ಇಡ್ಲಿ, ದೋಸೆ, ಪಲಾವ್, ಪೂರಿ, ಸಾಂಬಾರ್ ಮಾಡುವ ತರಕಾರಿ, ಮಾಂಸಾಹಾರದ ಪದಾರ್ಥಗಳು ಮುಂತಾದವುಗಳನ್ನು ರಾತ್ರಿಯೇ ಸಿದ್ಧಪಡಿಸಿ ಇಟ್ಟುಕೊಂಡಿರುತ್ತೇವೆ. ಆದರೆ, ಸೋಮವಾರ ರಾತ್ರಿ 12ರಿಂದ ಲಾಕ್ ಡೌನ್ ಘೋಷಿಸಿದ್ದಾರೆ. ಇದರಿಂದ ಸಿದ್ಧಪಡಿಸಿಕೊಂಡ ತಿಂಡಿಗಳೆಲ್ಲ ವ್ಯರ್ಥವಾಗುತ್ತಿವೆ ಎಂದು ವ್ಯಾಪಾರಿಗಳು ದೂರಿದರು.