<p><strong>ಚಿಂಚೋಳಿ</strong>: ಜಾನುವಾರುಗಳನ್ನು ಬಾಧಿಸುತ್ತಿರುವ ಲಂಪಿಸ್ಕಿನ್ ಕಾಯಿಲೆ ಕರ್ನಾಟಕ– ತೆಲಂಗಾಣ ಗಡಿಯಲ್ಲಿ ರೈತರನ್ನು ಬೆಚ್ಚಿ ಬೀಳಿಸುತ್ತಿದೆ. ಗಡಿ ನಾಡಿನಲ್ಲಿ ಶೇ 25ರಷ್ಟು ಜಾನುವಾರುಗಳಲ್ಲಿ ಹಾಗೂ ಉಳಿದ ಕಡೆಗಳಲ್ಲಿ ಶೇ 5 ರಷ್ಟು ಜಾನುವಾರುಗಳಲ್ಲಿ ಲಂಪಿಸ್ಕಿನ್ ಬಾಧಿಸುತ್ತಿದೆ.</p>.<p>‘ನಮಗೆ ಪ್ರತಿನಿತ್ಯ ಗಡಿ ಭಾಗದ ರೈತರಿಂದ ನೂರಾರು ಕರೆಗಳು ಬರುತ್ತಿವೆ. ಅವರ ಜಾನುವಾರುಗಳನ್ನು ಉಳಿಸಿಕೊಳ್ಳಲು ಸರ್ಕಾರದಿಂದ ಸೂಕ್ತ ಔಷಧ ಇನ್ನೂ ಸಂಶೋಧನೆಯಾಗದಿರುವುದರಿಂದ ಲಕ್ಷಣ ಆಧರಿಸಿ ಚಿಕಿತ್ಸೆ ನೀಡಲಾಗುತ್ತಿದೆ’ ಎಂದು ಪಶು ಪಾಲನಾ ಇಲಾಖೆಯ ಸಹಾಯಕ ನಿರ್ದೆಶಕ ಡಾ.ಧನರಾಜ ಬೊಮ್ಮಾ ತಿಳಿಸಿದರು.</p>.<p>ತಾಲ್ಲೂಕಿನ ವೆಂಕಟಾಪುರ, ಸಂಗಾಪುರ, ಜಿಲವರ್ಷಾ, ಲಕ್ಷ್ಮಾಸಾಗರ, ಶಿವರಾಂಪುರ, ಶಿವರೆಡ್ಡಿಪಳ್ಳಿ, ಮೊಗದಂಪುರ, ಕುಂಚಾವರಂ, ಶಾದಿಪುರ, ಚಿಕ್ಕಲಿಂಗದಳ್ಳಿ, ಕುಸ್ರಂಪಳ್ಳಿ, ನಾಗಾಈದಲಾಯಿ ತಾಂಡಾ, ಮಿರಿಯಾಣ, ಕಲ್ಲೂರು ರೋಡ್, ಕಿಷ್ಟಾಪುರ, ಭೈರಂಪಳ್ಳಿ ಮತ್ತು ಜಟ್ಟೂರು, ಪೊತಂಗಲ್, ಹಲಕೋಡಾ ಮೊದಲಾದ ಕಡೆಗಳಲ್ಲಿ ರೋಗ ಉಲ್ಬಣಿಸುತ್ತಿದೆ.</p>.<p>ಉಳಿದ ಕಡೆಗಳಲ್ಲಿ ರೋಗ ಪತ್ತೆಯಾಗಿದ್ದು ಅಸ್ವಸ್ಥ ಜಾನುವಾರುಗಳನ್ನು ಇತರ ಜಾನುವಾರುಗಳಿಂದ ಬೇರ್ಪಡಿಸಿ ಪ್ರತ್ಯೇಕವಾಗಿರಿಸಲು ಪಶುವೈದ್ಯರು ಸಲಹೆ ನೀಡುತ್ತಿದ್ದಾರೆ. ಆದರೆ ಸ್ಥಳದ ಅಭಾವದಿಂದ ರೈತರಿಗೆ ಇದು ಸಾಧ್ಯವಾಗದಂತಾಗಿದೆ.</p>.<p class="Subhead"><strong>ಮನವಿ:</strong> ಲಂಪಿಸ್ಕಿನ್ ಕಾಯಿಲೆಗೆ ಔಷಧವಿಲ್ಲ. ಆದರೆ ಜಾನುವಾರುಗಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಔಷಧವನ್ನು ಪಶು ಆಸ್ಪತ್ರೆ ಮತ್ತು ಪಶು ಚಿಕಿತ್ಸಾಲಯಗಳಿಗೆ ಸರ್ಕಾರ ಪೂರೈಸಬೇಕು ಎಂದು ಜಿಲ್ಲಾ ಪಂಚಾಯಿತಿಯ ಮಾಜಿ ಸದಸ್ಯ ಜಗಜೀವನರೆಡ್ಡಿ ಪಾಟೀಲ ಮಿರಿಯಾಣ ಮನವಿ ಮಾಡಿದ್ದಾರೆ.</p>.<p>ಲಂಪಿಸ್ಕಿನ್ ಕಾಯಿಲೆಯಿಂದ ಬಳಲುತ್ತಿರುವ ಜಾನುವಾರುಗಳ ಹಾಗೂ ರೈತರ ಗೋಳು ಕೇಳುವವರೇ ಇಲ್ಲದಂತಾಗಿದೆ. ಸರ್ಕಾರ ತಕ್ಷಣ ರೈತರ ನೆರವಿಗೆ ಧಾವಿಸಬೇಕೆಂದು ಮುಖಂಡ ರವಿ ಜಾಧವ ಒತ್ತಾಯಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಂಚೋಳಿ</strong>: ಜಾನುವಾರುಗಳನ್ನು ಬಾಧಿಸುತ್ತಿರುವ ಲಂಪಿಸ್ಕಿನ್ ಕಾಯಿಲೆ ಕರ್ನಾಟಕ– ತೆಲಂಗಾಣ ಗಡಿಯಲ್ಲಿ ರೈತರನ್ನು ಬೆಚ್ಚಿ ಬೀಳಿಸುತ್ತಿದೆ. ಗಡಿ ನಾಡಿನಲ್ಲಿ ಶೇ 25ರಷ್ಟು ಜಾನುವಾರುಗಳಲ್ಲಿ ಹಾಗೂ ಉಳಿದ ಕಡೆಗಳಲ್ಲಿ ಶೇ 5 ರಷ್ಟು ಜಾನುವಾರುಗಳಲ್ಲಿ ಲಂಪಿಸ್ಕಿನ್ ಬಾಧಿಸುತ್ತಿದೆ.</p>.<p>‘ನಮಗೆ ಪ್ರತಿನಿತ್ಯ ಗಡಿ ಭಾಗದ ರೈತರಿಂದ ನೂರಾರು ಕರೆಗಳು ಬರುತ್ತಿವೆ. ಅವರ ಜಾನುವಾರುಗಳನ್ನು ಉಳಿಸಿಕೊಳ್ಳಲು ಸರ್ಕಾರದಿಂದ ಸೂಕ್ತ ಔಷಧ ಇನ್ನೂ ಸಂಶೋಧನೆಯಾಗದಿರುವುದರಿಂದ ಲಕ್ಷಣ ಆಧರಿಸಿ ಚಿಕಿತ್ಸೆ ನೀಡಲಾಗುತ್ತಿದೆ’ ಎಂದು ಪಶು ಪಾಲನಾ ಇಲಾಖೆಯ ಸಹಾಯಕ ನಿರ್ದೆಶಕ ಡಾ.ಧನರಾಜ ಬೊಮ್ಮಾ ತಿಳಿಸಿದರು.</p>.<p>ತಾಲ್ಲೂಕಿನ ವೆಂಕಟಾಪುರ, ಸಂಗಾಪುರ, ಜಿಲವರ್ಷಾ, ಲಕ್ಷ್ಮಾಸಾಗರ, ಶಿವರಾಂಪುರ, ಶಿವರೆಡ್ಡಿಪಳ್ಳಿ, ಮೊಗದಂಪುರ, ಕುಂಚಾವರಂ, ಶಾದಿಪುರ, ಚಿಕ್ಕಲಿಂಗದಳ್ಳಿ, ಕುಸ್ರಂಪಳ್ಳಿ, ನಾಗಾಈದಲಾಯಿ ತಾಂಡಾ, ಮಿರಿಯಾಣ, ಕಲ್ಲೂರು ರೋಡ್, ಕಿಷ್ಟಾಪುರ, ಭೈರಂಪಳ್ಳಿ ಮತ್ತು ಜಟ್ಟೂರು, ಪೊತಂಗಲ್, ಹಲಕೋಡಾ ಮೊದಲಾದ ಕಡೆಗಳಲ್ಲಿ ರೋಗ ಉಲ್ಬಣಿಸುತ್ತಿದೆ.</p>.<p>ಉಳಿದ ಕಡೆಗಳಲ್ಲಿ ರೋಗ ಪತ್ತೆಯಾಗಿದ್ದು ಅಸ್ವಸ್ಥ ಜಾನುವಾರುಗಳನ್ನು ಇತರ ಜಾನುವಾರುಗಳಿಂದ ಬೇರ್ಪಡಿಸಿ ಪ್ರತ್ಯೇಕವಾಗಿರಿಸಲು ಪಶುವೈದ್ಯರು ಸಲಹೆ ನೀಡುತ್ತಿದ್ದಾರೆ. ಆದರೆ ಸ್ಥಳದ ಅಭಾವದಿಂದ ರೈತರಿಗೆ ಇದು ಸಾಧ್ಯವಾಗದಂತಾಗಿದೆ.</p>.<p class="Subhead"><strong>ಮನವಿ:</strong> ಲಂಪಿಸ್ಕಿನ್ ಕಾಯಿಲೆಗೆ ಔಷಧವಿಲ್ಲ. ಆದರೆ ಜಾನುವಾರುಗಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಔಷಧವನ್ನು ಪಶು ಆಸ್ಪತ್ರೆ ಮತ್ತು ಪಶು ಚಿಕಿತ್ಸಾಲಯಗಳಿಗೆ ಸರ್ಕಾರ ಪೂರೈಸಬೇಕು ಎಂದು ಜಿಲ್ಲಾ ಪಂಚಾಯಿತಿಯ ಮಾಜಿ ಸದಸ್ಯ ಜಗಜೀವನರೆಡ್ಡಿ ಪಾಟೀಲ ಮಿರಿಯಾಣ ಮನವಿ ಮಾಡಿದ್ದಾರೆ.</p>.<p>ಲಂಪಿಸ್ಕಿನ್ ಕಾಯಿಲೆಯಿಂದ ಬಳಲುತ್ತಿರುವ ಜಾನುವಾರುಗಳ ಹಾಗೂ ರೈತರ ಗೋಳು ಕೇಳುವವರೇ ಇಲ್ಲದಂತಾಗಿದೆ. ಸರ್ಕಾರ ತಕ್ಷಣ ರೈತರ ನೆರವಿಗೆ ಧಾವಿಸಬೇಕೆಂದು ಮುಖಂಡ ರವಿ ಜಾಧವ ಒತ್ತಾಯಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>