್ಕಿಸುವ ಮಾರ್ಗ ಕಡಿತಗೊಂಡಿದೆ. ಇದರಿಂದಾಗಿ ಜಿಲ್ಲೆಯಿಂದ ತಾಲ್ಲೂಕಿನ ಸಂಪರ್ಕ ಕಡಿತಗೊಂಡಿದೆ.<br /><br /><strong>37 ಜನರ ರಕ್ಷಣೆ: </strong>ತಾಲ್ಲೂಕಿನ ಮಳಖೇಡ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಸಿಲುಕಿದ್ದ 7 ಜನರನ್ನು ಹಾಗೂ ತೆಲ್ಕೂರ ಗ್ರಾಮದ ಹೊರಗಡೆ ಸಿಲುಕಿದ್ದ 30 ಮೀನುಗಾರರನ್ನು ರಾತ್ರಿ ಎನ್ ಡಿ ಆರ್ ಎಫ್ ತಂಡ ರಕ್ಷಿಸಿದೆ. ತಹಶೀಲ್ದಾರ್ ಬಸವರಾಜ ಬೆಣ್ಣೆಶಿರೂರ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>