ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ್ ಖರ್ಗೆ ಅವರು ಪ್ರತಿನಿಧಿಸುವ ಚಿತ್ತಾಪುರ ಕ್ಷೇತ್ರದಿಂದ ಕಾಂಗ್ರೆಸ್ಗೆ 80,756 ಮತಗಳು ಬಂದಿದ್ದು, 16,340 ಮತಗಳ ಲೀಡ್ ಪಡೆದಿದ್ದಾರೆ. ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ ಅವರ ಸೇಡಂ ಕ್ಷೇತ್ರದಿಂದ 9,207 ಮತಗಳ ಲೀಡ್ ರಾಧಾಕೃಷ್ಣ ಅವರಿಗೆ ಬಂದಿವೆ. ಬಿಜೆಪಿ ಶಾಸಕ ಬಸವರಾಜ ಮತ್ತಿಮಡು ಅವರ ಕಲಬುರಗಿ ಗ್ರಾಮೀಣ ಕ್ಷೇತ್ರದಲ್ಲಿ 2,077 ಮತಗಳು ಕಾಂಗ್ರೆಸ್ ಪಾಲಾದವು. ಹೀಗಾಗಿ, ರಾಧಾಕೃಷ್ಣ ಅವರ ಗೆಲುವಿನ ಹಾದಿ ಸುಲಭವಾಯಿತು.