<p>ಕಾಳಗಿ: ತಾಲ್ಲೂಕಿನ ಕೋರವಾರ ಗ್ರಾಮ ಪಂಚಾಯಿತಿಯಲ್ಲಿ ತಾಲ್ಲೂಕು ಆಡಳಿತದಿಂದ ಶುಕ್ರವಾರ ಪಿಂಚಣಿ ಮತ್ತು ಪೌತಿ ಅದಾಲತ್ ನಡೆಯಿತು.</p>.<p>ತಹಶೀಲ್ದಾರ್ ಘಮಾವತಿ ರಾಠೋಡ ಅಧ್ಯಕ್ಷತೆಯಲ್ಲಿ ನಡೆದ ಅದಾಲತ್ನಲ್ಲಿ ಜನರಿಂದ ಎಸ್.ಎಸ್.ವೈ ಪಿಂಚಣಿ ಯೋಜನೆಯ 3, ವೃದ್ಧಾಪ್ಯ ವೇತನದ 4 ಅರ್ಜಿಗಳು ಮತ್ತು ಪಹಣಿ ತಿದ್ದುಪಡಿಯ 6, ಪೌತಿ ವಿರಾಸತ್ನ 6 ಅರ್ಜಿಗಳು ಸಲ್ಲಿಕೆಯಾದವು.</p>.<p>ಕಂದಾಯ ನಿರೀಕ್ಷಕ ಮಂಜುನಾಥ ಮಹಾರುದ್ರ, ಗ್ರಾಮ ಆಡಳಿತಾಧಿಕಾರಿ ಸಿದ್ದಲಿಂಗ ಕ್ಷೇಮಶೆಟ್ಟಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಲ್ಕಮ್ಮ ಮೇಲಕೇರಿ, ಪಿಡಿಒ ಶರ್ಪೊದ್ದಿನ್ ವೇದಿಕೆಯಲ್ಲಿದ್ದರು.</p>.<p>ಕೋಡ್ಲಿ ಹೋಬಳಿಯ ರಟಕಲ್ ಗ್ರಾಮದಲ್ಲಿ ಜರುಗಿದ ಅದಾಲತ್ನಲ್ಲಿ ಒಟ್ಟು 20 ಅರ್ಜಿ ಸ್ವೀಕೃತವಾಗಿವೆ. ಪಿಂಚಣಿ ಅರ್ಜಿ 2, ಸ್ಥಗಿತಗೊಂಡ ಪಿಂಚಣಿ ಅರ್ಜಿ 11, ಪೌತಿ ಅರ್ಜಿ 1 ಮತ್ತು ಇತರೆ ಅರ್ಜಿ 6 ಸಲ್ಲಿಕೆ. ಈ ಪೈಕಿ 2 ಪಿಂಚಣಿ ಅರ್ಜಿ ವಿಲೇವಾರಿ ಮಾಡಲಾಗಿದೆ.</p>.<p>ಪಸ್ತಾಪುರ ಗ್ರಾಮದಲ್ಲಿ ಗುರುವಾರ ಜರುಗಿದ ಅದಾಲತ್ದಲ್ಲಿ 3 ಅರ್ಜಿ ಸ್ವೀಕೃತಗೊಂಡಿದ್ದು, ಇವೆ ಸ್ಥಗಿತಗೊಂಡ ಪಿಂಚಣಿಯ ಅರ್ಜಿಗಳಾಗಿವೆ. ಈ ಎಲ್ಲವನ್ನೂ ವಿಲೇವಾರಿ ಮಾಡಲಾಗಿದೆ ಎಂದು ಕೋಡ್ಲಿ ಹೋಬಳಿ ಕಂದಾಯ ನಿರೀಕ್ಷಕ ಬಸವಣಪ್ಪ ಹೂಗಾರ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕಾಳಗಿ: ತಾಲ್ಲೂಕಿನ ಕೋರವಾರ ಗ್ರಾಮ ಪಂಚಾಯಿತಿಯಲ್ಲಿ ತಾಲ್ಲೂಕು ಆಡಳಿತದಿಂದ ಶುಕ್ರವಾರ ಪಿಂಚಣಿ ಮತ್ತು ಪೌತಿ ಅದಾಲತ್ ನಡೆಯಿತು.</p>.<p>ತಹಶೀಲ್ದಾರ್ ಘಮಾವತಿ ರಾಠೋಡ ಅಧ್ಯಕ್ಷತೆಯಲ್ಲಿ ನಡೆದ ಅದಾಲತ್ನಲ್ಲಿ ಜನರಿಂದ ಎಸ್.ಎಸ್.ವೈ ಪಿಂಚಣಿ ಯೋಜನೆಯ 3, ವೃದ್ಧಾಪ್ಯ ವೇತನದ 4 ಅರ್ಜಿಗಳು ಮತ್ತು ಪಹಣಿ ತಿದ್ದುಪಡಿಯ 6, ಪೌತಿ ವಿರಾಸತ್ನ 6 ಅರ್ಜಿಗಳು ಸಲ್ಲಿಕೆಯಾದವು.</p>.<p>ಕಂದಾಯ ನಿರೀಕ್ಷಕ ಮಂಜುನಾಥ ಮಹಾರುದ್ರ, ಗ್ರಾಮ ಆಡಳಿತಾಧಿಕಾರಿ ಸಿದ್ದಲಿಂಗ ಕ್ಷೇಮಶೆಟ್ಟಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಲ್ಕಮ್ಮ ಮೇಲಕೇರಿ, ಪಿಡಿಒ ಶರ್ಪೊದ್ದಿನ್ ವೇದಿಕೆಯಲ್ಲಿದ್ದರು.</p>.<p>ಕೋಡ್ಲಿ ಹೋಬಳಿಯ ರಟಕಲ್ ಗ್ರಾಮದಲ್ಲಿ ಜರುಗಿದ ಅದಾಲತ್ನಲ್ಲಿ ಒಟ್ಟು 20 ಅರ್ಜಿ ಸ್ವೀಕೃತವಾಗಿವೆ. ಪಿಂಚಣಿ ಅರ್ಜಿ 2, ಸ್ಥಗಿತಗೊಂಡ ಪಿಂಚಣಿ ಅರ್ಜಿ 11, ಪೌತಿ ಅರ್ಜಿ 1 ಮತ್ತು ಇತರೆ ಅರ್ಜಿ 6 ಸಲ್ಲಿಕೆ. ಈ ಪೈಕಿ 2 ಪಿಂಚಣಿ ಅರ್ಜಿ ವಿಲೇವಾರಿ ಮಾಡಲಾಗಿದೆ.</p>.<p>ಪಸ್ತಾಪುರ ಗ್ರಾಮದಲ್ಲಿ ಗುರುವಾರ ಜರುಗಿದ ಅದಾಲತ್ದಲ್ಲಿ 3 ಅರ್ಜಿ ಸ್ವೀಕೃತಗೊಂಡಿದ್ದು, ಇವೆ ಸ್ಥಗಿತಗೊಂಡ ಪಿಂಚಣಿಯ ಅರ್ಜಿಗಳಾಗಿವೆ. ಈ ಎಲ್ಲವನ್ನೂ ವಿಲೇವಾರಿ ಮಾಡಲಾಗಿದೆ ಎಂದು ಕೋಡ್ಲಿ ಹೋಬಳಿ ಕಂದಾಯ ನಿರೀಕ್ಷಕ ಬಸವಣಪ್ಪ ಹೂಗಾರ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>